Site icon Vistara News

ಪ್ರಧಾನಿ ಮೋದಿ ‘ಅಪಶಕುನ,’ ‘ಜೇಬು ಕಳ್ಳ’ ಎಂದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು

Rahul Gandhi

ನವದೆಹಲಿ: 2023ರ ವಿಶ್ವಕಪ್ ಫೈನಲ್​ನಲ್ಲಿ (ICC World Cup 2023) ಆಸ್ಟ್ರೇಲಿಯಾ ವಿರುದ್ಧ ಭಾರತ (Indian Cricket Team) 6 ವಿಕೆಟ್​ಗಳ ಸೋಲನುಭವಿಸಲು ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೋಗಿದ್ದೇ ಕಾರಣ. ಅವರೊಬ್ಬ ಅಪಶಕುನ ವ್ಯಕ್ತಿ (bad omen) ಎಂದು ಹೀಯಾಳಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರ ವಿರುದ್ಧ ಭಾರತೀಯ ಜನತಾ ಪಾರ್ಟಿಯು(BJP Party) ಕೇಂದ್ರ ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ. ರಾಹುಲ್ ಗಾಂಧಿ ಅವರು, ಮೋದಿ ಅವರು ಜೇಬುಗಳ್ಳ (pickpocket) ಎಂದೂ ಟೀಕೆ ಮಾಡಿದ್ದರು.

ಅಪಶಕುನ… ಅಪಶಕುನ.. ಅಪಶಕುನ.. ನಮ್ಮ ಹುಡುಗರು ವಿಶ್ವಕಪ್ ಗೆಲ್ಲುವ ಹಾದಿಯಲ್ಲಿದ್ದರು. ಆದರೆ ಅಪಶಕುನ ಅವರನ್ನು ಸೋಲುವಂತೆ ಮಾಡಿತು ಎಂಬುದು ಈ ದೇಶದ ಜನತೆಗೆ ಗೊತ್ತು ಎಂದು ರಾಹುಲ್ ಗಾಂಧಿ ಅವರು ರಾಜಸ್ಥಾನದ ಚುನಾವಣಾ ರ್ಯಾಲಿಯೊಂದರಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ಸೋತ ಕುರಿತು, ಮೋದಿ ಅವರ ವಿರುದ್ಧ ವ್ಯಂಗ್ಯ ಮಾಡಿದ್ದರು.

ಹಾಗೆಯೇ, ಭಾರತಪುರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಜೇಬುಗಳ್ಳ ಎಂದಿಗೂ ಒಬ್ಬನೇ ಬರುವುದಿಲ್ಲ. ಅವರು ಮೂರು ಜನರು ಇರ್ತಾರೆ. ಒಬ್ಬ ಎದುರಿಗೆ ಬರ್ತಾನೆ, ಮತ್ತೊಬ್ಬ ಹಿಂದಿನಿಂದ ಬರ್ತಾನೆ. ಇನ್ನೊಬ್ಬ ದೂರದಲ್ಲಿರುತ್ತಾನೆ.. ಪ್ರಧಾನಿ ಮೋದಿ ಅವರದ್ದು ನಿಮ್ಮ ಗಮನವನ್ನು ಬೇರೇಡೆಗೆ ಸೆಳೆಯುವುದಾಗಿದೆ. ಅವರು ಟಿವಿಯಲ್ಲಿ ಬರುತ್ತಾರೆ ಮತ್ತು ಹಿಂದೂ-ಮುಸ್ಲಿಮ್, ನೋಟು ಅಮಾನ್ಯೀಕರಣ, ಜಿಎಸ್‌ಟಿ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾರ್ವಜನಿಕರ ಗಮನವನ್ನು ಬೇರೇಡೆ ಸೆಳೆಯುತ್ತಾರೆ. ಈ ಮಧ್ಯೆ, ಅದಾನಿ ಹಿಂದಿನಿಂದ ಬಂದು ನಿಮ್ಮ ದುಡ್ಡು ಹೊಡ್ಕೊಂಡು ಹೋಗುತ್ತಾರೆ ಎಂದು ಟೀಕಿಸಿದ್ದರು.

ಚುನಾವಣಾ ಸಮಿತಿಗೆ ಪತ್ರ ಬರೆದಿರುವ ಭಾರತೀಯ ಜನತಾ ಪಾರ್ಟಿಯು, ಪ್ರಧಾನಿಯೊಬ್ಬರನ್ನು ರಾಹುಲ್ ಗಾಂಧಿ, ಜೇಬುಕಳ್ಳ ಮತ್ತು ಅಪಶಕುನಕ್ಕೆ ಹೋಲಿಸಿದ್ದಾರೆ. ಇದು ರಾಜಕೀಯ ಚರ್ಚೆಯ ಹಂತಗಳ ಕುಸಿತದ ಲಕ್ಷಣವಾಗಿದೆ ಎಂದು ಹೇಳಿದೆ.

