Site icon Vistara News

EWS Quota | ಬಡತನ ತಾತ್ಕಾಲಿಕ, EWSಗಳಿಗೆ ಮೀಸಲಾತಿಗಿಂತ ಸುಧಾರಣೆ ಕ್ರಮ ಅಗತ್ಯ, ಸುಪ್ರೀಂ ಅಭಿಮತ

Supreme Court directed the Maharashtra to videograph the Hindu Jan Aakrosh Sabha

ನವದೆಹಲಿ: ಬಡವರಿಗೆ ಮೀಸಲಾತಿಗಿಂತ ಸುಧಾರಣೆ ಕ್ರಮ ಅಗತ್ಯ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿಯಲ್ಲಿ ಮೇಲ್ವರ್ಗದಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EWS Quota) ಶೇ.೧೦ರಷ್ಟು ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮೀಸಲಾತಿ ಅನಗತ್ಯ ಎಂದು ತಿಳಿಸಿದೆ.

“ಮೀಸಲಾತಿ ಎಂಬುದು ವಂಶಾವಳಿಗೆ ಸಂಬಂಧಿಸಿದ್ದಾಗಿದೆ. ಹಾಗೆಯೇ, ಹಿಂದುಳಿಯುವಿಕೆ ಎಂದರೆ ಅದು ಪೀಳಿಗೆಗಳವರೆಗೆ ಮುಂದುವರಿದಿರುತ್ತದೆ. ಆದರೆ, ಬಡತನ ಎಂಬುದು ಹಾಗಲ್ಲ. ಆರ್ಥಿಕವಾಗಿ ಹಿಂದುಳಿದವರು ಎಂಬ ಹಣೆಪಟ್ಟಿಯಿಂದ ಹೊರಬರಲು ಹಲವು ಸುಧಾರಣೆ ಕ್ರಮಗಳು ಸಾಕು. ಶುಲ್ಕ ವಿನಾಯಿತಿ, ವಿದ್ಯಾರ್ಥಿ ವೇತನದಂತಹ ಕ್ರಮ ತೆಗೆದುಕೊಳ್ಳಬುದು. ಹಾಗಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಗಿಂತ ಸುಧಾರಣೆ ಕ್ರಮಗಳ ಅಗತ್ಯವಿದೆ” ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ನೇತೃತ್ವದ ನ್ಯಾಯಪೀಠ ತಿಳಿಸಿದೆ.

ಸಂವಿಧಾನಕ್ಕೆ ೧೦೩ನೇ ತಿದ್ದುಪಡಿ ತಂದು, ಮೇಲ್ವರ್ಗದಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಶೇ.೧೦ರಷ್ಟು ಮೀಸಲಾತಿ ನೀಡಲಾಗಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಆರು ದಿನದಿಂದ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ | BBMP ವಾರ್ಡ್‌ ಮರುವಿಂಗಡಣೆ, ಮೀಸಲಾತಿ ಬಗ್ಗೆ ಮೊದಲು ಹೈಕೋರ್ಟ್‌ ತೀರ್ಮಾನಿಸಲಿ ಎಂದ ಸುಪ್ರೀಂ

Exit mobile version