Site icon Vistara News

Viral Video: ಮಹಿಳೆಯನ್ನು ನದಿಗೆ ಎಳೆದೊಯ್ದು, ಸಜೀವವಾಗಿ ತಿಂದ ಮೊಸಳೆ!

Crocodile

ನವದೆಹಲಿ: ಒಡಿಶಾದ (Odisha State) ಜಾಜ್ಪುರ್ (Jajpur District) ಜಿಲ್ಲೆಯ ಬಿರುಪಾ ನದಿಯಲ್ಲಿ (Birupa River) ಸ್ನಾನ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು (Woman) ಎಳೆದೊಯ್ದ ಮೊಸಳೆ(Crocodile), ಅವಳನ್ನು ಜೀವಂತವಾಗಿ ತಿಂದು ಹಾಕಿರುವ ಘಟನೆ ನಡೆದಿದೆ. ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ವೈರಲ್ ಆಗಿದೆ(Viral Video). ನದಿಯ ದಡದಲ್ಲಿರುವ ಮಹಿಳೆಯನ್ನು ಮೊಸಳೆ ಬೇಟೆಯಾಡುವುದು ಭಯಂಕರವಾಗಿದೆ.

ಮೊಸಳೆ ಬಾಯಿಗೆ ಆಹಾರವಾದ ಮಹಿಳೆಯನ್ನು 35 ವರ್ಷದ ಜ್ಯೋತ್ಸನಾ ರಾಣಿ ಎಂದು ಗುರುತಿಸಲಾಗಿದೆ. ಈ ಮಹಿಳೆಯು ಜಾಜ್ಪುರ ಜಿಲ್ಲೆಯ ಪಾಲತ್‌ಪುರ್ ಗ್ರಾಮದ ಬಳಿ, ಬಿರುಪಾ ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದಳು. ಆಗ ಮೊಸಳೆ ಆಕೆಯನ್ನು ಸಜೀವವಾಗಿಯೇ ತಿಂದುಹಾಕಿದೆ ಘಟನೆ ಬುಧವಾರ ನಡೆದಿದೆ.

ನದಿ ದಡದ ಈಚೆ ಇದ್ದವರು ಇಡೀ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಮೊಸಳೆಯು ಮಹಿಳೆಯನ್ನು ಎಳೆದೊಯ್ದು, ಆಕೆಯನ್ನು ಜೀವಂತವಾಗಿಯೇ ನೀರಿನಲ್ಲಿ ತಿನ್ನುವ ಭೀಕರ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸ್ತಳೀಯ ಅಗ್ನಿಶಾಮಕ ದಳವು, ಮಹಿಳೆಯ ಅಳಿದುಳಿದ ದೇಹದ ಅವಶೇಷಗಳ ಪತ್ತೆಗೆ ನದಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ.

