Site icon Vistara News

ಸರ್ಕಾರಕ್ಕೆ ಗಡುವು ನೀಡಬೇಡಿ ಎಂದು ರಾಜ್‌ ಠಾಕ್ರೆಗೆ ಪವಾರ್‌ ಎಚ್ಚರಿಕೆ

ಮಹಾರಾಷ್ಟ್ರ : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಗುರುವಾರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಲು ಕರೆ ನೀಡಿದ್ದಾರೆ. ಸರ್ಕಾರಕ್ಕೆ ಗಡುವು ನೀಡುವ ರೀತಿಯಲ್ಲಿ ಯಾರೂ ಮಾತನಾಡಬೇಡಿ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಗುರುವಾರ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಶಬ್ದ ಮಾಲಿನ್ಯದ ಕುರಿತು ಸುಪ್ರೀಂಕೋರ್ಟ್‌ನ ತೀರ್ಪು ಮಹಾರಾಷ್ಟ್ರದ ಎಲ್ಲಾ ಪೂಜಾ ಸ್ಥಳಗಳಿಗೆ ಅನ್ವಯಿಸುತ್ತದೆ. ರಾಜ್ಯ ಸರ್ಕಾರ ಕಾನೂನು ಮತ್ತು ಸಂವಿಧಾನದ ಪ್ರಕಾರ ನಡೆಯುತ್ತದೆ. ಯಾರಾದರೂ ಕಾನೂನು ಮುರಿಯಲು ಪ್ರಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎನ್‌ಸಿಪಿಯ ಹಿರಿಯ ನಾಯಕರೂ ಆಗಿರುವ ಉಪಮುಖ್ಯಮಂತ್ರಿ ಪವಾರ್‌ ಹೇಳಿದ್ದಾರೆ.

ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ರಾಜ್ಯ ಸರ್ಕಾರಕ್ಕೆ MNS ಅಧ್ಯಕ್ಷ ಠಾಕ್ರೆ ಈ ಹಿಂದೆ ಗಡುವು ನೀಡಿದ್ದರು. ಎಲ್ಲೆಲ್ಲಿ ಧ್ವನಿವರ್ಧಕಗಳ ಮೂಲಕ “ಆಜಾನ್” (ಇಸ್ಲಾಮಿಕ್ ಪ್ರಾರ್ಥನೆ ಕರೆ)” ನಡೆಯುತ್ತದೆಯೋ ಅಲ್ಲೆಲ್ಲ ಹನುಮಾನ್ ಚಾಲೀಸಾವನ್ನು ನುಡಿಸುವಂತೆ ಜನರನ್ನು ಒತ್ತಾಯಿಸಿದರು.

ಇದನ್ನೂ ಓದಿ | ಗದಾಧಾರಿ V/S ಘಂಟಾಧಾರಿ ಹಿಂದುತ್ವ: ಬಿಜೆಪಿ ವಿರುದ್ಧ ಹರಿಹಾಯ್ದ ಮಹಾರಾಷ್ಟ್ರ CM ಠಾಕ್ರೆ

ಎಂಎನ್‌ಎಸ್ ನಾಯಕನ ಹೆಸರು ಹೇಳದ ಪವಾರ್, “ಯಾರೂ ಸರ್ಕಾರಕ್ಕೆ ಗಡುವು ನೀಡುವ ರೀತಿಯಲ್ಲಿ ಮಾತನಾಡಬಾರದು. ಇದು ಸರ್ವಾಧಿಕಾರವಲ್ಲ. ನಿಮ್ಮ ಮನೆಯೊಳಗೆ ಕುಳಿತು ನಿಮ್ಮ ಕುಟುಂಬ ಸದಸ್ಯರಿಗೆ ನೀವು ಹೇಳಿಕೊಳ್ಳಿ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೆ ಯಾರಾದರೂ ಅಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ಮಾಡುತ್ತಿದ್ದರೆ, ನೆನಪಿಡಿ, ಸರ್ಕಾರಗಳು ಮತ್ತು ದೇಶವು ಕಾನೂನುಗಳು ಮತ್ತು ಸಂವಿಧಾನದ ಪ್ರಕಾರ ನಡೆಯುತ್ತದೆ … ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ” ಎಂದು ಅವರು ಹೇಳಿದರು.

