Site icon Vistara News

Delhi CM: ವಿಶ್ವಾಸ ಮತಯಾಚನೆಗೆ ಮುಂದಾದ ದಿಲ್ಲಿ ಸಿಎಂ ಕೇಜ್ರಿವಾಲ್! ಕಾರಣ ಏನು?

Delhi CM moves motion of confidence in assembly and ED Summons to Kejriwal

Arvind Kejriwal

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲು ನಿರ್ಣಯವನ್ನು ಮಂಡಿಸಿದರು(motion of confidence). ಈ ಮಂಡನೆಯ ಮೇಲಿನ ಚರ್ಚೆ ನಾಳೆ ನಡೆಯಲಿದ್ದು, ಅಲ್ಲಿಯವರೆಗೆ ಸದನವನ್ನು ಮುಂದೂಡಲಾಗಿದೆ. ಈ ಮಧ್ಯೆ, ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi liquor policy scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು 6ನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಐದು ಬಾರಿ ಸಮನ್ಸ್ ಜಾರಿ ಮಾಡಿದ್ದರೂ, ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗಿಲ್ಲ.

ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, ಈ ಮದ್ಯದ ಹಗರಣ ಎಂದು ಕರೆಯಲಾಗುವ ಹಗರಣವು ಹಗರಣವೇ ಅಲ್ಲ. ಈ ಬಗ್ಗೆಯು ಬಿಜೆಪಿಯು ನ್ಯಾಯಯುತ ತನಿಖೆ ನಡೆಸಲು ಬಯಸುವುದಿಲ್ಲ. ಈ ಹಗರಣದ ನೆಪದಲ್ಲಿ ಎಲ್ಲ ಆಪ್ ನಾಯಕರನ್ನು ಬಂಧಿಸಲಾಗಿದೆ. ಒಂದಲ್ಲ ಒಂದು ವಿಧಾನದಿಂದ ದೆಹಲಿ ಸರ್ಕಾರವನ್ನು ಉರುಳಿಸುವುದೇ ಅವರ ಗುರಿಯಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದು ದಿಲ್ಲಿಯ ಏಳನೇ ವಿಧಾನಸಭೆಯ ಐದನೇ ಬಜೆಟ್ ಅಧಿವೇಶನವಾಗಿದೆ.

ಈಗ ರದ್ದುಗೊಂಡಿರುವ ಮದ್ಯ ನೀತಿಯ ಬಗ್ಗೆ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆರನೇ ಬಾರಿಗೆ ಆಮ್ ಆದಾಮಿ ಪಕ್ಷದ (ಎಎಪಿ) ಮುಖ್ಯಸ್ಥರಿಗೆ ಸಮನ್ಸ್ ನೀಡಿದ ಮಾರನೇ ದಿನವೇ ವಿಶ್ವಾಸಮ ಮತ ನಿರ್ಣಯ ಮಂಡಿಸಲಾಗಿದೆ. ಫೆಬ್ರವರಿ 19 ರಂದು ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಈ ಹಿಂದೆ ಫೆಬ್ರವರಿ 2, ಜನವರಿ 18 ಮತ್ತು ಜನವರಿ 3 ರಂದು ಮತ್ತು 2023ರ ಡಿಸೆಂಬರ್ 21 ಮತ್ತು ನವೆಂಬರ್ 2 ರಂದು ಅವರಿಗೆ ಸಮನ್ಸ್ ನೀಡಲಾಗಿತ್ತು.

ಕೇಜ್ರಿವಾಲ್‌ಗೆ 6ನೇ ಬಾರಿಗೆ ಸಮನ್ಸ್! ಈ ಬಾರಿಯಾದ್ರೂ ಇ.ಡಿ ವಿಚಾರಣೆಗೆ ಹೋಗ್ತಾರಾ?

