Site icon Vistara News

Youth drowned | ಆಕಳ ಮೈ ತೊಳೆಯಲು ಕೆರೆಗೆ ಬಂದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು: ಆಕಳೇ ಸೆಳೆಯಿತೇ ನೀರಿಗೆ?

Shivamogga death

ಶಿವಮೊಗ್ಗ: ಆಕಳನ್ನು ತೊಳೆಯಲೆಂದು ಕೆರೆಗೆ ಬಂದಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ (Youth drowned) ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸೊರಬದ ನೆಗವಾಡಿಯಲ್ಲಿ ದುರಂತ ಸಂಭವಿಸಿದ್ದು, ಮೃತಪಟ್ಟವರನ್ನು ನೆಗವಾಡಿಯ ಉಮೇಶ್ ಬಿ(48) ಎಂದು ಗುರುತಿಸಲಾಗಿದೆ.

ಉಮೇಶ್‌ ಅವರು ಭಾರಿ ಬಿಸಿಲಿರುವ ಹಿನ್ನೆಲೆಯಲ್ಲಿ ಆಕಳ ಮೈ ತೊಳೆಯಲು ದೊಡ್ಡಕೆರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಅವರು ಆಕಳಿನ ಜತೆಗೆ ನೀರಿಗಿಳಿದಾಗ ಮುಳುಗಿ ಪ್ರಾಣ ಕಳೆದುಕೊಂಡರು.

ನಿಜವೆಂದರೆ, ಉಮೇಶ್‌ ಅವರು ಹಗ್ಗದಲ್ಲಿ ಆಕಳನ್ನು ಹಿಡಿದುಕೊಂಡು ಬಂದಿದ್ದು, ಆಕಳು ಹಗ್ಗದ ಸಮೇತ ಅವರನ್ನು ಎಳೆದುಕೊಂಡು ಹೋಗಿದೆ ಎಂದು ಹೇಳಲಾಗಿದೆ. ಉಮೇಶ್‌ ಅವರು ಆಕಳು ನೀರಿಗೆ ಹಾರುವುದನ್ನು ತಪ್ಪಿಸಲು ಹಗ್ಗವನ್ನು ಎಳೆದು ಹಿಡಿದಿದ್ದರು. ಆದರೆ ಆಕಳು ಅವರನ್ನು ಎಳೆದುಕೊಂಡು ಹೋಗಿದೆ. ಈ ಹಂತದಲ್ಲಿ ಅವರಿಗೆ ಹಗ್ಗವನ್ನು ಬಿಡುವುದು ಕೂಡಾ ಸಾಧ್ಯವಾಗಿಲ್ಲ.

ಅಂತಿಮವಾಗಿ ಆಕಳು ಅವರನ್ನು ಎಳೆದುಕೊಂಡು ನೀರಿನ ಮಧ್ಯ ಭಾಗಕ್ಕೆ ಹೋಗಿದೆ. ಅಲ್ಲಿ ಉಮೇಶ್‌ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯನ್ನು ಗಮನಿಸಿದವರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬಂದು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಮೃತದೇಹ ಸಿಕ್ಕಿದೆ.

ಇದನ್ನೂ ಓದಿ | Motivational story: ಯಾವಾಗಲೂ ಸೋಲುತ್ತಿದ್ದ ಅವನು ಆವತ್ತು ಗೆದ್ದೇ ಬಿಟ್ಟ!

Exit mobile version