Site icon Vistara News

Murder Case : ಭಕ್ತನ ಮೈಮೇಲೆ ದೆವ್ವ ಸೇರಿದೆ ಎಂದು ಚೆನ್ನಾಗಿ ಬಡಿದು ಕೊಂದ ಚರ್ಚ್‌ ಫಾದರ್‌!

Crime News

ಚಂಡೀಗಢ: ಮೈಮೇಲೆ ದೆವ್ವ ಸೇರಿಕೊಂಡಿದೆ ಎಂದು ಆತನಿಗೆ ಚೆನ್ನಾಗಿ ಬಡಿದು ದೆವ್ವ ಬಿಡಿಸಲು ಹೋದ ಚರ್ಚ್‌‌ನ ಪಾಸ್ಟರ್‌ ಕೊಲೆಗಾರನಾದ ಆಘಾತಕಾರಿ ಘಟನೆ ನಡೆದಿದೆ. ದೆವ್ವ ಬಿಡಿಸಲು ಯಗ್ಗಾಮುಗ್ಗಾ ಬಡಿದ ಕಾರಣ ಆತ ಮೃತಪಟ್ಟಿದ್ದಾನೆ (Murder Case). ಘಟನೆಯಲ್ಲಿ ಪಾಸ್ಟರ್‌ಗೆ ಎಂಟು ಮಂದಿ ನೆರವು ನೀಡಿದ್ದು ಎಲ್ಲರ ಮೇಲೂ ಕೊಲೆ ಕೇಸ್‌ ದಾಖಲಾಗಿದೆ. ಪಂಜಾಬ್‌‌‌ ಗುರುದಾಸ್ಪುರ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಗುರುದಾಸ್ಪುರದ ಧರಿವಾಲ್‌ನ ಸಿಂಗ್ಪುರ ಗ್ರಾಮದ ನಿವಾಸಿ ಸ್ಯಾಮ್ಯುಯೆಲ್ ಮಾಸಿಹ್ ಮೃತಪಟ್ಟವರು. ಅವರಿಗೆ ಅನಾರೋಗ್ಯ ಸಮಸ್ಯೆ ಇತ್ತು. ಅದು ದೆವ್ವ ಎಂದು ಅಂದುಕೊಂಡಿದ್ದ ಅವರು ಬಡಿದಿದ್ದರು.

ಮಾಸಿಹ್ ಅವರ ಕುಟುಂಬವು ಬುಧವಾರ ಪ್ರಾರ್ಥನೆ ನಡೆಸಲು ಜಾಕೋಬ್ ಮಾಸಿಹ್ ಎಂದು ಗುರುತಿಸಲಾದ ಸ್ಥಳೀಯ ಪಾದ್ರಿಯನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಅಲ್ಲಿಗ ಹೋದ ಪಾದ್ರಿಯು ಆತ ದೆವ್ವದಿಂದ ಪೀಡಿತನಾಗಿದ್ದೇನೆ ಎಂದು ಕುಟುಂಬಕ್ಕೆ ಹೇಳಿದ್ದರು. ನಂತರ, ಪಾದ್ರಿ ಮತ್ತು ಇತರ ಎಂಟು ಜನರು ಮಾಸಿಹ್‌ನನ್ನು ಹೊಡೆಯಲು ಪ್ರಾರಂಭಿಸಿದ್ದ. ಅವರ ಹೊಡೆತವನ್ನು ನೋಡಿದ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದರೂ ಪಾದ್ರಿ ಏನೂ ಆಗುವುದಿಲ್ಲ ಎಂದು ಭರವಸೆ ಕೊಟ್ಟಿದ್ದ. ಆದರೆ, ಸರಿಯಾಗಿ ಪೆಟ್ಟು ತಿಂದ ಸ್ಯಾಮ್ಯುಯೆಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮರುದಿನ ಅವರೆಲ್ಲರೂ ಸೇರಿಕೊಂಡು ಆತನ ಅಂತ್ಯಕ್ರಿಯೆ ನಡೆಸಿತ್ತು.

ಇದನ್ನೂ ಓದಿ: Crime News : ತನ್ನನ್ನು ಬಿಟ್ಟು ಹೆಂಡತಿಗೆ ಹೆಚ್ಚು ಹಣ ಕೊಡುತ್ತಿ ದ್ದ ಪ್ರಿಯತಮನ ಮರ್ಮಾಂಗ ಕತ್ತರಿಸಿದ ಮಹಿಳೆ

ಘಟನೆ ನಡೆದ ಎರಡು ದಿನಗಳ ನಂತರ, ಸ್ಯಾಮ್ಯುಯೆಲ್‌ನ ತಾಯಿ ಮತ್ತು ಅವನ ಹೆಂಡತಿ ಪಾದ್ರಿಯ ವಿರುದ್ಧ ದೂರು ದಾಖಲಿಸಿದ್ದರು. ಸ್ಯಾಮ್ಯುಯೆಲ್ ಶವವನ್ನು ಶನಿವಾರ ಮರಣೋತ್ತರ ಪರೀಕ್ಷೆಗಾಗಿ ಹೊರತೆಗೆಯಲಾಗಿತ್ತು. ಪ್ರಕ್ರಿಯೆಯನ್ನು ಮ್ಯಾಜಿಸ್ಟ್ರೇಟ್ ಇಂದರ್ಜಿತ್ ಕೌರ್ ಅವರ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ. ಪಾದ್ರಿ ಮತ್ತು ಇತರ ಎಂಟು ಜನರ ವಿರುದ್ಧ ದೂರು ದಾಖಲಾಗಿದೆ.

Exit mobile version