Site icon Vistara News

Narendra Modi : 100 ಕೋಟಿ ವೆಚ್ಚದ ಸಂತ ರವಿದಾಸ್ ದೇಗುಲಕ್ಕೆ ಶಿಲಾನ್ಯಾಸ ಮಾಡಿದ ಪ್ರಧಾನಿ ಮೋದಿ

Narendra Modi

ನವದೆಹಲಿ: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಟ್ಟುಮಾ ಗ್ರಾಮದಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜಿ ದೇಗುಲಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜೀ ಸ್ಮಾರಕವು ಭವ್ಯತೆ ಮತ್ತು ದೈವತ್ವವನ್ನು ಹೊಂದಿದೆ. ಅದು ಸಂತ ರವಿದಾಸ್ ಜೀ ಅವರ ಬೋಧನೆಯ ಮೂಲಕ ಪ್ರತಿಫಲನಗೊಂಡಿದೆ ಎಂದು ಹೇಳಿದ್ದಾರೆ.

20,000 ಕ್ಕೂ ಹೆಚ್ಚು ಹಳ್ಳಿಗಳು ಮತ್ತು 300 ನದಿಗಳ ಮಣ್ಣುಗಳನ್ನು ಬಳಸಿ ಈ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಮಧ್ಯಪ್ರದೇಶದ ಕುಟುಂಬಗಳು ‘ಸಮ್ರಸ್ತ ಭೋಜ್’ ಗಾಗಿ ಧಾನ್ಯವನ್ನು ಕಳುಹಿಸಿವೆ. ಐದು ಯಾತ್ರೆಗಳು ಸಾಗರದಲ್ಲಿ ಮುಕ್ತಾಯಗೊಂಡಿವೆ. ಈ ಯಾತ್ರೆಗಳು ಸಾಮಾಜಿಕ ಸಾಮರಸ್ಯದ ಹೊಸ ಯುಗವನ್ನು ಸಂಕೇತಿಸುತ್ತವೆ ಎಂದು ಮೋದಿ ಹೇಳಿದ್ದಾರೆ.

ಒಂದೂವರೆ ವರ್ಷದಲ್ಲಿ ದೇವಾಲಯ ಪೂರ್ಣಗೊಳ್ಳಲಿದೆ ಮತ್ತು ಸಂತ ರವಿದಾಸ್ ಅವರ ಆಶೀರ್ವಾದದೊಂದಿಗೆ ದೇಗುಲ ಉದ್ಘಾಟಿಸಲು ನಾನೇ ಬರುತ್ತೇನೆ ಎಂದು ತಿಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದದ್ದಾರೆ.

ಬೃಹತ್ ದೇಗುಲ

ಈ ದೇವಾಲಯ 10,000 ಚದರ ಅಡಿಗಳಲ್ಲಿ ನಿರ್ಮಾಣವಾಗಲಿದೆ ಸಂತ ರವಿದಾಸ್ ಅವರ ಕೆಲಸ ಮತ್ತು ವ್ಯಕ್ತಿತ್ವವನ್ನು ಪ್ರದರ್ಶಿಸಲು ವಸ್ತುಸಂಗ್ರಹಾಲಯವನ್ನು ನಿರ್ಮಾಣಗೊಳ್ಳಲಿದೆ. ನಾಲ್ಕು ಗ್ಯಾಲರಿಗಳು, ಗ್ರಂಥಾಲಯ, ಸಂಗಮ್ ಹಾಲ್, ಜಲ ಕುಂಡ ಮತ್ತು ಭಕ್ತ ನಿವಾಸ್ ಸಹ ಇರಲಿವೆ. ದೇವಾಲಯವು ಎರಡು ಭವ್ಯ ಪ್ರವೇಶದ್ವಾರಗಳು ಮತ್ತು ಬೆಳಕಿನ ವ್ಯವಸ್ಥೆಗಳನ್ನು ಹೊಂದಿರಲಿವೆ.

