Site icon Vistara News

Delhi liquor policy case: ಸಿಸೋಡಿಯಾ ಅವರನ್ನು 7 ದಿನ ಇ.ಡಿ ವಶಕ್ಕೆ ನೀಡಿದ ವಿಶೇಷ ಕೋರ್ಟ್

Economic offenders Manish Sisodia Mallya and others will get unique code why-how

ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi liquor policy case) ಸಂಬಂಧಿಸಿದಂತೆ ಬಂಧಿತನಾಗಿರುವ ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಏಳು ದಿನಗಳ ಕಾಲ ವಿಶೇಷ ನಿರ್ದೇಶನಾಲಯ(ED) ವಶಕ್ಕೆ ವಿಶೇಷ ನ್ಯಾಯಾಲಯವು ನೀಡಿದೆ. ಒಟ್ಟು ಹತ್ತು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಇ.ಡಿ ಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. ಆದರೆ, ನ್ಯಾಯಾಲಯವು 7 ದಿನಗಳ ಕಾಲ ನೀಡಿದೆ. ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕುರಿತು ಇ. ಡಿ ವಿಚಾರಣೆ ನಡೆಸಲಿದೆ.

ಸಿಸೋಡಿಯಾ ಅವರನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ ವೇಳೆ, ಸಿಸೋಡಿಯಾ ಪರ ವಕೀಲರು ತಮ್ಮ ವಾದ ಮಂಡಿಸಿ, ”ಜಾರಿ ನಿರ್ದೇಶನಾಲಯ ಯಾವುದೇ ನಿಯಮಗಳನ್ನು ಪಾಲಿಸದೇ ಬಂಧಿಸುವುದು ಹಕ್ಕು ಎಂಬಂತೆ ಭಾವಿಸುತ್ತಿದೆ” ಎಂದು ತರಾಟೆಗೆ ತೆಗೆದುಕೊಂಡರು.

ಸಿಬಿಐನಿಂದ ಬಂಧನಕ್ಕೊಳಗಾದ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವ ಒಂದು ದಿನದ ಮೊದಲು ಜಾರಿ ನಿರ್ದೇಶನಾಲಯವು ಸಿಸೋಡಿಯಾ ಅವರನ್ನು ನಿನ್ನೆ ಅಂದರೆ ಗುರುವಾರ ಬಂಧಿಸಿತ್ತು.

ಇತ್ತೀಚಿನ ದಿನಗಳಲ್ಲಿ ಏಜೆನ್ಸಿಗಳು ಅರೆಸ್ಟ್ ಮಾಡುವುದು ತಮ್ಮ ಹಕ್ಕೆಂದು ಪರಿಗಣಿಸುವುದು ಒಂದು ಫ್ಯಾಶನ್ ಆಗಿದೆ. ನ್ಯಾಯಾಲಯಗಳು ಏಜೆನ್ಸಿಗಳ ಈ ಪ್ರವೃತ್ತಿಯ ವಿರುದ್ಧ ಕ್ರಮಕೈಗೊಳ್ಳಬೇಕಾದ ಸಮಯ ಎದುರಾಗಿದೆ ಎಂದು ಸಿಸೋಡಿಯಾ ಪರ ವಕೀಲ ದಯನ್ ಕೃಷ್ಣ ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ಇದನ್ನೂ ಓದಿ: Manish Sisodia: ಮನೀಶ್‌ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಹವಾಲ ಕೇಸ್‌ನಲ್ಲಿ ಬಂಧಿಸಿದ ಇ.ಡಿ

ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಕಡತವನ್ನು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರೇ ಕ್ಲಿಯರ್ ಮಾಡಿದ್ದಾರೆ. ಇ.ಡಿ. ಲೆಫ್ಟಿನೆಂಟ್ ಗವರ್ನರ್ ಅವರನ್ನೂ ಪ್ರಶ್ನಿಸಲಿದೆ ಎಂದು ಆಶಿಸೋಣವೇ ಎಂದು ಅವರು ಪ್ರಶ್ನಿಸಿದರು.

Exit mobile version