ದಿಲ್ಲಿ ಅಬಕಾರಿ ನೀತಿ ಹಗರಣ(Delhi Liquor Policy Case) ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರಿಗೆ ಜಾರಿ ನಿರ್ದೇಶನಾಲಯ (Enforcement Directorate ED) ಸಮನ್ಸ್ (Summons) ಜಾರಿ ಮಾಡಿದೆ. ಪ್ರಕರಣದಲ್ಲಿ ದೆಹಲಿ ಸಿಎಂಗೆ ಜಾರಿ ನಿರ್ದೇಶನಾಲಯವು ನೀಡುತ್ತಿರುವ ಆರನೇ ಸಮನ್ಸ್ ಆಗಿದೆ. ಈ ಹಿಂದೆ ನೀಡಲಾದ ಐದು ಸಮನ್ಸ್‌ಗಳಿಗೆ ಅರವಿಂದ್ ಕೇಜ್ರಿವಾಲ್ ಕ್ಯಾರೇ ಅಂದಿಲ್ಲ. ಅಲ್ಲದೇ ವಿಚಾರಣೆಗೂ ಹಾಜರಾಗಿಲ್ಲ.

ರಾಷ್ಟ್ರ ರಾಜಧಾನಿಯಲ್ಲಿರುವ ಏಜೆನ್ಸಿಯ ಪ್ರಧಾನ ಕಚೇರಿಯಲ್ಲಿ ಕೇಜ್ರಿವಾಲ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅವರ ಇಬ್ಬರು ಹಿರಿಯ ಪಕ್ಷದ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಜೈಲಿನ ಹಿಂದೆ ಇರುವ ಪ್ರಕರಣದಲ್ಲಿ ಐದು ಬಾರಿ ಸಮನ್ಸ್ ನೀಡಿದ ನಂತರವೂ ಅವರು ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ.

ಅಬಕಾರಿ ನೀತಿ-ಸಂಬಂಧಿತ ಪ್ರಕರಣದಲ್ಲಿ ಸಮನ್ಸ್ ಅನ್ನು ನಿರಾಕರಿಸುತ್ತಿರುವ ಸಂಬಂಧ ಇಡಿ ಸಲ್ಲಿಸಿದ ದೂರಿನ ಮೇಲೆ ಫೆಬ್ರವರಿ 17 ರಂದು ತನ್ನ ಮುಂದೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ದೆಹಲಿ ನ್ಯಾಯಾಲಯವು ಸೂಚಿಸಿತ್ತು. ಮೂಲ ಎಎಪಿ ಮುಖ್ಯಸ್ಥರು ಅನುಸರಿಸಲು “ಕಾನೂನುಬದ್ಧವಾಗಿ ಬದ್ಧರಾಗಿದ್ದಾರೆ” ಎಂದು ಹೇಳಿತ್ತು.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು, ಕೇಜ್ರಿವಾಲ್ ಅವರು ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು “ಉದ್ದೇಶಪೂರ್ವಕವಾಗಿ ವಿಫಲರಾಗಿದ್ದಾರೆ” ಮತ್ತು ಐಪಿಸಿಯ ಸೆಕ್ಷನ್ 174 (ಸಾರ್ವಜನಿಕ ಸೇವಕರ ಆದೇಶಕ್ಕೆ ಬದ್ಧರಾಗಿರದೆ ಇರುವುದು) ಅಪರಾಧಕ್ಕಾಗಿ ಅವರಿಗೆ ಸಮನ್ಸ್ ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಉದ್ದೇಶಪೂರ್ವಕವಾಗಿ ಸಮನ್ಸ್‌ಗಳನ್ನು ಪಾಲಿಸಲು ಬಯಸುವುದಿಲ್ಲ ಮತ್ತು “ಕುಂಟು ನೆಪಗಳನ್ನು” ನೀಡುತ್ತಿದ್ದಾರೆ ಎಂದು ಇಡಿ ತನ್ನ ದೂರಿನಲ್ಲಿ ಆರೋಪಿಸಿದೆ. ಅವರಂತಹ ಉನ್ನತ ಶ್ರೇಣಿಯ ಸಾರ್ವಜನಿಕ ಕಾರ್ಯನಿರ್ವಾಹಕರು ಕಾನೂನಿಗೆ ಅವಿಧೇಯರಾದರೆ, ಅದು “ಸಾಮಾನ್ಯ ಜನರಿಗೆ ಅಂದರೆ ಆಮ್ ಆದ್ಮಿಗೆ ತಪ್ಪು ಉದಾಹರಣೆಯಾಗಿದೆ” ಎಂದು ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನೂ ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್‌ಗೆ 5ನೇ ಬಾರಿ ಇ.ಡಿ. ಸಮನ್ಸ್!

Exit mobile version