ಯಾವುದೇ ವ್ಯಕ್ತಿಯನ್ನು ಜೇಬುಗಳ್ಳ ಎಂದು ಕರೆಯುವುದು ಕೆಟ್ಟ ನಿಂದನೆ ಮತ್ತು ವೈಯಕ್ತಿಕ ದಾಳಿ ಮಾತ್ರವಲ್ಲದೆ ಅವರ ಪ್ರತಿಷ್ಠೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಸ್ಪಷ್ಟ ಉದ್ದೇಶವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯು ಆಯೋಗಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದೆ.

ರಾಹುಲ್ ಗಾಂಧಿ ಹೇಳಿದ್ದೇನು?

2023 ರ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್​ಗಳ ಸೋಲನುಭವಿಸಲು ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋಗಿದ್ದೇ ಕಾರಣ. ಅವರೊಬ್ಬ ಅಪಶಕುನ ವ್ಯಕ್ತಿ ಎಂಬುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದಾರೆ. ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತವು ಪಂದ್ಯವನ್ನು ಸೋಲುವಂತೆ ಮಾಡಿದ್ದು “ಪನೌತಿ” (ಕೆಟ್ಟ ಶಕುನ) ಎಂದು ರಾಹುಲ್​ ಹೇಳಿದ್ದಾರೆ.

ಪನೌತಿ… ಪನೌತಿ… ಪನೌತಿ… (ಅಪ ಶಕುನ, ಅಪಶಕುನ, ಅಪಶಕುನ). ನಮ್ಮ ತಂಡದ ಆಟಗಾರರು ವಿಶ್ವಕಪ್ ಗೆಲ್ಲುವ ಹಾದಿಯಲ್ಲಿದ್ದರು ಆದರೆ ಅಪಶಕಮು ಅವರನ್ನು ಸೋಲುವಂತೆ ಮಾಡಿದರು … ಈ ವಿಷಯ ದೇಶದ ಜನರಿಗೆ ತಿಳಿದಿದೆ” ಎಂದು ರಾಹುಲ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡಿದೆ.

“ಮೋದಿ ಟಿವಿಯಲ್ಲಿ ಬಂದು ‘ಹಿಂದೂ-ಮುಸ್ಲಿಂ ಒಂದೇ ‘ ಎಂದು ಹೇಳುತ್ತಾರೆ. ಕೆಲವೊಮ್ಮೆ ಕ್ರಿಕೆಟ್ ಪಂದ್ಯಕ್ಕೆ ಹೋಗುತ್ತಾರೆ. ಪಂದ್ಯ ಸೋತರೇ ಬೇರೆಯೇ ಮಾತು. ಒಟ್ಟಿನಲ್ಲಿ ಅವರು ಅಪಶಕುನ ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಮೋದಿ ಮತ್ತು ಅಮಿತ್ ಶಾ ಕ್ರೀಡಾಂಗಣಕ್ಕೆ ಹೋಗಿದ್ದರು. ಆದಾಗ್ಯೂ, ಭಾರತದ ಸೋಲಿನ ನಂತರ, ಮೋದಿ ತಮ್ಮ ಡ್ರೆಸ್ಸಿಂಗ್ ಕೋಣೆಯಲ್ಲಿ ತಂಡದ ಸದಸ್ಯರನ್ನು ಸಂತೈಸುತ್ತಿರುವುದನ್ನು ಕಾಣಬಹುದು. ಕ್ರಿಕೆಟಿಗರೊಂದಿಗಿನ ಅವರ ಸಂವಾದದ ವೀಡಿಯೊಗಳು ವೈರಲ್ ಆಗಿವೆ.

ಏತನ್ಮಧ್ಯೆ, ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಭಾರತೀಯ ಕ್ರಿಕೆಟ್ ತಂಡವನ್ನು ಸಂತೈಸಿದ್ದಕ್ಕಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಮಾಸ್ಟರ್ ಆಫ್ ಡ್ರಾಮಾ ಇನ್ ಇಂಡಿಯಾ’ ಎಂದು ಟೀಕಿಸಿದ್ದಾರೆ. , ಕೃತಕ ಸಾಂತ್ವನದ ವೀಡಿಯೊ. ನಿನ್ನೆ ಬಿಡುಗಡೆಯಾದ ಛಾಯಾಚಿತ್ರಗಳು ಹಿಂದಿನ ಪ್ರಾಮಾಣಿಕತೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ. ಮರ್ಯಾದೆ ಗಳಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಭಾರತದ ಆಟಗಾರರು ಈ ಹತಾಶ ವರ್ತನೆಗಳಿಂದ ಮೂರ್ಖರಾಗುವುದಿಲ್ಲ ಎಂದು ಅವರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ರಾಹುಲ್ ಗಾಂಧಿ ಮೂರ್ಖರ ಸರದಾರ! ಪಿಎಂ ನರೇಂದ್ರ ಮೋದಿ ವಾಗ್ದಾಳಿ

Exit mobile version