Site icon Vistara News

Physical Abuse: ಚಲಿಸುತ್ತಿರುವ ಆಟೋದಲ್ಲಿ ಯುವತಿ ಮೇಲೆ ಅತ್ಯಾಚಾರ, ಉತ್ತರ ಪ್ರದೇಶದಲ್ಲಿ ಆರೋಪಿ ಸೆರೆ!

Rape

ಮುಂಬೈ, ಮಹಾರಾಷ್ಟ್ರ: ದೇಶದ ವಾಣಿಜ್ಯ ರಾಜಧಾನಿ ಮುಂಬೈ (Mumbai City)ಮಹಾನಗರದಲ್ಲಿ ಮತ್ತೊಂದು ಬೆಚ್ಚಿ ಬೀಳುವ ಘಟನೆ ನಡೆದಿದೆ. 24 ವರ್ಷದ ಆಟೋ ಡ್ರೈವರ್‌ನೊಬ್ಬ (Autorickshaw Driver) 20 ವರ್ಷದ ಯುವತಿಯ (20 year old girl) ಮೇಲೆ ಚಲಿಸುತ್ತಿರುವ ಆಟೋದಲ್ಲೇ ಅತ್ಯಾಚಾರ (Physical Abuse) ಮಾಡಿ, ಆಕೆಗೆ ಕೊಲೆ ಬೆದರಿಕೆ (Life Threaten) ಹಾಕಿದ ಘಟನೆ ನಡೆದಿದೆ. ಮುಂಬೈನ ಗೋರೆಗಾಂವ್ ಆರೆ ಕಾಲೋನಿಯ ಸಮೀಪ ಯುವತಿಯನ್ನು ಆರೋಪಿ ಅತ್ಯಾಚಾರ ಮಾಡಿದ್ದಾನೆ. ಆರೋಪಿ ಚಾಲಕನನ್ನು ಇಂದ್ರಜೀತ್ ಸಿಂಗ್ (Accused Indrjeet Singh) ಎಂದು ಗುರುತಿಸಲಾಗಿದೆ. ಮುಂಬೈ ಪೊಲೀಸರು (Mumbai Police) ಆರೋಪಿ ಚಾಲಕನನ್ನು ಉತ್ತರ ಪ್ರದೇಶದಲ್ಲಿ (Uttar Pradesh) ಬಂಧಿಸಿದ್ದಾರೆ.

ಈ ಸಂಬಂಧ ಸಂತ್ರಸ್ತೆ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ. ಆರೋಪಿ ಇಂದ್ರಜೀತ್ ಸಿಂಗ್‌ನ ಆಟೋರಿಕ್ಷಾದಲ್ಲಿ ಹೋಗುತ್ತಿರುವಾಗ ಈ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಮುಂಬೈ ಪೊಲೀಸರು ಆರೋಪಿ ಆಟೋ ರಿಕ್ಷಾ ಚಾಲಕ ಇಂದ್ರಜೀತ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Physical Abuse: ಮೊಬೈಲ್‌ ಕೊಡಿಸುವುದಾಗಿ ಕರೆಸಿ ಗೆಳೆಯರಿಂದ ಅತ್ಯಾಚಾರ

ಅವರಿಬ್ಬರ ನಡುವೆ ಪ್ರೀತಿ ಶುರುವಾಗಿ ಸರಿಯಾಗಿ ಒಂದು ವರ್ಷವೂ ಆಗಿರಲಿಲ್ಲ. ಆದರೆ ಪ್ರೀತಿಯಲ್ಲಿ ಬಿದ್ದಿದ್ದ ಆ ಯುವತಿ ಯುವಕನನ್ನು ಸಿಕ್ಕಾಪಟ್ಟೆ ಹಚ್ಚಿಕೊಂಡಿದ್ದಳು. ಪ್ರಿಯಕರ ಕರೆದನಲ್ಲ ಎಂದು ಬಸ್ ಹಿಡಿದು ಬೆಂಗಳೂರಿಗೆ ಬಂದವಳು, ಆತನ ಕರಾಳ ಮುಖ ಕಂಡು ಬೆಚ್ಚಿ ಬಿದ್ದಿದ್ದಾಳೆ. ಗೆಳೆಯನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದ. ಈಗ ಇಬ್ಬರೂ ಪೊಲೀಸರ (Molestation Case) ಅತಿಥಿಯಾಗಿದ್ದಾರೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ.

