Site icon Vistara News

Pathan Movie | ಶಾರುಖ್​ ಖಾನ್​ ಎದುರು ಸಿಕ್ಕರೆ ಜೀವಂತ ಸುಟ್ಟುಬಿಡುವೆ; ಕೋಪದಿಂದ ನುಡಿದ ಅಯೋಧ್ಯೆಯ ಸಾಧು

pathan movie

ನವ ದೆಹಲಿ : ಶಾರುಖ್​ ಖಾನ್ ಅಭಿಯನಯದ ಪಠಾಣ್​ ಸಿನಿಮಾದ (Pathan Movie) ಬೇಷರಮ್​ ರಂಗ್ ಹಾಡು ಉಂಟು ಮಾಡಿದ ವಿವಾದ ಅಂತ್ಯವಾಗುತ್ತಿಲ್ಲ. ಮಂಗಳವಾರ ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್​ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ಸಾಧುವೊಬ್ಬರು, ಶಾರುಖ್​ ಖಾನ್​ ಎದುರು ಸಿಕ್ಕರೆ ಜೀವಂತ ಸುಟ್ಟುಬಿಡುವೆ ಎಂಬುದಾಗಿ ಆಘಾತಕಾರಿ ಹೇಳಿಕೆ ಕೊಟ್ಟಿದ್ದಾರೆ.

ಅಯೋಧ್ಯೆಯ ತಪಸ್ವಿ ಚಾವ್ನಿ ಮಠದ ಪರಮಹಂಸ ಆಚಾರ್ಯ ಅವರು ಈ ರೀತಿ ಹೇಳಿಕೆ ಕೊಟ್ಟವರು. ಅವರು ವಿಶ್ವ ಹಿಂದೂ ಪರಿಷತ್​ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದ ಜತೆ ಮಾತನಾಡಿ ಈ ಹೇಳಿಕೆಯನ್ನು ಕೊಟ್ಟಿದ್ದಾರೆ.

“ಪಠಾಣ್​ ಸಿನಿಮಾ ಸನಾತಮ ಧರ್ಮಕ್ಕೆ ಅವಮಾನ ಮಾಡಿದೆ. ಸಿನಿಮಾವನ್ನು ವಿರೋಧಿಸಿ ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ನಾವು ಶಾರುಖ್​ ಖಾನ್​ ಪೋಸ್ಟರ್​ಗೆ ಬೆಂಕಿ ಹಚ್ಚಿದ್ದೇವೆ. ಒಂದು ವೇಳೆ ಅವರು ಎದುರಿಗೇ ಸಿಕ್ಕರೆ ಜೀವಂತ ಸುಡುವೆವು,” ಎಂಬುದಾಗಿ ಅವರು ಹೇಳಿದ್ದಾರೆ.

ಮುಂದುವರಿದ ಅವರು “ಪಠಾಣ್​ ಚಲನಚಿತ್ರವನ್ನು ಬಿಡುಗಡೆಯಾಗಲು ಬಿಡಬಾರದು. ಒಂದು ವೇಳೆ ಚಲಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಿದರೆ ಅಲ್ಲಿಗೂ ಬೆಂಕಿ ಹಚ್ಚಲಾಗುವುದು,” ಎಂದು ಅವರು ಹೇಳಿದರು.

ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷರ್​ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಮುಂಬಯಿಯಲ್ಲಿ ಶಾರುಖ್​ ಖಾನ್ ವಿರುದ್ಧ ಪೊಲೀಸ್​ ದೂರು ಕೂಡ ದಾಖಲಾಗಿದೆ.

ಇದನ್ನೂ ಓದಿ | Shahrukh Khan | ಬೇಷರಮ್‌ ಹಾಡು ಅಶ್ಲೀಲ ಅಷ್ಟೇ ಅಲ್ಲ, ಪ್ರಚೋದನಕಾರಿಯೂ ಆಗಿದೆ: ನಟ ಮುಕೇಶ್ ಖನ್ನಾ

Exit mobile version