Site icon Vistara News

Youth drowned: ಸ್ನೇಹಿತರೊಂದಿಗೆ ಈಜಲು ಹೋದ ಸಾಯಿರಾಮ್ ಕಾಲೇಜು ವಿದ್ಯಾರ್ಥಿ ನೀರುಪಾಲು

Sairam College student goes swimming with friends drowned

Sairam College student goes swimming with friends drowned

ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿ ಸಮೀಪದ ಮಾದಪ್ಪನ ದೊಡ್ಡಿ ಕ್ವಾರಿ ಬಳಿ ಈಜಲು ಹೋದ (Youth drowned) ಕಾಲೇಜು ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ನಡೆದಿದೆ. ಕೇರಳ ಮೂಲದ ಯದು (21) ಮೃತ ವಿದ್ಯಾರ್ಥಿ ಆಗಿದ್ದಾನೆ.

ಆನೇಕಲ್ ಸಮೀಪದ ಸಾಯಿರಾಮ್ ಕಾಲೇಜಿನಲ್ಲಿ ಯದು ಪ್ರಥಮ ವರ್ಷದ ಬಿಇ ಮೆಕ್ಯಾನಿಕಲ್ ವ್ಯಾಸಂಗ ಮಾಡುತ್ತಿದ್ದ. ತನ್ನ ನಾಲ್ವರು ಸ್ನೇಹಿತರ ಜತೆ ಈಜಲು ಹೋಗಿದ್ದಾನೆ. ನಾಲ್ವರಲ್ಲಿ ಇಬ್ಬರಿಗೆ ಮಾತ್ರ ಈಜು ಬರುತ್ತಿತ್ತು, ಉಳಿದ ಇಬ್ಬರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Snake bite: ವಾಕಿಂಗ್‌ ಮಾಡಲು ಹೋದವನಿಗೆ ಕಚ್ಚಿದ ನಾಗರ ಹಾವು; ಚುಚ್ಚುಮದ್ದು ಸಿಗದೆ ವ್ಯಕ್ತಿ ಸಾವು

ಈಜು ಬರದಿದ್ದರೂ ಕ್ವಾರಿಯೊಳಗೆ ಈಜಲು ಇಳಿದಿದ್ದ ಇಬ್ಬರಲ್ಲಿ ಯದು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version