Site icon Vistara News

ಪ್ರಧಾನಿ ಮೋದಿ ಪ್ರಣಬ್‌ರ ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು!; ಶರ್ಮಿಷ್ಠಾ ಮುಖರ್ಜಿ

PM Narendra Modi would always touch pranab's feet Says Sharmistha Mukherjee

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Pranab Mukherjee) ಅವರ ನಡುವೆ ವಿಚಿತ್ರ ಬಂಧವಿತ್ತು. ಪ್ರಧಾನಿ ಮೋದಿ ಅವರು ಗೌರವದ ಸಂಕೇತವಾಗಿ ಯಾವಾಗಲೂ ಪ್ರಣಬ್ ಅವರಿಗೆ ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು (Modi touch Pranab’s feet) ಎಂದು ದಿವಂಗತ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಹೇಳಿದ್ದಾರೆ.

ಶರ್ಮಿಷ್ಠಾ ಮುಖರ್ಜಿ ಅವರು, ತಮ್ಮ ತಂದೆ ಪ್ರಣಬ್ ಜತೆ ನಡೆಸಿದ ಸಂಭಾಷಣೆ, ಅವರ ಡೈರಿ ನಮೂದುಗಳನ್ನು ಒಳಗೊಂಡಿರುವ ಪ್ರಣಬ್, ಮೈ ಫಾದರ್: ಎ ಡಾಟರ್ ರೆಮೆಂಬರ್ಸ್ ಎಂಬ ಹೊಸ ಕೃತಿಯಲ್ಲಿ ಅನೇಕ ಸಂಗತಿಗಳನ್ನು ದಾಖಲಿಸಿದ್ದಾರೆ.

ತಮ್ಮ ತಂದೆ ರಾಷ್ಟ್ರಪತಿಯಾಗಿ ಆಯ್ಕೆಯಾದಾಗ, ತಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ತುಂಬಾ ಸ್ಪಷ್ಟವಾಗಿದ್ದರು. ಪ್ರಣಬ್ ಮತ್ತು ಮೋದಿ ಅವರು ವಿಭಿನ್ನ ಸಿದ್ಧಾಂತಗಳಿಗೆ ಸೇರಿದವರಾಗಿದ್ದರೂ, ಅವರು ಆಡಳಿತದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಮೋದಿ ಅವರಿಗೆ ಪ್ರಣಬ್ ಹೇಳಿದ್ದರು ಎಂಬ ಸಂಗತಿಯನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.

ಅವರು (ಪಿಎಂ ಮೋದಿ) ಅವರು ನನಗೆ ಹೇಳಿದರು; ಆಗ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ, ವಿವಿಧ ಕಾರ್ಯಕ್ರಮಗಳಿಗಾಗಿ ದೆಹಲಿಗೆ ಬಂದಾಗೆಲಲ್ಲ. ಬೆಳಿಗ್ಗೆ ವಾಕಿಂಗ್‌ನಲ್ಲಿ ಬಾಬಾ (ಪ್ರಣಬ್ ಮುಖರ್ಜಿ) ಅವರನ್ನು ಭೇಟಿಯಾಗುತ್ತಿದ್ದರು. ಈ ವೇಳೆ ಪಾದ ಮುಟ್ಟಿ ನಮಸ್ಕರಿಸುತ್ತಿದ್ದೆ ಎಂದು ಹೇಳಿದರು ಎಂದು ಶರ್ಮಿಷ್ಠಾ ಮುಖರ್ಜಿ ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ನನ್ನನ್ನು ಭೇಟಿಯಾಗಲು ರಾಷ್ಟ್ರಪತಿ ಭವನಕ್ಕೆ ಬಂದಿದ್ದಲು. ಅವರು ಕಾಂಗ್ರೆಸ್ ಮತ್ತು ಅದರ ನೀತಿಗಳ ಕಡು ಟೀಕಾಕಾರಾಗಿದ್ದರು. ಆದರೆ, ಖಾಸಗಿಯಾಗಿ ಯಾವಾಗಲೂ ನನ್ನು ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು. ಇದರಿಂದ ನನಗೆ ಸಂತೋಷವಾಗುತ್ತಿತ್ತು, ಆದರೆ ಯಾಕೆ ಅಂತ ನಂಗೂ ಗೊತ್ತಿಲ್ಲ… ಎಂದು ಪ್ರಣಬ್ ಅವರು ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದರು ಎಂದು ಶರ್ಮಿಷ್ಠಾ ಅವರು ಹೇಳಿದ್ದಾರೆ.

