Site icon Vistara News

Delhi Crime: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಸ್ನೇಹಿತನನ್ನು ಕೊಂದ 20 ವರ್ಷದ ಯುವಕ

Delhi Crime, 20-year-old man killed friend who was forcing him to have Unnatural Sex

ನವದೆಹಲಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ (Unnatural Sex) ಒತ್ತಾಯಿಸಿದ ಕಾರಣಕ್ಕೆ 20 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನನ್ನು ಹತ್ಯೆ ಮಾಡಿದ್ದಾನೆ (Friend Killed) ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ(Delhi Police). ದಿಲ್ಲಿಯ ಮೋರಿ ಗೇಟ್‌ನ ಡಿಡಿಎ ಪಾರ್ಕ್‌ನಲ್ಲಿ ಪ್ರತ್ಯೇಕ ಸ್ಥಳದಲ್ಲಿ ಮೃತದೇಹ ಬಿದ್ದಿದೆ ಮತ್ತು ಅದರ ಮುಖವನ್ನು ಪುಡಿಮಾಡಲಾಗಿದೆ ಎಂಬ ಕರೆ ಜನವರಿ 19 ರಂದು ಕಾಶ್ಮೀರ್ ಗೇಟ್ ಪೊಲೀಸ್ ಠಾಣೆಗೆ ಮಾಡಲಾಗಿತ್ತು. ಅಲ್ಲಿ ಹೋಗಿ ನೋಡಿದಾಗ ಅಪರಿಚಿತ ದೇಹವು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಗೊತ್ತಾಗಿದೆ. ಬಾಯಿಯ ಮೇಲೆ ರಕ್ತ ಮತ್ತು ಕಣ್ಣಿನ ಮೇಲೆ ಕತ್ತರಿಸಿದ ಗುರುತು ಇತ್ತು. ದೇಹದ ಸುತ್ತಲೂ ರಕ್ತ ಹರಡಿತ್ತು ಎಂದು ದಿಲ್ಲಿ ಉತ್ತರ ಡಿಸಿಪಿ ಮನೋಜ್ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.

ದಿಲ್ಲಿಯ ಉತ್ತರ ಜಿಲ್ಲೆಯ ಅಪರಾಧ ತಂಡ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವನ್ನು ಸ್ಥಳಕ್ಕೆ ಕರೆಸಲಾಯಿತು ಮತ್ತು ಎರಡೂ ತಂಡಗಳಿಂದ ಅಪರಾಧದ ಸ್ಥಳವನ್ನು ಪರಿಶೀಲಿಸಲಾಯಿತು.

ಸ್ಥಳ ಪರಿಶೀಲನೆಯ ನಂತರ, ದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯರು ಅವನನ್ನು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ನಂತರ, ಶವವನ್ನು ಸ್ಥಳಾಂತರಿಸಿ ‘ಸುಬ್ಜಿ ಮಂಡಿ’ ಶವಾಗಾರದಲ್ಲಿ ಸಂರಕ್ಷಿಸಲಾಗಿದೆ. ಕೊಲೆಗಾರನನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೀನಾ ಅವರು ತಿಳಿಸಿದ್ದರು.

ಮೃತ ವ್ಯಕ್ತಿಯನ್ನು ಪ್ರಮೋದ್ ಕುಮಾರ್ ಶುಕ್ಲಾ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಜಲೋನ್ ಜಿಲ್ಲೆಯ ರುದೂರ್ಪುರ ಗ್ರಾಮದ ನಿವಾಸಿ. ಅವರು ರಾಕೇಶ್ ತೋಮರ್ ಅವರ ಅಂಗಡಿಯಲ್ಲಿರುವ ಖೋಯಾ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಖೋಯಾ ಮಂಡಿ ಬಳಿಯ ಮೋರಿ ಗೇಟ್‌ನಲ್ಲಿರುವ ರೈನ್ ಬಸೇರಾದಲ್ಲಿ ವಾಸಿಸುತ್ತಿದ್ದರು ಎಂದು ಡಿಸಿಪಿ ಮೀನಾ ತಿಳಿಸಿದ್ದಾರೆ.

