Site icon Vistara News

Young man drowned | ಶರಾವತಿ ಹಿನ್ನೀರಿನಲ್ಲಿ ಸ್ನೇಹಿತನ ಬರ್ತ್‌ಡೇ ಪಾರ್ಟಿಗೆ ಹೋದ ಯುವಕ ನೀರುಪಾಲು

ಶರಾವತಿ ಹಿನ್ನೀರಿನಲ್ಲಿ ಯುವಕ ಸಾವು

ಶಿವಮೊಗ್ಗ: ಶರಾವತಿ ನದಿ ಹಿನ್ನೀರಿನಲ್ಲಿ ಸ್ನೇಹಿತನ ಬರ್ತ್‌ ಡೇ ಪಾರ್ಟಿಗೆ ಹೋಗಿದ್ದ ಯುವಕನೊಬ್ಬ ನೀರು ಪಾಲಾಗಿದ್ದಾನೆ (Young man drowned). ಜೋಗದ ನಿವಾಸಿ ಮನೋಜ್ ಕುಮಾರ್(33) ಮೃತ ದುರ್ದೈವಿ.

ಸಾಗರದ ಮುಪ್ಪಾಣಿ ರಂಗೋಲಿಕೋಣೆಯಲ್ಲಿರುವ ಶರಾವತಿ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ. ವಿನೋದ್‌ ಕುಮಾರ್‌ ಇತರ ಎಂಟು ಮಂದಿ ಸ್ನೇಹಿತರ ಜತೆ ಶರಾವತಿ ಹಿನ್ನೀರಿನಲ್ಲಿ ಗೆಳೆಯನೊಬ್ಬನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಆಗ ಹಿನ್ನೀರಿನಲ್ಲಿ ಸಂಭವಿಸಿದ ದುರಂತದಲ್ಲಿ ಮನೋಜ್ ಕುಮಾರ್‌ ಮೃತಪಟ್ಟಿದ್ದಾರೆ. ಸೊರಬ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆದು ಶವವನ್ನು ಮೇಲೆತ್ತಲಾಗಿದೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಸಂತೂರ್ ಸಾಮ್ರಾಟ ಶಿವಕುಮಾರ್ ಶರ್ಮಾ: ಮಾಧುರ್ಯಕ್ಕೆ ಇನ್ನೊಂದು ಹೆಸರು!

Exit mobile version