Site icon Vistara News

ದಟ್ಟಾರಣ್ಯಕ್ಕೆ ಹೋಗಿ ಬಂಡೆಗಳ ಮಧ್ಯೆ ಗುಹೆಯಲ್ಲಿ ಸಿಕ್ಕಿಬಿದ್ದ ಯುವಕ; ಇದು ಪಕ್ಕಾ ‘ಹನಿಟ್ರ್ಯಾಪ್​’!

Man trapped Inside Cave in Telangana

ತೆಲಂಗಾಣ: ಇಲ್ಲಿನ ಕಾಮಾರೆಡ್ಡಿ ಜಿಲ್ಲೆಯ ಸಿಂಗರಾಯಕೊಂಡ ಅರಣ್ಯಪ್ರದೇಶದಲ್ಲಿರುವ ಬೆಟ್ಟವೊಂದರ ಗುಹೆಯಲ್ಲಿ ಯುವಕನೊಬ್ಬ ಸಿಕ್ಕಿಬಿದ್ದಿದ್ದು, ಕಳೆದ 30 ತಾಸುಗಳಿಂದಲೂ ಅವನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಯುವಕ ರಾಜು ಪಕ್ಕಾ ‘ಹನಿಟ್ರ್ಯಾಪ್​​​’ಗೆ ಒಳಗಾಗಿದ್ದಾನೆ..!

ಸಾಮಾನ್ಯವಾಗಿ ಯಾರಾದರೂ ಅದರಲ್ಲೂ ಗಣ್ಯರು ಮಹಿಳೆಯರ ಮೋಸದ ಜಾಲಕ್ಕೆ ಬಿದ್ದರೆ ಅದನ್ನು ‘ಹನಿಟ್ರ್ಯಾಪ್​’ ಎಂದು ಕರೆಯುವ ವಾಡಿಕೆ ಇದೆ. ಆದರೆ ಇಲ್ಲಿ ಗುಹೆಯಲ್ಲಿ ಸಿಕ್ಕಿಬಿದ್ದ ಯುವಕ ರಾಜು ಹಾಗೇನೂ ಆಗಿಲ್ಲ. ಬದಲಾಗಿ ಆತ ಜೇನುತುಪ್ಪ ತೆಗೆಯಲು ದಟ್ಟಾರಣ್ಯಕ್ಕೆ ಹೋಗಿ, ಅಲ್ಲಿ ಎರಡು ಬಂಡೆಗಳ ಮಧ್ಯೆ ಸಿಕ್ಕಿಬಿದ್ದಿದ್ದಾನೆ. ಹೀಗಾಗಿ ಇದೊಂದು ಪಕ್ಕಾ ಹನಿಟ್ರ್ಯಾಪ್​ ಆದಂತಾಗಿದೆ. ತೆಲಂಗಾಣದ ರೆಡ್ಡಿಪೇಟಾ ನಿವಾಸಿಯಾದ ರಾಜು ಅರಣ್ಯಕ್ಕೆ ಹೋಗಿ ಜೇನು ತೆಗೆಯಲು ಪ್ರಯತ್ನಿಸುತ್ತಿದ್ದಾಗ ಆತನ ಮೊಬೈಲ್​​ ಕಲ್ಲುಗಳ ಮಧ್ಯೆ ಬಿದ್ದುಹೋಯಿತು. ಅದನ್ನು ತೆಗೆಯಲೆಂದು ಬಾಗಿದಾಗ ಅವನೂ ಆಯತಪ್ಪಿ, ಬಿದ್ದಿದ್ದಾನೆ. ಗುಹೆಯ 15 ಅಡಿಗಳಷ್ಟು ಆಳದಲ್ಲಿರುವ ಆತನನ್ನು ಮೇಲೆತ್ತಲು ರಕ್ಷಣಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಬಂಡೆಗಳನ್ನು ಸರಿಸುವ ಪ್ರಯತ್ನ ನಡೆಯುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಸೋಮನಾಥ್​ ‘ಕಳೆದ ಒಂದೂವರೆ ದಿನಗಳಿಂದಲೂ ರಾಜು ಗುಹೆಯಲ್ಲೇ ಇದ್ದಾನೆ. ಆತ ಮೊಬೈಲ್​​ ಎತ್ತಿಕೊಳ್ಳಲು ಹೋಗಿ ಬಿದ್ದ. ಮೊದಲು ಅವನ ಕುಟುಂಬದವರು ಅಲ್ಲಿಗೆ ತೆರಳಿ ರಾಜುನನ್ನು ಮೇಲೆತ್ತಲು ಯತ್ನಿಸಿದರು. ಆದರೆ ಸಾಧ್ಯವಾಗದೆ ಇದ್ದಾಗ ನಮಗೆ ಕರೆ ಮಾಡಿದರು. ಕೂಡಲೇ ಹೋಗಿ ಮೊದಲು ಸ್ವಲ್ಪ ತಿಂಡಿ, ಒಆರ್​ಎಸ್​ ಕೊಟ್ಟೆವು. ಧೈರ್ಯವನ್ನೂ ತುಂಬಿದ್ದೇವೆ. ಕಲ್ಲುರಾಶಿಗಳೇ ಇರುವುದರಿಂದ ರಕ್ಷಣಾ ಕಾರ್ಯವೂ ಸುಲಭವಲ್ಲ. ಆದರೂ ಆದಷ್ಟು ಬೇಗ ರಾಜುವನ್ನು ಹೊರಗೆ ಕರೆದುಕೊಂಡು ಬರುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral news | 10,000 ಉದ್ಯೋಗಿಗಳಿಗೆ ಮೂರು ದಿನದ ಡಿಸ್ನಿ ವರ್ಲ್ಡ್‌ ಪ್ರವಾಸ ಮಾಡಿಸಿದ ಬಾಸ್!

Exit mobile version