Site icon Vistara News

ಒಡಿಶಾ ಆರೋಗ್ಯ ಸಚಿವರ ಎದೆಗೇ ಶೂಟ್​ ಮಾಡಿದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ; ಕಾರು ಇಳಿಯುತ್ತಿದ್ದಂತೆ ಬಿತ್ತು ಗುಂಡು!

Naba Kishore Das Dies

#image_title

ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ನಬಾ ಕಿಶೋರ್​ ದಾಸ್ (Naba Kishore Das)​ ಅವರ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಅವರನ್ನು ಜಾರ್ಸುಗುಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಾರ್ಸುಗುಡ ಜಿಲ್ಲಾ ಪೊಲೀಸ್​ ಅಸಿಸ್ಟೆಂಟ್​ ಸಬ್​ಇನ್ಸ್​ಪೆಕ್ಟರ್​ ಆಗಿರುವ ಗೋಪಾಲ್ ಚಂದ್ರ​ ದಾಸ್​ ಈ ಕೃತ್ಯ ಎಸಗಿದ್ದಾಗಿ ವರದಿಯಾಗಿದೆ.

ಜಾರ್ಸುಗುಡ ಜಿಲ್ಲೆಯ ಗಾಂಧಿ ಚೌಕ್​​ ಬಳಿಯಿರುವ ಬ್ರಜರಾಜನಗರದಲ್ಲಿ ನೂತನವಾಗಿ ನಿರ್ಮಾಣವಾದ ಬಿಜು ಜನತಾ ದಳ ಪಕ್ಷದ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಆಗಮಿಸಿದ್ದರು. ಅವರು ಕಾರು ಇಳಿದು ಕಚೇರಿಯತ್ತ ಹೋಗುತ್ತಿರುವಾಗಲೇ, ಪೊಲೀಸ್​ ಅಧಿಕಾರಿ ತಮ್ಮ ಕೈಲಿದ್ದ ಸರ್ವೀಸ್​ ಪಿಸ್ತೂಲ್​​ನಿಂದ ನಾಲ್ಕರಿಂದ ಐದು ಗುಂಡುಗಳನ್ನು ಹಾರಿಸಿದ್ದಾರೆ. ಈ ಗುಂಡುಗಳು ಸಚಿವರ ಎದೆಗೇ ಹೋಗಿ ಬಿದ್ದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿ: Cricketer Found Dead | ಒಡಿಶಾದ ಮಹಿಳಾ ಕ್ರಿಕೆಟರ್​ ಮೃತದೇಹ ಕಟಕ್​ನ ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಎಎಸ್​​ಐ ಗೋಪಾಲ ಚಂದ್ರ ದಾಸ್​ ಅವರು ಗಾಂಧಿ ಚೌಕ್​​ ಬಳಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ಸಚಿವರ ಕಾರು ಅಲ್ಲಿಯೇ ನಿಂತು, ಅವರು ಕಾರು ಇಳಿಯುತ್ತಿದ್ದಂತೆ ಗುಂಡು ಹೊಡೆದಿದ್ದಾರೆ. ಗೋಪಾಲ ಚಂದ್ರದಾಸ್​ರನ್ನು ಕೂಡಲೇ ಉಳಿದ ಪೊಲೀಸ್​ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಉನ್ನತ ಮಟ್ಟದ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್​ ಅಧಿಕಾರಿ ಫೈರಿಂಗ್ ಮಾಡಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಶೀಘ್ರವೇ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಗುಪ್ತೇಶ್ವರ್ ಭೋಯಿ ತಿಳಿಸಿದ್ದಾರೆ.

Exit mobile version