ಪುರುಷೋತ್ತಮ್ ಹಾಗೂ ಚೇತನ್ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಿಯಕರ ಪುರುಷೋತ್ತಮ್ ತುಮಕೂರಿನ ನಿವಾಸಿಯಾಗಿದ್ದು, ಅದೇ ಊರಿನಲ್ಲಿ ಮೊದಲ ವರ್ಷದ ಪ್ಯಾರಾ ಮೆಡಿಕಲ್ ಓದುತ್ತಿದ್ದ ಯುವತಿಯನ್ನು (19) ಪುಸಲಾಯಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ.

ಈ ನಡುವೆ ಕಳೆದ ವಾರ ಪುರುಷೋತ್ತಮ್ ಯುವತಿಯ ಮೊಬೈಲ್ ಪಡೆದು ಬೆಂಗಳೂರಿಗೆ ಬಂದಿದ್ದ. ಯುವತಿ ಮೊಬೈಲ್ ಕೊಡುವಂತೆ ಕೇಳಿದಾಗ, ಬೆಂಗಳೂರಿಗೆ ಬಾ ಕೊಡುತ್ತೇನೆ ಎಂದಿದ್ದ. ಆತನ ಮಾತು ಕೇಳಿ ತುಮಕೂರಿನಿಂದ ಬೆಂಗಳೂರಿಗೆ ಯುವತಿ ಬಂದಿದ್ದಳು. ಹೀಗೆ ಬಂದವಳನ್ನು ಪುರುಷೋತ್ತಮ್‌ ಗಿರಿನಗರದ ತನ್ನ ಸ್ನೇಹಿತ ಚೇತನ್ ರೂಮಿಗೆ ಕರೆದುಕೊಂಡು ಹೋಗಿದ್ದ.

ಈ ಸುದ್ದಿಯನ್ನೂ ಓದಿ: Teen Raped : 68 ವರ್ಷದವನಿಂದ 16 ವರ್ಷದ ಬಾಲಕಿ ಮೇಲೆ ರೇಪ್, ಈ ದೃಶ್ಯ ಸೆರೆ ಹಿಡಿದ 40 ವರ್ಷದ ಪುತ್ರ!

ರೂಮಿಗೆ ಬಂದಾಗ ಯುವತಿ ಮೊಬೈಲ್‌ ಕೊಡು ವಾಪಸ್‌ ಊರಿಗೆ ಹೋಗುವುದಾಗಿ ಹೇಳಿದ್ದಾಳೆ. ಆಗ ಪುರಷೋತ್ತಮ್‌ ಆಕೆಯನ್ನು ತಡೆದು ರಾತ್ರಿಯಾಗಿದೆ ಇಲ್ಲೆ ಇರು ಬೆಳಗ್ಗೆ ಹೋಗು ಎಂದಿದ್ದಾನೆ. ಈತನ ಬಲವಂತಕ್ಕೆ ಅರೆಬರೆ ಮನಸ್ಸಿನಲ್ಲೇ ಯುವತಿ ಒಪ್ಪಿಗೆ ನೀಡಿದ್ದಾಳೆ. ಈ ವೇಳೆ ಪುರಷೋತ್ತಮ್‌ ಕುಡಿಯಲು ಜ್ಯೂಸ್‌ ನೀಡಿದ್ದಾನೆ. ಜ್ಯೂಸ್‌ ಕುಡಿಯುತ್ತಿದ್ದಂತೆ ಯುವತಿ ಕೊಂಚ ಪ್ರಜ್ಞೆ ಕಳೆದುಕೊಂಡಿದ್ದಾಳೆ.

ನಂತರ ಪ್ರಿಯಕರ ಯುವತಿ ಮೇಲೆ ಎರಗಿ ಬಿದ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಪುರಷೋತ್ತಮನ ಸ್ನೇಹಿತ ಚೇತನ್ ಕೂಡ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಲು ಮುಂದಾದಾಗ ಎಚ್ಚರಗೊಂಡು ಚಿರಾಡಿದ್ದಾಳೆ. ಬಳಿಕ ಅಕ್ಕಪಕ್ಕದ ಜನರು ಬಂದು ಆಕೆಯನ್ನೂ ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಗಿರಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version