Site icon Vistara News

ಪಿಎಚ್​​ಡಿ ಮಾಡಲು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ; ಚೂರಿಯಿಂದ 11 ಬಾರಿ ಇರಿದ ದುಷ್ಕರ್ಮಿ

Indian Student Stabbed In Australia

ಲಖನೌ: ಇತ್ತೀಚೆಗೆ ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ, ಅವರ ಮಗು ಮತ್ತು ಅವರ ಸಂಬಂಧಿ ಸೇರಿ ನಾಲ್ವರನ್ನು ಹತ್ಯೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿದೆ. ಚೆನ್ನೈನ ಐಐಟಿ ಮದ್ರಾಸ್​ ಯೂನಿವರ್ಸಿಟಿಯಲ್ಲಿ ಪದವಿ ಪಡೆದು, ಸಿಡ್ನಿಯಲ್ಲಿರುವ ನ್ಯೂ ಸೌತ್​ ವೇಲ್ಸ್​​ ಯೂನಿವರ್ಸಿಟಿಯಲ್ಲಿ ಪಿಎಚ್​ಡಿ ಮಾಡುವ ಸಲುವಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ 28 ವರ್ಷದ ಯುವಕ ಶುಭಮ್ ಜಾರ್ಜ್​ ಹಲ್ಲೆಗೆ ಒಳಗಾದ ಯುವಕ. ಆ ದುಷ್ಕರ್ಮಿ ಶುಭಮ್​​ಗೆ ಒಟ್ಟು 11 ಬಾರಿ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಶುಭಮ್​ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಹಾಯ ಮಾಡಿ ಎಂದು ಆತನ ಕುಟುಂಬದವರು ಪ್ರಧಾನಿ ಮೋದಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಶುಭಮ್​ ಮೂಲತಃ ಉತ್ತರ ಪ್ರದೇಶದ ಆಗ್ರಾದವನು. ಕುಟುಂಬವೆಲ್ಲ ಇಲ್ಲೇ ನೆಲೆಸಿದೆ. ಸೆಪ್ಟೆಂಬರ್​ 1ರಂದು ಸಿಡ್ನಿಗೆ ಹೋಗಿದ್ದ. ಅಕ್ಟೋಬರ್​ 6ರಂದು ರಾತ್ರಿ 10.30ರ ಹೊತ್ತಿಗೆ ಎಟಿಎಂಗೆ ಹೋಗಿ ಹೊರಬಂದ ನಂತರ ವ್ಯಕ್ತಿಯೊಬ್ಬ ಆತನನ್ನು ಅಡ್ಡಗಟ್ಟಿದ್ದ. ಹಣವನ್ನೆಲ್ಲ ಕೊಡುವಂತೆ ಆಗ್ರಹಿಸಿದ. ಆದರೆ ಶುಭಮ್​ ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ಆಗ ದುಷ್ಕರ್ಮಿ ಕ್ರೋಧದಿಂದ ಶುಭಮ್​ಗೆ ಇರಿದಿದ್ದ. ಆತನ ಮುಖ, ಎದೆ, ಹೊಟ್ಟೆಗೆಲ್ಲ ಸಿಕ್ಕಾಪಟೆ ಇರಿದಿದ್ದಾನೆ.

ಅಕ್ಟೋಬರ್​ 6ರಂದು ಈ ಘಟನೆ ನಡೆದಿದ್ದರೂ ಉತ್ತರ ಪ್ರದೇಶದಲ್ಲಿ ಇರುವ ಕುಟುಂಬದವರಿಗೆ ಈ ಬಗ್ಗೆ ಗೊತ್ತಾಗಿದ್ದು ಅಕ್ಟೋಬರ್​ 8ರಂದು. ಅಂದು ಶುಭಮ್​ಗೆ ಆತನ ತಂದೆ ರಾಮನಿವಾಸ್​ ಗಾರ್ಗ್​ ಕರೆ ಮಾಡಿದ್ದರು. ಆದರೆ ಆತ ಆಸ್ಪತ್ರೆಯಲ್ಲಿ ಇದ್ದುದರಿಂದ ಸ್ವೀಕರಿಸಿರಲಿಲ್ಲ. ಹೀಗಾಗಿ ಆತಂಕಗೊಂಡ ತಂದೆ, ಶುಭಮ್​ ಸ್ನೇಹಿತನಿಗೆ ಕರೆ ಮಾಡಿದ್ದಾರೆ. ಆಗಲೇ ವಿಷಯ ಗೊತ್ತಾಗಿದೆ. ಶುಭಮ್​ ಅಪಾಯದಲ್ಲಿದ್ದಾನೆ ಎಂದು ಗೊತ್ತಾದ ತಕ್ಷಣ ಆತನ ಕುಟುಂಬದವರು ವೀಸಾಕ್ಕೆ ಮನವಿ ಮಾಡಿದ್ದರು. ಶುಭಮ್ ಸೋದರನನ್ನು ಸಿಡ್ನಿಗೆ ಕಳಿಸುವುದು ಅವರ ಇಚ್ಛೆಯಾಗಿತ್ತು. ಆದರೆ ಇಂದು ಆ ಕುಟುಂಬಕ್ಕೆ ವೀಸಾ ಸಿಕ್ಕಿದೆ ಎನ್ನಲಾಗಿದೆ. ಇನ್ನು ತಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ದಾಳಿ ಮಾಡಿದವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರಿಗೂ ಬಿಡುವುದಿಲ್ಲ ಎಂದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮಿಷನ್​ ಕೂಡ ಹೇಳಿದೆ.

ಶುಭಮ್​​ಗೆ ಈಗಾಗಲೇ ಹಲವು ಸರ್ಜರಿಗಳು ಆಗಿವೆ. ಈ ಬಗ್ಗೆ ಆತನ ಸೋದರಿ ಕಾವ್ಯಾ ಗಾರ್ಗ್​ ಟ್ವೀಟ್ ಮಾಡಿ ‘ನನ್ನ ಸೋದರನ ಸ್ಥಿತಿ ಗಂಭೀರವಾಗಿದೆ. ಆತನಿಗೆ ಸಹಾಯ ಮಾಡಬೇಕು. ಈ ವಿಚಾರದಲ್ಲಿ ನಮಗೆ ಸರ್ಕಾರಗಳು ನೆರವು ನೀಡಬೇಕು ಎಂದು ಬಯಸುತ್ತೇವೆ ಎಂದಿದ್ದಾರೆ. ಹಾಗೇ, ಪ್ರಧಾನಿ ಮೋದಿ, ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಎಸ್​. ಜೈಶಂಕರ್​, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಟ್ಯಾಗ್​ ಮಾಡಿದ್ದಾರೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ |ಮೌಲ್ಯಗಳನ್ನು ಬೋಧನೆ ಮಾಡದೆ ಅವುಗಳನ್ನೇ ಬದುಕಿದ ಮಹಾ ಗುರು ಪ್ರೊ. ಎಚ್.‌ ನರಸಿಂಹಯ್ಯ

Exit mobile version