ಠಾಕ್ರೆಯನ್ನು ಗುರಿಯಾಗಿಟ್ಟುಕೊಂಡು, ಜನರ ಭಾವನೆಗಳನ್ನು ಉತ್ತೇಜಿಸುವುದು ಸುಲಭ, ಆದರೆ ಸುಪ್ರೀಂಕೋರ್ಟ್‌ ಆದೇಶದ ಅನುಷ್ಠಾನಕ್ಕೆ ಬಂದಾಗ, ಎಲ್ಲಾ ಧಾರ್ಮಿಕ ಸ್ಥಳಗಳು ಅದನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದರು. ಮಹಾರಾಷ್ಟ್ರದ ಎಲ್ಲಾ ಧಾರ್ಮಿಕ ಸ್ಥಳಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿಯನ್ನು ತೆಗೆದುಕೊಳ್ಳಬೇಕು ಮತ್ತು ಸುಪ್ರೀಂಕೋರ್ಟ್ ಸೂಚಿಸಿದ ಡೆಸಿಬಲ್ ಮಟ್ಟದಲ್ಲಿ ಅದೇ ಧ್ವನಿಯನ್ನು ನುಡಿಸಬೇಕು ಎಂದು ಅವರು ಒತ್ತಾಯಿಸಿದರು.

ಯಾರೂ ಒತ್ತಡ ಅಥವಾ ಭಾವನಾತ್ಮಕ ಮನವಿಗೆ ಬಲಿಯಾಗಬಾರದು ಮತ್ತು ಜನರು ರಾಜ್ಯದಲ್ಲಿ ಸರಿಯಾದ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪವಾರ್ ಹೇಳಿದರು.

ಇದನ್ನೂ ಓದಿ | ಈ ಗ್ರಾಮದ ಮಹಿಳೆಯರು ಮದುವೆಯಾಗಿ ಮೂರೇ ದಿನಕ್ಕೆ ಓಡಿ ಹೋಗುತ್ತಾರೆ !

ರಾಜ್‌ ಠಾಕ್ರೆ ಫುಲ್‌ ಗರಂ :

ಮಾರ್ಗಸೂಚಿಯನ್ನು ಉಲ್ಲಂಘಿಸಿ ಆಜಾನ್‌ ಹಾಡಿದ ಮಸೀದಿಗಳ ಮೇಲೇ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಮಹಾರಾಷ್ಟ್ರ ಸರ್ಕಾರವನ್ನು ರಾಜ್‌ ಠಾಕ್ರೆ ಪ್ರಶ್ನಿಸಿದ್ದಾರೆ. ಗುರುವಾರ ಪ್ರತಿಕ್ರಿಯಿಸಿದ ಠಾಕ್ರೆ, ನನಗೆ ತಿಳಿದಿರುವಂತೆ ಮುಂಬೈನಲ್ಲಿ 1,140 ಕ್ಕೂ ಹೆಚ್ಚು ಮಸೀದಿಗಳಿವೆ. ಇವುಗಳಲ್ಲಿ 135 ಮಸೀದಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಂಜಾನೆ 5 ಗಂಟೆಗೆ ಅಜಾನ್ ಹಾಡಿದವು. ಈ ಮಸೀದಿಗಳ ವಿರುದ್ಧ ನೀವು ಯಾವ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ನಾನು ಪೊಲೀಸರನ್ನು ಕೇಳಲು ಬಯಸುತ್ತೇನೆ ಎಂದಿದ್ದಾರೆ.

ಮುಂಬೈ ಪೊಲೀಸರು 140ಕ್ಕೂ ಹೆಚ್ಚು ಎಂಎನ್‌ಎಸ್‌ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ತಾವು ಮತ್ತು ತಮ್ಮ ಪಕ್ಷವು ಕಾನೂನುಬದ್ಧವಾಗಿ ಧ್ವನಿವರ್ಧಕಗಳನ್ನು ತೆಗೆಯುವಂತೆ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಮಸೀದಿಗಳಿಂದ ಎಲ್ಲ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂಬುದು ನನ್ನ ಉದ್ದೇಶ. ಅವರನ್ನು ತೊಲಗಿಸುವವರೆಗೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ಎಂಎನ್‍ಎಸ್ ಕಾರ್ಯಕರ್ತರು ಮುಂಬೈ, ನವಿ ಮುಂಬೈ ಮತ್ತು ಥಾಣೆಯ ಅನೇಕ ಮಸೀದಿಗಳ ಮುಂದೆ ಗುರುವಾರ ಬೆಳಗ್ಗೆ ಆಜಾನ್ ಸಮಯದಲ್ಲಿ ಹನುಮಾನ್ ಚಾಲೀಸಾವನ್ನು ನುಡಿಸಿದರು.

Exit mobile version