ತನಿಖೆಯ ವೇಳೆ, ಕೊಲೆಯಾದ ವ್ಯಕ್ತಿಯ ಸ್ನೇಹಿತ ರಾಜೇಶ್ ಎಂಬಾತನ ಬಗ್ಗೆ ಗೊತ್ತಾಗಿದೆ. ಕೊಲೆಯಾದ ಪ್ರಮೋದ್ ಕುಮಾರ್ ಶುಕ್ಲಾ ಮತ್ತು ರಾಜೇಶ್ ದೆಹಲಿಯ ಮೋರಿ ಗೇಟ್‌ನಲ್ಲಿರುವ ಖೋಯಾ ಮಂಡಿ ಬಳಿಯ ರೈನ್ ಬಸೇರಾದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

ಜನವರಿ 17 ರಂದು ದೆಹಲಿಯ ಮೋರಿ ಗೇಟ್‌ನ ಡಿಡಿಎ ಪಾರ್ಕ್‌ನಲ್ಲಿ ರಾಜೇಶ್ ಮತ್ತು ಪ್ರಮೋದ್ ಕುಮಾರ್ ಶುಕ್ಲಾ ನಡುವೆ ಹೊಡೆದಾಟ ನಡೆದಿತ್ತು ಎಂಬದು ಗೊತ್ತಾಗಿದೆ. ಬಳಿಕ ರಾಜೇಶ್‌ನನ್ನು ಹಚ್ಚುವ ಪ್ರಯತ್ನ ನಡೆದಿದ್ದು, ಜನವರಿ 17ರಂದು ರಾಜೇಶ್ ತಲೆಮರೆಸಿಕೊಂಡಿದ್ದಾನೆಂದು ತಿಳಿದು ಬಂದಿದೆ.

ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ, ರಾಜೇಶ್ ಮೊಬೈಲ್ ಸಂಖ್ಯೆಯನ್ನು ಪಡೆಯಲಾಯಿತು ಮತ್ತು ಸಿಡಿಆರ್ ಮತ್ತು ಮೊಬೈಲ್ ಸಂಖ್ಯೆಯ ಸ್ಥಳದ ವಿವರವಾದ ವಿಶ್ಲೇಷಣೆಯ ನಂತರ, ಆತನನ್ನು ಜನವರಿ 26 ರಂದು ಬಿಹಾರದ ಪಾಟ್ನಾದಿಂದ ಬಂಧಿಸಲಾಯಿತು ಮತ್ತು ನಂತರ ಕಾಶ್ಮೀರ್ ಗೇಟ್‌ ಪೊಲೀಸ್ ಠಾಣೆಗೆ ಕರೆತರಲಾಯಿತು.

ವಿಚಾರಣೆ ವೇಳೆ, ಆರೋಪಿ ರಾಜೇಶ್ ಕುಮಾರ್, ಪ್ರಮೋದ್ ಕುಮಾರ್ ಶುಕ್ಲಾ ತನ್ನ ಸ್ನೇಹಿತನಾಗಿದ್ದು, ತನ್ನೊಂದಿಗೆ ಅಸಹಜ ಸಂಭೋಗ ನಡೆಸುವಂತೆ ಒತ್ತಡ ಹೇರುತ್ತಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜನವರಿ 17ರಂದು ಪ್ರಮೋದ್ ಜತೆಗೆ ಆರೋಪಿ ಡಿಡಿಎ ಪಾರ್ಕ್‌ನ ನಿರ್ಜನ ಪ್ರದೇಶದಲ್ಲಿ ಕೂತು ಬಿಯರ್ ಕುಡಿದಿದ್ದಾರೆ. ಆಗ ಪ್ರಮೋದ್ ಅಸಹಜ ಲೈಂಗಿಕ ಕ್ರಿಯೆಗೆ ರಾಜೇಶ್‌ನನ್ನು ಒತ್ತಾಯಿಸಲಾರಂಭಿಸಿದ್ದಾನೆ. ಇದಕ್ಕೆ ರಾಜೇಶ್ ನಿರಾಕರಿಸಿದ್ದಾನೆ. ಆಗ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಅಂತಿಮವಾಗಿ ಪ್ರಮೋದ್‌ನನ್ನು ಆರೋಪಿ ರಾಜೇಶ್ ಕೊಂದು ಹಾಕಿದ್ದಾನೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ‘ಅಸ್ವಾಭಾವಿಕ ಲೈಂಗಿಕಕ್ರಿಯೆ’ಗೆ ಒತ್ತಾಯಿಸುತ್ತಿದ್ದ ಗಂಡನ ಶಿಶ್ನವನ್ನೇ ಬಾಯಿಂದ ಕತ್ತರಿಸಿದ ಹೆಂಡತಿ!

Exit mobile version