Site icon Vistara News

ಗಾಯಕ ಮೂಸೆವಾಲನನ್ನು ಕೊಂದಿದ್ದು ನಾನೇ, ನೆಕ್ಸ್ಟ್ ಟಾರ್ಗೆಟ್ ಸಲ್ಮಾನ್ ಖಾನ್! ಗ್ಯಾಂಗ್‌ಸ್ಟರ್ ಧಮ್ಕಿ

Sidhu Moosewala-Godly Brar-Salman Khan

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ (Most Wanted Criminal), ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ (Gangster Goldy Brar) ಮುಕ್ತವಾಗಿ ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾನೆ. ಅಲ್ಲದೇ ಪಂಜಾಬ್ ಗಾಯಕ ಸಿಧು ಮೂಸೇವಾಲ್ (sidhu moosewala murder case) ಅವರನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಜತೆಗೆ, ಮುಂದಿನ ಟಾರ್ಗೆಟ್ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಎಂದು ಗೋಲ್ಡಿ ಬ್ರಾರ್ ಹೇಳಿದ್ದಾನೆ.

ನಟೋರಿಯಸ್ ಕ್ರಿಮಿನಲ್ ಸತ್ವಿಂದೇರ್ ಸಿಂಗ್ ಅಲಿಯಾಸ್ ಗೋಲ್ಡೀ ಬ್ರಾರ್ ಇಂಡಿಯಾ ಟುಡೇ ಟಿವಿಗೆ ಸಂದರ್ಶನ ನೀಡಿದ್ದು, ಸಮಯ ಬಂದಾಗ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಕೆನಡಾ ಪೊಲೀಸರು ಗೋಲ್ಡಿ ಬ್ರಾರ್‌ ತಲೆಗೆ ಬಹುಮಾನ ಘೋಷಣೆ ಮಾಡಿದ್ದರೆ, ಇಂಟರ್‌ಪೋಲ್ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಖಂಡಿತವಾಗಿಯೂ ಸಲ್ಮಾನ್ ಖಾನ್ ಅವರನ್ನು ಕೊಂದೇ ಕೊಲ್ಲುತ್ತೇವೆ. ಭಾಯಿ ಸಾಹೇಬ್( ಗ್ಯಾಂಗ್‌ಸ್ಟರ್ ಲಾವರೆನ್ಸ್ ಬಿಷ್ಣೋಯಿ) ಸಲ್ಮಾನ್ ಖಾನ್‌ಗೆ ಕ್ಷಮೆ ಕೇಳುವಂತೆ ಹೇಳಿದ್ದರು. ಅವರು ಕೇಳಿಲ್ಲ. ಹಾಗಾಗಿ, ಸಲ್ಮಾನ್ ಕೊಲ್ಲುವುದು ಶತಃಸಿದ್ಧ. ಸಲ್ಮಾನ್ ಖಾನ್ ಮಾತ್ರವಲ್ಲ, ನಮ್ಮ ವೈರಿಗಳು ಯಾರೆಲ್ಲ ಇದ್ದಾರೋ ಅವರನ್ನು ಕೊಂದೇ ಕೊಲ್ಲುತ್ತೇವೆ. ಸಲ್ಮಾನ್ ಖಾನ್ ನಮ್ಮ ಮುಂದಿನ ಟಾರ್ಗೆಟ್ ಎಂದು ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಸಿದ AN-94 ರೈಫಲ್‌, AK-47ಕ್ಕಿಂತ ಅಪಾಯಕಾರಿ

ಸಿಧೂ ಮೂಸೆವಾಲ್ ಬಹಳ ಹಠಮಾರಿಯಾಗಿದ್ದ, ಹಾಳಾಗಿದ್ದ. ಆತನ ಬಳಿ ಸಾಕಷ್ಟು ಹಣ ಇತ್ತು. ರಾಜಕೀಯ ಮತ್ತು ಪೊಲೀಸ್ ಪವರ್ ಅಗತ್ಯಕ್ಕಿಂತ ಹೆಚ್ಚಾಗಿಯೇ ಆತನಿಗಿತ್ತು. ಅದನ್ನು ಆತ ದುರುಪಯೋಗ ಬಳಸಿಕೊಳ್ಳುತ್ತಿದ್ದ. ಆತನಿಗೆ ಪಾಠ ಕಲಿಸಬೇಕಿತ್ತು. ಹಾಗಾಗಿ ಕೊಲೆ ಮಾಡಿದೆ ಎಂದು ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹೇಳಿದ್ದಾನೆ.

ಮೀಡಿಯಾದವರು ಬಹಳ ದಿನಗಳಿಂದಲೂ ದಾವೂದ್ ಇಬ್ರಾಹಿಂ ಜತೆಗೆ ನನ್ನ ನಂಟಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ಈ ದೇಶದ ಮೇಲೆ ಬಾಂಬ್ ಹಾಕಿದವರ ಜತೆಗೆ ನಮ್ಮ ದೋಸ್ತಿ ಇಲ್ಲ. ಆತ (ದಾವೂದ್ ಇಬ್ರಾಹಿಂ) ಪಾಕಿಸ್ತಾನದಲ್ಲಿ ಕುಳಿತುಕೊಂಡು ಉಗ್ರ ಹರ್ವೀಂದರ್ ಸಿಂಗ್ ರಿಂದಾ ಜತೆ ಮಾತನಾಡುತ್ತಾನೆ. ಈತನೇ ಸಿಧು ಮೂಸೆವಾಲ್ ಜತೆ ರಾಜಿ ಮಾಡಿಕೊಂಡವನು ಎಂದು ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಹೇಳಿದ್ದಾನೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version