Site icon Vistara News

Suprestar Rajnikanth : ಹಳೆ ಗೆಳೆಯ ಅಖಿಲೇಶ್​ ಯಾದವ್​ ಭೇಟಿ ಮಾಡಿದ ರಜನಿಕಾಂತ್​​

Akhilesh Yadav

ಲಖನೌ: ಉತ್ತರ ಪ್ರದೇಶ ಪ್ರವಾಸದಲ್ಲಿರುವ ಸೂಪರ್​ಸ್ಟಾರ್ ರಜನಿಕಾಂತ್ (Suprestar Rajnikanth) ಅವರು ಭಾನುವಾರ ತಮ್ಮ ಹಳೆಯ ಸ್ನೇಹಿತ, ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರನ್ನು ಭೇಟಿಯಾಗಿದ್ದಾರೆ.. ನಾನು 9 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದೆ ಮತ್ತು ಅಂದಿನಿಂದ ನಾವು ಸ್ನೇಹಿತರಾಗಿದ್ದೇವೆ. ನಾವು ಫೋನ್​ನಲ್ಲಿ ಆಗಾಗ ಮಾತನಾಡುತ್ತೇವೆ. 5 ವರ್ಷಗಳ ಹಿಂದೆ ನಾನು ಚಿತ್ರೀಕರಣಕ್ಕಾಗಿ ಇಲ್ಲಿಗೆ ಬಂದಾಗ ನಾನು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ, ಈಗ ಅವರು ಇಲ್ಲಿದ್ದಾರೆ, ಆದ್ದರಿಂದ ನಾನು ಅವರನ್ನು ಭೇಟಿಯಾದೆ ಎಂದು ರಜನೀಕಾಂತ್​ ಹೇಳಿಕೊಂಡಿದ್ದಾರೆ.

ದಕ್ಷಿಣ ಭಾರತದ ಸಿನಿಮಾದ ಸೂಪರ್​ಸ್ಟಾತ್​ ತಮ್ಮ ಚಿತ್ರ ಜೈಲರ್​​ನ ಯಶಸ್ಸಿ ಹಿನ್ನೆಲೆಯಲ್ಲಿ ಭಗವಾನ್ ರಾಮನ ಆಶೀರ್ವಾದ ಪಡೆಯಲು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

ಮುಲಾಯಂ ಸಿಂಗ್ ನಿಧನಕ್ಕೆ ರಜನಿಕಾಂತ್ ಸಂತಾಪ

ಎಎನ್ಐ ಹಂಚಿಕೊಂಡ ಚಿತ್ರಗಳಲ್ಲಿ, ರಜನಿಕಾಂತ್ ಅಖಿಲೇಶ್ ಅವರ ತಂದೆ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು. ಅಖಿಲೇಶ್ ಅವರ ಮನೆಯಲ್ಲಿ ಚಿತ್ರವೊಂದರ ಮುಂದೆ ಕೈಮುಗಿದು ನಮಸ್ಕರಿಸಿದರು. ಮತ್ತೊಂದು ಚಿತ್ರದಲ್ಲಿ ರಜನಿಕಾಂತ್ ಮತ್ತು ಅಖಿಲೇಶ್ ಕೈಕುಲುಕಿದ್ದಾರೆ. ರಜನಿಕಾಂತ್ ಬಿಳಿ ಟೀ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಶೂಗಳಲ್ಲಿ ಕಾಣಿಸಿಕೊಂಡರು.

ಫೋಟೋ ಹಂಚಿಕೊಂಡ ಅಖಿಲೇಶ್

ರಜನೀಕಾಂತ್ ಜೊತೆಗಿರುವ ಫೋಟೋಗಳನ್ನು ಅಖಿಲೇಶ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಅವರು ಭೇಟಿಯಾದಾಗ ಪರಸ್ಪರ ತಬ್ಬಿಕೊಂಡರು. ಅವರೂ ಸಂಭಾಷಣೆ ನಡೆಸಿದರು. ಫೋಟೋಗಳೊಂದಿಗೆ ಹಿಂದಿಯಲ್ಲಿ ಬರೆದಿರುವ ಅಖಿಲೇಶ್, “ಹೃದಯಗಳು ಭೇಟಿಯಾದಾಗ ಅಪ್ಪಿಕೊಳ್ಳುತ್ತವೆ. ಮೈಸೂರಿನಲ್ಲಿ ನನ್ನ ಎಂಜಿನಿಯರಿಂಗ್ ಅಧ್ಯಯನದ ಸಮಯದಲ್ಲಿ ರಜನಿಕಾಂತ್ ಅವರನ್ನು ಬೆಳ್ಳಿ ಪರದೆಯ ಮೇಲೆ ನೋಡಿದಾಗ ನಾನು ಅನುಭವಿಸುತ್ತಿದ್ದ ಸಂತೋಷವು ಇನ್ನೂ ಹಾಗೇ ಇದೆ. ನಾವು 9 ವರ್ಷಗಳ ಹಿಂದೆ ವೈಯಕ್ತಿಕವಾಗಿ ಭೇಟಿಯಾದೆವು ಮತ್ತು ಅಂದಿನಿಂದ ಸ್ನೇಹಿತರಾಗಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Jailer Movie: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರ ಕಾಲಿಗೆರಗಿದ ‘ಜೈಲರ್’ ರಜನಿಕಾಂತ್!

