Site icon Vistara News

ಮದುವೆ ಆಗುತ್ತೇನೆ ಎಂದವಳು ಧರ್ಮಸ್ಥಳದಲ್ಲಿ ಕೈ ಕೊಟ್ಟಳು!

charan

ಬೆಂಗಳೂರು: ಪ್ರೀತಿಸಿದವಳು‌ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಮುಂಡೇಶ್ವರಿ ಲೇಔಟ್‌ ನಿವಾಸಿ ಚರಣ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ.

ಯುವಕ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯನ್ನು ಪ್ರೀತಿಸಿದ್ದ. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರರಿಂದ ಏರ್ಪಡಿದ್ದ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಹೀಗಾಗಿ ಯುವತಿ ಮದುವೆಯಾಗುವುದಾಗಿ ಒಪ್ಪಿಗೆ ನೀಡಿದ್ದರಿಂದ ಇಬ್ಬರೂ ಧರ್ಮಸ್ಥಳಕ್ಕೆ ತೆರಳಿದ್ದರು. ಆದರೆ ಅಲ್ಲಿ ಯುವತಿ ಮದುವೆಯಾಗಲು ನಿರಾಕರಿಸಿದ್ದಳು.

ಎಷ್ಟೇ ಕೇಳಿದರೂ ಮದುವೆಯಾಗುವುದಿಲ್ಲವೆಂದು ಹೇಳಿ ಯುವತಿ ಹೊರಟುಹೋಗಿದ್ದರಿಂದ ನೊಂದ ಯುವಕ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆಯೂ ರೈಲ್ವೆ ಟ್ರಾಕ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಸ್ನೇಹಿತರು ಬಚಾವ್‌ ಮಾಡಿದ್ದಾರು.

ಕಳೆದ ವರ್ಷ ಚರಣ್ ಸಹೋದರಿ ಕೂಡ ಪ್ರೀತಿ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ಈಗ ಚರಣ್ ಕೂಡ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಸ್ಥಳಕ್ಕೆ ವಿದ್ಯಾರಣ್ಯಪುರ ಪೊಲೀಸರು ಭೇಟಿ ಪರಿಶೀಲನೆ ಪರಿಶಿಲನೆ ನಡೆಸಿದ್ದಾರೆ.

ಇದನ್ನೂ ಓದಿ | Beware of Credit Card | ಹೆಚ್ಚಾಯ್ತು ಕ್ರೆಡಿಟ್‌ ಕಾರ್ಡ್‌ ರಿಕವರಿಮೆನ್ ಹಾವಳಿ, ನಟನಿಗೆ ಕಿರುಕುಳ

Exit mobile version