Site icon Vistara News

ಕಾಂಗ್ರೆಸ್​​ಗೆ ಮತ್ತಷ್ಟು ಹಿನ್ನಡೆ; ಗುಲಾಂ ನಬಿ ಆಜಾದ್​ ಬೆನ್ನಲ್ಲೇ ಮತ್ತೂ ಐವರು ಪ್ರಮುಖರ ರಾಜೀನಾಮೆ

Ghulam Nabi Azad

Hinduism Much Older Than Islam, Indian Muslims Are A Result Of Conversion; Says Ghulam Nabi Azad

ನವ ದೆಹಲಿ: ಕಾಂಗ್ರೆಸ್​​ಗೆ ಒಂದರ ಬೆನ್ನಿಗೆ ಒಂದರಂತೆ ಹಿನ್ನಡೆಯಾಗುತ್ತಿದೆ. ಗುಲಾಂ ನಬಿ ಆಜಾದ್​​ ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಕಾಂಗ್ರೆಸ್​​ನ ಒಟ್ಟು ಐದು ಮಂದಿ ಪ್ರಮುಖ ನಾಯಕರು/ಮಾಜಿ ಶಾಸಕರು ಪಕ್ಷವನ್ನು ತೊರೆದಿದ್ದಾರೆ. ತಾವು ಗುಲಾಂ ನಬಿ ಆಜಾದ್​ಗೆ ಬೆಂಬಲ ವ್ಯಕ್ತಪಡಿಸಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಗುಲಾಂ ಮೊಹಮ್ಮದ್​ ಸರೋರಿ, ಹಾಜಿ ಅಬ್ದುಲ್​ ರಷೀದ್​, ಮೊಹಮ್ಮದ್​ ಅಮೀನ್​ ಭಟ್​, ಗುಲ್ಜಾರ್​ ಅಹ್ಮದ್​ ವಾನಿ, ಚೌಧರಿ ಅಕ್ರಮ್​ ಮೊಹಮ್ಮದ್​ ಮತ್ತು ಸಲ್ಮಾನ್​ ನಿಜಾಮಿ ಎಂಬುವರು ರಾಜೀನಾಮೆ ಕೊಟ್ಟಿದ್ದು, ಅವರೆಲ್ಲ ಜಮ್ಮು-ಕಾಶ್ಮೀರದ ಕಾಂಗ್ರೆಸ್​​ನಲ್ಲಿ ಪ್ರಮುಖರೇ ಆಗಿದ್ದರು.

ಹಲವು ವರ್ಷಗಳಿಂದಲೂ ಕಾಂಗ್ರೆಸ್​​ನಿಂದ ರೆಬಲ್​ ಆಗಿದ್ದ ಜಿ 23 ಗುಂಪಿನ ಪ್ರಮುಖ ನಾಯಕ ಗುಲಾಂ ನಬಿ ಆಜಾದ್​ ಅಂತಿಮವಾಗಿ ಇಂದು ಕಾಂಗ್ರೆಸ್​​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ‘ರಾಹುಲ್​ ಗಾಂಧಿ ಬಾಲಿಶತನ , ಅಪ್ರಬುದ್ಧತೆಯಿಂದ ಇಡೀ ಪಕ್ಷ ಹಾಳಾಯಿತು. ಆಂತರಿಕ ಚುನಾವಣೆಯಲ್ಲಿ ವಂಚನೆಗಳಾದವು. ಪಕ್ಷದಲ್ಲಿ ಹಿರಿಯರು, ಅನುಭವಿಗಳೆಲ್ಲ ನಿರ್ಲಕ್ಷ್ಯಕ್ಕೆ ಒಳಗಾದರು’ ಎಂದು ಬರೆದಿದ್ದಾರೆ.

ಕಾಂಗ್ರೆಸ್​ ಬಿಟ್ಟಿರುವ ಗುಲಾಂ ನಬಿ ಆಜಾದ್​ ತಾವು ಯಾವುದೇ ಪಕ್ಷಕ್ಕೂ ಸೇರುತ್ತಿಲ್ಲ. ಬದಲಾಗಿ ಜಮ್ಮು-ಕಾಶ್ಮೀರದಲ್ಲಿ ಹೊಸ ರಾಜಕೀಯ ಪಕ್ಷವನ್ನು ಕಟ್ಟುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಅಲ್ಲಿನ ಐವರು ಗುಲಾಂ ನಬಿ ಆಜಾದ್​ಗೆ ಬೆಂಬಲ ಸೂಚಿಸಿ ರಾಜೀನಾಮೆ ಕೊಟ್ಟಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್​ನ ಹಲವು ನಾಯಕರು ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರೆಲ್ಲರಿಗಿಂತ ಗುಲಾಂ ನಬಿ ಆಜಾದ್​ ರಾಜೀನಾಮೆ ಕಾಂಗ್ರೆಸ್​ಗೆ ದೊಡ್ಡ ಪೆಟ್ಟು ಎಂದೇ ಹೇಳಬಹುದು.

ಇದನ್ನೂ ಓದಿ: Ghulam Nabi Azad | ಕಾಂಗ್ರೆಸ್​ ಬಿಟ್ಟು ಜಮ್ಮು ಕಾಶ್ಮೀರಕ್ಕೆ ಹೊರಟ ಆಜಾದ್​; ಹೊಸ ಪಕ್ಷ ರಚನೆಯ ಘೋಷಣೆ

Exit mobile version