ಜನರ ನಾಡಿ ಮಿಡಿತ ಅರಿತಿರುವ ಪ್ರಧಾನಿ ಮೋದಿ

ಇಂದಿರಾ ಗಾಂಧಿ (Indira Gandhi) ನಂತರ ಜನರ ನಾಡಿಮಿಡಿತವನ್ನು ತೀವ್ರವಾಗಿ ಮತ್ತು ನಿಖರವಾಗಿ ಅರಿಯುವ ಸಾಮರ್ಥ್ಯ ಹೊಂದಿರುವ ಏಕೈಕ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಂದು ದೇಶದ 13ನೇ ರಾಷ್ಟ್ರಪತಿಯಾಗಿದ್ದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಪ್ರಣಬ್ ಮುಖರ್ಜಿ (Pranab Mukherjee) ಅವರು ಮೋದಿ ಬಗ್ಗೆ ಹೊಂದಿದ್ದ ಅಭಿಪ್ರಾಯವಾಗಿತ್ತು. ಈ ಸಂಗತಿಯನ್ನು ಪ್ರಣಬ್ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಅವರು ತಮ್ಮ ಹೊಸ ಪುಸ್ತಕದಲ್ಲಿ (New Book) ದಾಖಲಿಸಿದ್ದಾರೆ.

ಸಿಯಾಚಿನ್‌ನಲ್ಲಿ ಸೈನಿಕರು ಮತ್ತು ಶ್ರೀನಗರದಲ್ಲಿ ಪ್ರವಾಹ ಪೀಡಿತ ಜನರೊಂದಿಗೆ ದೀಪಾವಳಿಯನ್ನು ಕಳೆಯುವ ಪ್ರಧಾನಿಯ ನಿರ್ಧಾರವು ಇಂದಿರಾ ಗಾಂಧಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಧಾನಿಗಳಲ್ಲಿ ಗೋಚರಿಸದ ಅವರ ರಾಜಕೀಯ ಪ್ರಜ್ಞೆಯಾಗಿದೆ ಎಂದು ಪ್ರಣಬ್ ಅವರು 2014 ಅಕ್ಟೋಬರ್ 13ರಂದು ನಮೂದಿಸಿದ್ದರು.

ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ನಾನು ನೀಡುವ ಸಲಹೆಯು ಅವರಿಗೆ ಮೌಲ್ಯಯುತವಾಗಿರುತ್ತದೆ ಎಂದು ಮೋದಿ ಹೇಳಿದ್ದರು. ನನ್ನಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಹೇಳಿದ್ದರು. ಮೋದಿ ಬಗ್ಗೆ ಸಾಕಷ್ಟು ಸ್ಪಷ್ಟತೆ ಇತ್ತು. ಮೋದಿ ತಮ್ಮ ವಿಚಾರಗಳಲ್ಲಿ ಸ್ಪಷ್ಟತೆಯನ್ನುಹೊಂದಿದ್ದರು. ರಾಜಕಾರಣಕ್ಕೆ ವೃತ್ತಿಪರತೆಯನ್ನು ಅವರು ತಂದರು. ಜನರ ನಾಡಿ ಮಿಡಿತವನ್ನು ನಿಖರವಾಗಿ ಅಳೆಯುತ್ತಿದ್ದರು. ಅವರಿಗೆ ಕಲಿಯುವ ಗುಣ ಇತ್ತು. ತಮಗೇ ಎಲ್ಲ ಗೊತ್ತು ಎನ್ನುವ ರೀತಿಯಲ್ಲಿ ವರ್ತಿಸುತ್ತಿರಲಿಲ್ಲ. ಮೋದಿ ಕಟ್ಟರ್ ಆರೆಸ್ಸೆಸ್ ಮನುಷ್ಯ ಮತ್ತು ದೇಶಭಕ್ತ ಹಾಗೂ ರಾಷ್ಟ್ರೀಯವಾದಿ ಎಂದು ಪ್ರಣಬ್ ಬರೆದುಕೊಂಡಿರುವ ಸಂಗತಿ ಹೊಸ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ಇಲ್ಲ, ಆಕೆ ನನ್ನನ್ನು ಪಿಎಂ ಮಾಡಲ್ಲ! ಪ್ರಣಬ್ ಮುಖರ್ಜಿ ಹಾಗೇಕೆ ಹೇಳಿದ್ದು?

Exit mobile version