Site icon Vistara News

Maoists Killed BJP Leader: ಕುಟುಂಬಸ್ಥರ ಎದುರೇ ಬಿಜೆಪಿ ನಾಯಕನ ಶಿರಚ್ಛೇದ ಮಾಡಿದ ನಕ್ಸಲರು

Maoists Killed BJP Leader

#image_title

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ರಕ್ಕಸ ಕೃತ್ಯಗಳು ಮುಂದುವರಿದಿವೆ. ಬಿಜಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಕ್ಸಲರು ಕುಟುಂಬಸ್ಥರ ಎದುರೇ ಬಿಜೆಪಿ ನಾಯಕರೊಬ್ಬರ ಶಿರಚ್ಛೇದ (Maoists Killed BJP Leader) ಮಾಡುವ ಮೂಲಕ ರಕ್ಕಸ ಕೃತ್ಯ ಎಸಗಿದ್ದಾರೆ.

ಬಿಜಾಪುರ ಜಿಲ್ಲೆಯ ಉಸುರ್‌ ಮಂಡಲದ ಅಧ್ಯಕ್ಷರಾಗಿ ಕಳೆದ ೧೫ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಬಿಜೆಪಿ ಮುಖಂಡ ನೀಲಕಂಠ ಕಕ್ಕೆಮ್‌ ಅವರನ್ನು ಹತ್ಯೆ ಮಾಡಲಾಗಿದೆ. ನೀಲಕಂಠ ಅವರು ತಮ್ಮ ಗ್ರಾಮವಾದ ಅವಪಲ್ಲಿಗೆ ಭೇಟಿ ನೀಡಿದಾಗ ಮನಗೆ ನುಗ್ಗಿದ ನಕ್ಸಲರು ಅವರನ್ನು ಹೊರಗೆ ಎಳೆದಿದ್ದಾರೆ. ಬಳಿಕ ಕುಟುಂಬಸ್ಥರ ಎದುರೇ ಕೊಡಲಿ ಸೇರಿ ಹಲವು ಮಾರಕಾಸ್ತ್ರಗಳಿಂದ ನೀಲಕಂಠ ಅವರ ಶಿರಚ್ಛೇದಗೊಳಿಸಿದ್ದಾರೆ.

“ಅವಪಲ್ಲಿ ಗ್ರಾಮದಲ್ಲಿ ನಾಗರಿಕರೊಬ್ಬರನ್ನು ಹತ್ಯೆ ಮಾಡಲಾದ ಕುರಿತು ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ಮಾವೋವಾದಿಗಳೇ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: IED Recovered: ಬಿಹಾರದ ಮಾವೋವಾದಿ ಪ್ರಾಬಲ್ಯದ ಪ್ರದೇಶದಲ್ಲಿ 162 ಸ್ಫೋಟಕ ವಶ, ತಪ್ಪಿದ ಭಾರಿ ಅನಾಹುತ

Exit mobile version