Site icon Vistara News

Encounters In UP: ಯೋಗಿ ಆಡಳಿತದಲ್ಲಿ 10 ಸಾವಿರ ಎನ್‌ಕೌಂಟರ್‌, 178 ಕ್ರಿಮಿನಲ್‌ಗಳ ಹತ್ಯೆ

Next Target Kashi and Mathura Masjid Says CM Yogi Adityanath

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರು 2017ರಲ್ಲಿ ಮುಖ್ಯಮಂತ್ರಿಯಾದ ಬಳಿಕ ರಾಜ್ಯಾದ್ಯಂತ ಕ್ರಿಮಿನಲ್‌ಗಳನ್ನು ಮಟ್ಟಹಾಕಲಾಗುತ್ತಿದೆ. ಎನ್‌ಕೌಂಟರ್‌ಗಳು, ಪೊಲೀಸರ ದಾಳಿ, ಕಠಿಣ ಕ್ರಮಗಳಿಂದಾಗಿ ಅಪರಾಧಿಗಳೇ ಪೊಲೀಸ್‌ ಠಾಣೆಗೆ ತೆರಳಿ ನಮ್ಮನ್ನು ಬಂಧಿಸಿ ಎಂದು ಮನವಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ. ಇದರ ಭಾಗವಾಗಿಯೇ ಗ್ಯಾಂಗ್‌ಸ್ಟರ್‌ ಆತಿಕ್‌ ಅಹ್ಮದ್‌ ಪುತ್ರ ಅಸಾದ್‌ ಅಹ್ಮದ್‌ನನ್ನು ಉತ್ತರ ಪ್ರದೇಶದ ಪೊಲೀಸರು ಹೊಡೆದುರುಳಿಸಿದ್ದಾರೆ. ಇನ್ನು 2007ರಿಂದ ಇದುವರೆಗೆ ರಾಜ್ಯಾದ್ಯಂತ 178 ಕ್ರಿಮಿನಲ್‌ಗಳನ್ನು (Encounters In UP) ಎನ್‌ಕೌಂಟರ್‌ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ಕಳೆದ ಆರು ವರ್ಷದಲ್ಲಿ ಸರಾಸರಿ 13 ದಿನಕ್ಕೆ ಒಬ್ಬ ಕ್ರಿಮಿನಲ್‌ನನ್ನು ಹತ್ಯೆ ಮಾಡಲಾಗಿದೆ. 2017ರ ಮಾರ್ಚ್‌ನಿಂದ 2023ರ ಮಾರ್ಚ್‌ 6ರವರೆಗೆ 23,069 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಇನ್ನು ಎನ್‌ಕೌಂಟರ್‌ಗಳಲ್ಲಿ 4,911 ಜನರನ್ನು ಬಂಧಿಸಲಾಗಿದೆ. ಕ್ರಿಮಿನಲ್‌ಗಳ ಕುರಿತು ಮಾಹಿತಿ ನೀಡಿದರೆ ಸುಮಾರು 75 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾದ ಕ್ರಿಮಿನಲ್‌ಗಳನ್ನು ಹತ್ಯೆ ಮಾಡಲಾಗಿದೆ. ಇನ್ನು ಎನ್‌ಕೌಂಟರ್‌ಗಳಲ್ಲಿ 15 ಪೊಲೀಸರು ಹುತಾತ್ಮರಾಗಿದ್ದಾರೆ. 1,424 ಪೊಲೀಸರು ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ ಎಂಬುದಾಗಿ ಕಳೆದ ತಿಂಗಳು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೀರತ್‌ ಪೊಲೀಸರಿಂದ ಹೆಚ್ಚು ಎನ್‌ಕೌಂಟರ್‌

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮೀರತ್‌ ಪೊಲೀಸರು ಹೆಚ್ಚಿನ ಪ್ರಮಾಣದಲ್ಲಿ ಎನ್‌ಕೌಂಟರ್‌ ಮಾಡಲಾಗಿದೆ. ಮೀರತ್‌ ಪೊಲೀಸರು ಇದುವರೆಗೆ 5,967 ಕ್ರಿಮಿನಲ್‌ಗಳನ್ನು ಮೀರತ್‌ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ, ಎನ್‌ಕೌಂಟರ್‌ ನಡೆಸುವ ವೇಳೆ 401 ಪೊಲೀಸರು ಗಾಯಗೊಂಡರೆ, ಒಬ್ಬರು ಹುತಾತ್ಮರಾಗಿದ್ದಾರೆ. ಅಂದಹಾಗೆ, ಮೀರತ್‌ ಪೊಲೀಸರು ಕಳೆದ ಆರು ವರ್ಷದಲ್ಲಿ 3,152 ಎನ್‌ಕೌಂಟರ್‌ ಕೈಗೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಆಗ್ರಾ ಪೊಲೀಸರು ಇದ್ದಾರೆ. ಆಗ್ರಾ ಪೊಲೀಸರು 1,844 ಎನ್‌ಕೌಂಟರ್‌ ನಡೆಸಿದ್ದಾರೆ.

ಬಹುಜನ ಸಮಾಜ ಪಾರ್ಟಿ ಶಾಸಕ ರಾಜುಪಾಲ್ ಹತ್ಯೆ ಮತ್ತು ಆ ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್​ ಪಾಲ್​ನನ್ನು 2006ರಲ್ಲಿ ಅಪಹರಣ ಮಾಡಿದ್ದ ಆರೋಪದಡಿ ಜೈಲುಪಾಲಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಜಕಾರಣಿ/ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್​ನ ಪುತ್ರ ಅಸಾದ್​ ಅಹ್ಮದ್‌ನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಎನ್‌ಕೌಂಟರ್‌ ಹಿಂದೆ ಉತ್ತರ ಪ್ರದೇಶ ವಿಶೇಷ ಕಾರ್ಯ ಪಡೆ (STF) ಯೋಜನೆಯಿದ್ದು, ಇದಕ್ಕೆ ಐಪಿಎಸ್‌ ಅಧಿಕಾರಿ, ಎಸ್‌ಟಿಎಫ್‌ ಮುಖ್ಯಸ್ಥ ಅಮಿತಾಭ್‌ ಯಶ್‌ ಅವರು ಉಸ್ತುವಾರಿ ವಹಿಸಿಕೊಂಡಿದ್ದರು. ಇವರು ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂದೇ ಖ್ಯಾತಿಯಾಗಿದ್ದಾರೆ.

ಇದನ್ನೂ ಓದಿ: Asad Encounter: ಮಗ ಎನ್​ಕೌಂಟರ್​ ಆದ ಸುದ್ದಿ ಕೇಳಿ ಕೋರ್ಟ್​​ನಲ್ಲಿಯೇ ದೊಡ್ಡದಾಗಿ ಅಳಲು ಶುರುಮಾಡಿದ ಅತೀಕ್ ಅಹ್ಮದ್​

Exit mobile version