ಅಯೋಧ್ಯೆಯ ಹನುಮಾನ್​ ಮಂದಿರ ದರ್ಶನ

ಲಖನೌ: ಸೂಪರ್​ಸ್ಟಾರ್ ರಜನಿಕಾಂತ್​ (Suprestar Rajnikanth) ಭಾನುವಾರ ಅಯೋಧ್ಯೆಯ ಶ್ರೀ ಹನುಮಾನ್​ ಗರ್ಹಿ ದೇವಸ್ಥಾನಕ್ಕೆ (Ayodhya Hanumana Temple) ಭೇಟಿ ನೀಡಿ ದೇವರ ದರ್ಶನ ಪಡೆದಕೊಂಡಿದ್ದಾರೆ. ಜೈಲರ್ ಸಿನಿಮಾದ ಬಿಡುಗಡೆಗೊಂಡ ಬಳಿಕ ಇದೀಗ ದೇಶದ ನಾನಾ ತೀರ್ಥ ಕ್ಷೇತ್ರಗಳಿಗೆ ಅವರು ಪ್ರವಾಸ ಮಾಡುತ್ತಿದ್ದಾರೆ. ಜತೆಗೆ ಆಯಾ ರಾಜ್ಯಗಳ ಪ್ರಮುಖ ರಾಜಕೀಯ ಮುಖಂಡರು ಹಾಗೂ ಗಣ್ಯರನ್ನು ಭೇಟಿ ಮಾಡುತ್ತಿದ್ದಾರೆ. ಅಂತೆಯೇ ಉತ್ತರ ಪ್ರದೇಶದಲ್ಲಿ (Uttar Pradesh) ಸುತ್ತಾಟ ನಡೆಸುತ್ತಿರುವ ಅವರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

ಅಯೋಧ್ಯೆಯ ಹನುಮಾನ್​ ದೇವಸ್ಥಾನಕ್ಕೆ ಭೇಟಿ ನೀಡಿರುವ ಚಿತ್ರವನ್ನು ಸುದ್ದಿ ಸಂಸ್ಥೆ ಎಎನ್ಐ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ. ದೇಗುಲಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ರಜನಿಕಾಂತ್​ ಅವರು, ನಾನು ಇಲ್ಲಿ ಭೇಟಿ ನೀಡಲು ಅದೃಷ್ಟ ಮಾಡಿದ್ದೇನೆ. ಪ್ರತಿ ಬಾರಿಯೂ ಇಲ್ಲಿಗೆ ಭೇಟಿ ಮಾಡಲು ಇಚ್ಛಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ರಜನಿಕಾಂತ್ ರಾಂಚಿಯಲ್ಲಿದ್ದರು. ಆಗಸ್ಟ್‌ 18ರಂದು ಚಿನ್ನಮಸ್ತ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ರಾಂಚಿಯ ಯಗೋಡಾ ಆಶ್ರಮದಲ್ಲಿ ಒಂದು ಗಂಟೆ ಧ್ಯಾನ ಮಾಡಿ ಬಳಿಕ ಜಾರ್ಖಂಡ್ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದರು.

ಸಿನಿಮಾ ರಿಲೀಸ್ ಆಗಿ ಶುಕ್ರವಾರ 9ನೇ ದಿನ. ಅಂದು ಸಿನಿಮಾ ಭಾರತದಲ್ಲಿ 10 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ವಾರದ ಜೈಲರ್ ಕಲೆಕ್ಷನ್ 235.65 ಕೋಟಿ ಇದ್ದು ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.ಸಿನಿಮಾದ ತಮಿಳು ವರ್ಷನ್ 186.05 ಕೋಟಿ ಗಳಿಸಿದ್ದು ತೆಲುಗಿನಲ್ಲಿ 46.99 ಕೋಟಿ ಗಳಿಸಿದೆ. ಕನ್ನಡ ಹಾಗೂ ಹಿಂದಿ 1.9 ಕೋಟಿ ಗಳಿಸಿದೆ. ವಿಶ್ಲೇಷಕ ಮನೋಬಲ ವಿಜಯಬಾಲನ್ ಪ್ರಕಾರ ಈ ಸಿನಿಮಾದ ಸದ್ಯದ ಒಟ್ಟು ಕಲೆಕ್ಷನ್ 470.17 ಕೋಟಿ ರೂಪಾಯಿ.

ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಜತೆ ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್‌ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇದೀಗ ಜೈಲರ್‌ ಮುಂದುವರಿದ (jailer 2) ಭಾಗಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆಗೆ ಕಾಲಿವುಡ್ ಪವರ್ ಸ್ಟಾರ್ ದಳಪತಿ ವಿಜಯ್ (thalapathy Vijay) ಕೂಡ ಕಣಕ್ಕಿಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

Exit mobile version