Site icon Vistara News

Kerala Gold Smuggling Case: ನಾನು ಸುಮ್ಮನಿರಲು 30 ಕೋಟಿ ರೂ. ಆಫರ್‌; ಪಿಣರಾಯಿ ವಿರುದ್ಧ ಸ್ವಪ್ನಾ ಆರೋಪ

I was offered Rs 30 crore to keep mum: Swapna Suresh's shocking claim in Kerala gold smuggling case

ಸ್ವಪ್ನಾ ಸುರೇಶ್

ತಿರುವನಂತಪುರಂ/ಬೆಂಗಳೂರು: ಕೇರಳದಲ್ಲಿ ಅಕ್ರಮವಾಗಿ ಚಿನ್ನದ ಸಾಗಣೆ ಮಾಡಿದ ಪ್ರಕರಣದ Kerala Gold Smuggling Case() ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್‌ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ಚಿನ್ನ ಸಾಗಣೆ ಪ್ರಕರಣದಲ್ಲಿ ನಾನು ಸುಮ್ಮನಿರಬೇಕು ಎಂಬುದಾಗಿ ನನಗೆ 30 ಕೋಟಿ ರೂಪಾಯಿಯ ಆಫರ್‌ ನೀಡಲಾಗಿತ್ತು” ಎಂದು ಆರೋಪಿಸಿದ್ದಾರೆ. ಇದು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

“ಅಕ್ರಮವಾಗಿ ಚಿನ್ನ ಸಾಗಣೆ ನಡೆದ ಪ್ರಕರಣದಲ್ಲಿ ಪಿಣರಾಯಿ ವಿಜಯನ್‌ ಹಾಗೂ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ನೀಡಬೇಕು. ಇದಕ್ಕಾಗಿ 30 ಕೋಟಿ ರೂ. ಕೊಡಲಾಗುವುದು ಎಂಬುದಾಗಿ ಆಡಳಿತಾರೂಢ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್‌ ಮೂಲಕ ಹಾಕಲಾಗಿದೆ. ಅಲ್ಲದೆ, ಸಿಎಂ ವಿರುದ್ಧದ ಸಾಕ್ಷ್ಯಾಧಾರಗಳನ್ನು ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಸ್ವಪ್ನಾ ಸುರೇಶ್‌ ಅವರು ಫೇಸ್‌ಬುಕ್‌ ಲೈವ್‌ ಮೂಲಕ ಮಾಹಿತಿ ನೀಡಿದ್ದಾರೆ.

2020ರ ಜುಲೈ 5ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಯುಎಇಯಿಂದ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 15 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಕೇರಳ ಸಿಎಂ ಸೇರಿ ಹಲವರ ಹೆಸರು ಹೇಳಿಬಂದಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್‌ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಇದನ್ನೂ ಓದಿ: Gold Smuggling : ಏರ್‌ ಇಂಡಿಯಾ ಸಿಬ್ಬಂದಿ ಕೈಗಳಲ್ಲಿತ್ತು 1.4 ಕೆ.ಜಿ. ಚಿನ್ನ! ಕೊಚ್ಚಿ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಸಿಬ್ಬಂದಿ

Exit mobile version