Site icon Vistara News

Central Vista | ಸೆಂಟ್ರಲ್‌ ವಿಸ್ಟಾ ಕಾರ್ಮಿಕರ ಜತೆ ಮೋದಿ ಮಾತು, ಗಣರಾಜ್ಯೋತ್ಸವದ ಪರೇಡ್‌ಗೂ ಆಹ್ವಾನ!

Workers

ನವದೆಹಲಿ: ಸೆಂಟ್ರಲ್‌ ವಿಸ್ಟಾ (Central Vista) ಯೋಜನೆ ಅಡಿ ಮರು ನವೀಕರಿಸಲಾಗಿರುವ “ಕರ್ತವ್ಯ ಪಥ” ಹಾಗೂ ಇಂಡಿಯಾ ಗೇಟ್‌ನಲ್ಲಿ ಅಳವಡಿಸಲಾಗಿರುವ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪ್ರತಿಮೆ ಅನಾವರಣಗೊಳಿಸುವ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಂಟ್ರಲ್‌ ವಿಸ್ಟಾ ಯೋಜನೆಯ ಕಾರ್ಮಿಕರೊಂದಿಗೆ ಉಭಯ ಕುಶಲೋಪರಿ ನಡೆಸಿದರು.

ಸುಮಾರು ೨೮ ಅಡಿ ಎತ್ತರದ ಪ್ರತಿಮೆಗೆ ಚಾಲನೆ ನೀಡಿದ ಬಳಿಕ ನರೇಂದ್ರ ಮೋದಿ ಅವರು ಕರ್ತವ್ಯ ಪಥದಲ್ಲಿ ಸಂಚರಿಸಿದರು. ಇದಾದ ಬಳಿಕ ಅವರು ಸೆಂಟ್ರಲ್‌ ವಿಸ್ಟಾ ಯೋಜನೆಯಲ್ಲಿ ನಿರತರಾಗಿರುವ ಕಾರ್ಮಿಕರ ಜತೆ ಮಾತುಕತೆ ನಡೆಸಿದರು. ಅಲ್ಲದೆ, ಗಣರಾಜ್ಯೋತ್ಸವದಂದು ನಡೆಯುವ ಪರೇಡ್‌ಗೂ “ಶ್ರಮಜೀವಿ”ಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Netaji Statue | ನೇತಾಜಿ ಪ್ರತಿಮೆ ಕೆತ್ತಿದ್ದು ಕನ್ನಡಿಗ ಶಿಲ್ಪಿ ಅರುಣ್‌ ಯೋಗಿರಾಜ್ ತಂಡ

Exit mobile version