Site icon Vistara News

Viral Photo | ಸಿಎಂ ಯೋಗಿ ಆದಿತ್ಯನಾಥ್​ ಮಡಿಲು ಈ ಬೆಕ್ಕಿಗೆ ಸುಪ್ಪತ್ತಿಗೆ!; ಓಡೋಡಿ ಬಂದು ತೊಡೆ ಏರಿದ ಮಾರ್ಜಾಲ

Yogi Adityanath Temple

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರಾಣಿಪ್ರಿಯರು. ಅವರು ಗೋವುಗಳನ್ನು ಸಲುಹುವುದನ್ನು ನೋಡಿದ್ದೇವೆ. ಇತ್ತೀಚೆಗಷ್ಟೇ ಅವರು ಗೋರಖ್​ಪುರ ಪ್ರಾಣಿಸಂಗ್ರಾಹಲಯಕ್ಕೆ ಭೇಟಿ ಕೊಟ್ಟಿದ್ದಾಗ ಮುದ್ದಾದ ಎರಡು ಚಿರತೆ ಮರಿಗಳನ್ನು ತೋಳಲ್ಲಿ ಎತ್ತಿಕೊಂಡು, ಬಾಟಲಿ ಹಾಲು ಕುಡಿಸಿದ್ದರು. ಅವುಗಳಿಗೆ ನಾಮಕರಣವನ್ನೂ ಮಾಡಿದ್ದರು. ಇನ್ನು ಗೋರಖ್​ಪುರ ಮಠದ ಪೀಠಾಧ್ಯಕ್ಷರಾಗಿರುವ ಅವರು ಅಲ್ಲಿಗೆ ಭೇಟಿಕೊಟ್ಟಾಗಲೆಲ್ಲ ಗೋಶಾಲೆಗೂ ಹೋಗಿ ಬರುತ್ತಾರೆ. ಅಲ್ಲಿರುವ ಗೋವುಗಳಿಗೆ ಮೇವು-ಬೆಲ್ಲ ತಿನ್ನಿಸಿ, ಮೈದವಡಿ ಮುದ್ದಾಡಿ ಬರುತ್ತಾರೆ.

ಇಂತಿಪ್ಪ ಯೋಗಿ ಆದಿತ್ಯನಾಥ್​ ಈಗ ಬೆಕ್ಕಿನೊಂದಿಗೆ ಇರುವ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗೋರಖ್​ಪುರ ದೇವಸ್ಥಾನದಲ್ಲಿರುವ ತಮ್ಮ ಕಚೇರಿಯಲ್ಲಿ ಕುಳಿತ ಯೋಗಿ ಆದಿತ್ಯನಾಥ್​ ಮಡಿಲಲ್ಲಿ ಬೆಕ್ಕೊಂದು ಬೆಚ್ಚಗೆ ಮಲಗಿರುವ ಫೋಟೋ ಇದು. ಇಲ್ಲಿ ಯೋಗಿ ಆದಿತ್ಯನಾಥ್​ ಅವರು ಖಾವಿ ವಸ್ತ್ರಧಾರಿಯಾಗಿ, ಕೇಸರಿ ಬಣ್ಣದ ಹೊದಿಕೆ ಹೊದಿಸಲಾದ ಕುರ್ಚಿಯ ಮೇಲೆ ಕುಳಿತಿದ್ದಾರೆ. ಅವರ ಮಡಿಲೇ ತನ್ನ ಸುಪ್ಪತ್ತಿಗೆ ಎಂಬಂತೆ ಬೆಕ್ಕೊಂದು ಅಲ್ಲಿ ಮಲಗಿದೆ. ಬೆಕ್ಕನ್ನು ಅವರು ತಂದು ಮಲಗಿಸಿಕೊಂಡಿದ್ದಲ್ಲ, ಯೋಗಿ ಆದಿತ್ಯನಾಥ್​ ಸೀಟ್​ ಮೇಲೆ ಕುಳಿತುಕೊಳ್ಳುತ್ತಿದ್ದಂತೆ, ಅದಾಗೇ ಬಂದು ಮಲಗಿದೆ ಎನ್ನಲಾಗಿದೆ. ಫೋಟೋ ಮಾತ್ರ ಸಖತ್​ ಕ್ಯೂಟ್ ಆಗಿದೆ.
ಫೋಟೋವನ್ನು ಯೋಗಿ ಆದಿತ್ಯನಾಥ್​ ಅವರೂ ಶೇರ್​ ಮಾಡಿಕೊಂಡು ‘ತಮ್ಮ ಮಿತ್ರರು ಯಾರು, ಶತ್ರುಗಳು ಯಾರು ಎಂಬುದನ್ನು ಪ್ರಾಣಿ-ಪಕ್ಷಿಗಳೂ ಗುರುತಿಸಿಕೊಳ್ಳುತ್ತವೆ’ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ಇದನ್ನೂ ಓದಿ: OBC Reservation In UP | ಚುನಾವಣೆಯಲ್ಲಿ ಒಬಿಸಿ ಮೀಸಲಾತಿ ರದ್ದು, ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಹಿನ್ನಡೆ

Exit mobile version