ಮಹಿಳೆಯನ್ನು ಎಳೆದೊಯ್ದು ತಿಂದು ಹಾಕಿದ ಮೊಸಳೆ

11 ವರ್ಷದ ಮಗುವಿನ ಜೀವ ತೆಗೆದ ಯುಟ್ಯೂಬ್ ವಿಡಿಯೋ

ಮಕ್ಕಳ ಕೈಗೆ ಮೊಬೈಲ್‌ ನೀಡುವುದು ಒಳ್ಳೆಯದಲ್ಲ ಎಂದು ಎಲ್ಲರೂ ಹೇಳುತ್ತಲೇ ಇರುತ್ತಾರೆ. ಆದರೆ ಚಿಕ್ಕ ಮಕ್ಕಳಿಗೂ ಯೂಟ್ಯೂಬ್‌ ವಿಡಿಯೊ ತೋರಿಸುತ್ತಲೇ ಊಟ ಮಾಡಿಸುವ ಅಭ್ಯಾಸವನ್ನು ಈಗಿನ ಪೋಷಕರು ಮಾಡಿಕೊಂಡುಬಿಟ್ಟಿದ್ದಾರೆ. ಅದೇ ರೀತಿಯಲ್ಲಿ ಹೆಚ್ಚಾಗಿ ಯೂಟ್ಯೂಬ್‌ ವಿಡಿಯೊಗಳನ್ನು ನೋಡುತ್ತಿದ್ದ ಬಾಲಕನೊಬ್ಬ, ವಿಡಿಯೊದಲ್ಲಿ ನೇಣು ಹಾಕಿಕೊಂಡಿದ್ದನ್ನು ನೋಡಿ ತಾನೂ ಕುತೂಹಲಕ್ಕೆ ನೇಣು ಬಿಗಿದುಕೊಂಡಾಗ ಪ್ರಾಣ ಕಳೆದುಕೊಂಡಿದ್ದಾನೆ. ತೆಲಂಗಾಣದಲ್ಲಿ ಈ ಘಟನೆ ನಡೆದಿದೆ. ಈ ದಾರುಣ ಘಟನೆಯ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ತೆಲಂಗಾಣದ ಸಿರಿಸಿಲ್ಲಾದಲ್ಲಿ ವಾಸಿಸುತ್ತಿದ್ದ, ಆರನೇ ತರಗತಿಯ ವಿದ್ಯಾರ್ಥಿ ಉದಯ್‌ (11) ಯಾವಾಗಲೂ ಯೂಟ್ಯೂಬ್‌ ವೀಕ್ಷಿಸುತ್ತಿದ್ದನಂತೆ. ಅದರಲ್ಲಿ ಬರುವ ಫನ್ನಿ ವಿಡಿಯೊಗಳನ್ನು ನೋಡುವುದು ಅವನಿಗೆ ಬಹಳ ಇಷ್ಟದ ಕೆಲಸವಾಗಿತ್ತಂತೆ. ಅದೇ ರೀತಿಯಲ್ಲಿ ವಾರಾಂತ್ಯವಾದ ಶನಿವಾರದಂದು ರಾತ್ರಿ ಊಟ ಮುಗಿಸಿದ ನಂತರ ಉದಯ್‌ ಮೊಬೈಲ್‌ನಲ್ಲಿ ಎಂದಿನಂತೆ ಯೂಟ್ಯೂಬ್‌ ವಿಡಿಯೊಗಳನ್ನು ನೋಡಿದ್ದಾನೆ. ಅಲ್ಲಿ ಆತ ನೇಣು ಬಿಗಿದುಕೊಳ್ಳುವ ದೃಶ್ಯವೊಂದನ್ನು ನೋಡಿದ್ದಾನೆ.

ಇದನ್ನೂ ಓದಿ: Viral News: ಹೆಣ್ಣು ಮಗು ಹೆತ್ತ ಮಂಗಳಮುಖಿ ಪುರುಷ! ಇದೆಲ್ಲ ಹೇಗಾಯ್ತು?
ಸಾಕಷ್ಟು ಹೊತ್ತು ವಿಡಿಯೊ ನೋಡಿದ ಉದಯ್‌ ನಂತರ ತನ್ನ ಕೋಣೆಗೆ ಹೋಗಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ. ರೂಮಿನಲ್ಲಿನ ಗೋಡೆಗೆ ಹೊಡೆಯಲಾಗಿದ್ದ ಮೊಳೆಯೊಂದಕ್ಕೆ ಬಟ್ಟೆಯನ್ನು ನೇಣಿನ ರೂಪದಲ್ಲಿ ಹಾಕಿಕೊಂಡು ಅದಕ್ಕೆ ತನ್ನ ಕುತ್ತಿಗೆ ಒಡ್ಡಿದ್ದಾನೆ. ಯೂಟ್ಯೂಬ್‌ನಲ್ಲಿ ನೋಡಿದ ವಿಡಿಯೊದಂತೆ ತಾನೂ ಮಾಡಿಕೊಂಡಿದ್ದಾನೆ. ಆಗ ಕುತ್ತಿಗೆಗೆ ನೇಣು ಬಿಗಿದ ಕಾರಣ ಪ್ರಾಣ ಬಿಟ್ಟಿದ್ದಾನೆ.

ಎಷ್ಟು ಕರೆದರೂ ಮಗ ರೂಮಿನ ಬಾಗಿಲನ್ನು ತೆರೆಯದಿರುವುದನ್ನು ಕಂಡ ತಂದೆ ತಾಯಿ ರೂಮಿನ ಬಾಗಿಲನ್ನು ಒಡೆದಿದ್ದಾರೆ. ಒಳಗೆ ಹೋಗಿ ನೋಡಿದಾಗ ಮಗ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮಗನನ್ನು ಉಳಿಸಿಕೊಳ್ಳಬೇಕೆಂಬ ಹಟದಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಬರುವುದರೊಳಗೆ ಉದಯ್‌ ಸಾವಿಗೀಡಾಗಿದ್ದಾನೆ ಎಂದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ.

Exit mobile version