Site icon Vistara News

ಜಾರ್ಖಂಡ ಶಾಸಕರು, ಸಚಿವರನ್ನೆಲ್ಲ ಕರೆದುಕೊಂಡು ಜಲಾಶಯಕ್ಕೆ ಹೋದ ಸಿಎಂ ಹೇಮಂತ್​ ಸೊರೆನ್​

Jarkhand

ರಾಂಚಿ: ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್​ ಯಾವುದೇ ಕ್ಷಣದಲ್ಲಾದರೂ ಅನರ್ಹಗೊಳ್ಳಬಹುದು. ಇದು ಸಹಜವಾಗಿಯೇ ಅಲ್ಲಿನ ಜಾರ್ಖಂಡ್​ ಮುಕ್ತಿ ಮೋರ್ಚಾ, ಕಾಂಗ್ರೆಸ್​ ಮತ್ತು ಆರ್​ಜೆಡಿ ಮೈತ್ರಿ ಸರ್ಕಾರಕ್ಕೆ ಆತಂಕ ತಂದೊಡ್ಡಿದೆ. ಹೇಮಂತ್ ಸೊರೆನ್​ ಅವರು ತಮ್ಮ ಒಡೆತನದ ಕಲ್ಲು ಗಣಿಯ ಗುತ್ತಿಗೆಯನ್ನು ತಾವೇ, ಅಕ್ರಮವಾಗಿ ವಿಸ್ತರಿಸಿಕೊಂಡಿದ್ದಾರೆ ಎಂದು ಬಿಜೆಪಿ ಕೊಟ್ಟಿದ್ದ ಆರೋಪವನ್ನು ಪರಿಗಣಿಸಿ, ಚುನಾವಣಾ ಆಯೋಗ ತನಿಖೆ ನಡೆಸಿತ್ತು. ಈ ತನಿಖೆಯಲ್ಲಿ ಆರೋಪ ಸಾಬೀತಾದ ಕಾರಣ ಸೊರೆನ್​​ರನ್ನು ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಈ ಅನರ್ಹತೆ ಆದೇಶ ಸಿದ್ಧವಾಗಿದ್ದು ಯಾವುದೇ ಕ್ಷಣದಲ್ಲೂ ಅಧಿಕೃತವಾಗಿ ಹೊರಬೀಳಬಹುದು.

ಹೀಗೆ ಜಾರ್ಖಂಡ್​​ನಲ್ಲಿ ಮೈತ್ರಿ ಸರ್ಕಾರದ ರಾಜಕೀಯ ಸ್ಥಿತಿ ಅಲ್ಲಾಡುತ್ತಿರುವ ಹೊತ್ತಲ್ಲಿ, ಕುದುರೆ ವ್ಯಾಪಾರದ ಭಯವೂ ಕಾಡುತ್ತಿದೆ. ಯುಪಿಎ ಒಕ್ಕೂಟದ ಶಾಸಕರು-ಸಚಿವರು ಪಕ್ಷ ಬದಲಾಯಿಸದಂತೆ ತಡೆಯಲು, ಹೇಮಂತ್​ ಸೊರೆನ್​, ಅವರನ್ನೆಲ್ಲ ಖುಂತಿ ಜಿಲ್ಲೆಯ ಲತರಾತೂ ಜಲಾಶಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ ಹಲವು ಶಾಸಕರು ಗಂಟುಮೂಟೆ ಕಟ್ಟಿಕೊಂಡು, ಮುಖ್ಯಮಂತ್ರಿ ಸೊರೆನ್​ ನಿವಾಸಕ್ಕೆ ತಲುಪಿದ್ದರು. ಅಲ್ಲಿಂದ ಅವರೆಲ್ಲ ಛತ್ತೀಸ್​ಗಢ್​ಗೆ ಹೋಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಪ್ಲ್ಯಾನ್​ ಬದಲಾಯಿಸಿದ್ದಾರೆ. ಹೇಮಂತ್ ಸೊರೆನ್​ ಅವರೇ ಖುದ್ದಾಗಿ ಎಲ್ಲರನ್ನೂ ಬಸ್​ನಲ್ಲಿ ಲತರಾತೂ ಜಲಾಶಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ಗೆಸ್ಟ್​ಹೌಸ್​​ನಲ್ಲಿ ಇವರೆಲ್ಲ ತಂಗಿದ್ದಾರೆ. ಸ್ಥಳದಲ್ಲಿ ಪೊಲೀಸ್​ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇಂದು ರಾತ್ರಿಯ ಹೊತ್ತಿಗೆ ಶಾಸಕರೆಲ್ಲ ವಾಪಸ್​ ರಾಂಚಿಗೆ ಬರಬಹುದು ಎಂದು ಹೇಳಲಾಗಿದೆ.

ಹೇಮಂತ್​ ಸೊರೆನ್​​ರನ್ನು ಅನರ್ಹಗೊಳಿಸಲು ಚುನಾವಣಾ ಆಯೋಗ ಶಿಫಾರಸ್ಸು ಮಾಡಿದ್ದು, ರಾಜ್ಯಪಾಲರು ಆದೇಶ ಸಿದ್ಧ ಮಾಡಿಟ್ಟಿದೆ ಎಂದು ಹೇಳಲಾಗಿದೆ. ಆದರೆ ಇವತ್ತಿನವರೆಗೆ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ನಿನ್ನೆಯಷ್ಟೇ ಹೇಳಿದ್ದರು. ಹಾಗೊಮ್ಮೆ ಸೊರೆನ್​ ಅನರ್ಹರಾದರೆ ಅವರ ಪತ್ನಿಯೇ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಯಱರತದರ6ದ

ಇದನ್ನೂ ಓದಿ: ಹೇಮಂತ್​ ಸೊರೆನ್​ ಸಿಎಂ ಗಾದಿ ಮೇಲೆ ತೂಗುಗತ್ತಿ; ದೊಡ್ಡ ಬ್ಯಾಗ್​​ನೊಂದಿಗೆ ರಾಜ್ಯ ಬಿಟ್ಟು ಹೊರಟ ಶಾಸಕರು!

Exit mobile version