ಸಂತ ರವಿದಾಸ್ ಜೀ ಅವರ ಬೋಧನೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ “ಸಮಾಜದಲ್ಲಿ ದುಷ್ಕೃತ್ಯಗಳು ಹುಟ್ಟುವುದು ಸಹಜ. ಇಂತಹ ದುಷ್ಕೃತ್ಯಗಳನ್ನು ತೊಡೆದುಹಾಕಲು ರವಿದಾಸ್ ಜಿ ಅವರಂತಹ ಸಂತ ಅಥವಾ ಮಹಾತ್ಮರು ಮತ್ತೆ ಹೊರಹೊಮ್ಮುವುದು ಭಾರತೀಯ ಸಮಾಜದ ಶಕ್ತಿಯಾಗಿದೆ. ಮೊಘಲ್ ಯುಗದಲ್ಲಿ, ಸಂತ ರವಿದಾಸ್ ಜೀ ಅವರು ಜಾಗೃತಿ ಮೂಡಿಸುತ್ತಿದ್ದರು. ಅವರು ಸಮಾಜದ ದುಷ್ಕೃತ್ಯಗಳನ್ನು ನಿವಾರಿಸುವ ಮಾರ್ಗಗಳನ್ನು ಬೋಧಿಸುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ : Independence Day 2023: ಪ್ರತಿ ಮನೆಯಲ್ಲೂ ತಿರಂಗಾ ಹಾರಿಸಲು ಮೋದಿ ಕರೆ; ನೀವೂ ಫೋಟೊ ಕಳುಹಿಸಿ

ಸಂತ ರವಿದಾಸ್ ಜೀ ಅವರು ಸಮಾಜದಲ್ಲಿ ಚಾಲ್ತಿಯಲ್ಲಿರುವ ದುಷ್ಕೃತ್ಯಗಳ ವಿರುದ್ಧ ಧ್ವನಿ ಎತ್ತುತ್ತಿದ್ದರು. ಅವಲಂಬನೆ ದೊಡ್ಡ ಪಾಪ ಮತ್ತು ಅದನ್ನು ಸ್ವೀಕರಿಸುವವರು ಮತ್ತು ಅದರ ವಿರುದ್ಧ ನಿಲುವು ತೆಗೆದುಕೊಳ್ಳದವರನ್ನು ಯಾರೂ ಪ್ರೀತಿಸುವುದಿಲ್ಲ ಎಂದು ಸಂತರು ಹೇಳಿದ್ದರು. ಸಂತ ರವಿದಾಸ್ ಜೀ ಅವರು ದಬ್ಬಾಳಿಕೆಯ ವಿರುದ್ಧ ಹೋರಾಡಲು ಸಮಾಜಕ್ಕೆ ಶಕ್ತಿಯನ್ನು ನೀಡಿದರು. ಛತ್ರಪತಿ ಶಿವಾಜಿ ಅವರ ತತ್ವವನ್ನು ಸ್ವರಾಜ್ಯದ ಅಡಿಪಾಯ ಹಾಕಲು ಸ್ಫೂರ್ತಿಯಾಗಿ ಬಳಸಿದರು ಎಂದು ಮೋದಿ ಅವರು ಹೇಳಿದರು.

ವಿಮೋಚನೆಯ ಭಾವ

ಇಂದು, ರಾಷ್ಟ್ರವು ಅದೇ ವಿಮೋಚನೆಯ ಮನೋಭಾವದೊಂದಿಗೆ ಮುಂದುವರಿಯುತ್ತಿದೆ. ಗುಲಾಮಗಿರಿಯ ಮನಸ್ಥಿತಿಯನ್ನು ತಿರಸ್ಕರಿಸುತ್ತಿದೆ ಎಂದು ಅವರು ಹೇಳಿದರು. ಸಂತ ರವಿದಾಸ್ ಜೀ ಅವರಿಂದ ಸ್ಫೂರ್ತಿ ಪಡೆದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು, ಬಡವರ ಹಸಿವು ಮತ್ತು ಸ್ವಾಭಿಮಾನದ ನೋವು ನನಗೆ ತಿಳಿದಿದೆ. ನಾನು ನಿಮ್ಮ ಕುಟುಂಬದ ಸದಸ್ಯ ಮತ್ತು ನಿಮ್ಮ ನೋವನ್ನು ಅರ್ಥಮಾಡಿಕೊಳ್ಳಲು ನಾನು ಪುಸ್ತಕಗಳನ್ನು ನೋಡುವ ಅಗತ್ಯವಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ನನ್ನ ಕುಟುಂಬ ಸದಸ್ಯರನ್ನು ಬೆಂಬಲಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ 80 ದಶಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನೀಡಿದ್ದೇನೆ ಎಂದು ಹೇಳಿದರು.

ಮೋದಿ ವಾಗ್ದಾಳಿ

ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಚುನಾವಣೆ ವೇಳೆ ಯೋಜನೆಗಳನ್ನು ಪರಿಚಯಿಸಲಾಗುತ್ತಿತ್ತು. ಆದರೆ ದಲಿತರು, ವಂಚಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು ಮತ್ತು ಮಹಿಳೆಯರೊಂದಿಗೆ ಅವರು ನಿಲ್ಲುತ್ತಿರಲಿಲ್ಲ ಎಂದು ನುಡಿದರು.

Exit mobile version