Site icon Vistara News

The Kerala Story: ʼದಿ ಕೇರಳ ಸ್ಟೋರಿʼ ನೋಡಲು ಸಾಧ್ವಿ ಪ್ರಜ್ಞಾ ಕರೆದೊಯ್ದು ಯುವತಿ ಮುಸ್ಲಿಂ ಲವರ್‌ ಜತೆ ಪರಾರಿ!

sadhvi pragya singh takur

ಭೋಪಾಲ್‌: ಇಲ್ಲಿನ 19 ವರ್ಷದ ನರ್ಸಿಂಗ್‌ ವಿದ್ಯಾರ್ಥಿನಿಯೊಬ್ಬಳು ತನ್ನ ಮುಸ್ಲಿಂ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ. ಆದರೆ ಸ್ವಾರಸ್ಯಕರ ಸಂಗತಿ ಬೇರೊಂದಿದೆ. ಈಕೆಯನ್ನು ಬಿಜೆಪಿಯ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ʼದಿ ಕೇರಳ ಸ್ಟೋರಿʼ (The Kerala Story) ಫಿಲಂ ನೋಡಲು ಕರೆದೊಯ್ದಿದ್ದಳು ಹಾಗೂ ಮುಸ್ಲಿಂ ಬಾಯ್‌ಫ್ರೆಂಡ್‌ನಿಂದ ದೂರವಿರುವಂತೆ ತಾಕೀತು ಮಾಡಿದ್ದಳು ಎಂಬುದೇ ಅದು!

ʼದಿ ಕೇರಳ ಸ್ಟೋರಿʼಯ ಕಥೆ ಕೇರಳದ ಹಿಂದೂ ಯುವತಿ ಲವ್‌ ಜಿಹಾದ್‌ಗೆ ಒಳಗಾಗಿ ಸಿರಿಯಾದ ಭಯೋತ್ಪಾದಕರ ಸೆರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಕಥೆಯನ್ನು ಹೊಂದಿದೆ. ಮುಸ್ಲಿಂ ಯುವಕರನ್ನು ಪ್ರೇಮಿಸಿದವರು ಇಸ್ಲಾಮಿಕ್‌ ಭಯೋತ್ಪಾದನೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಚಿತ್ರಿಸುವ ಈ ಫಿಲಂ ನೋಡಲು ಯುವತಿಯನ್ನು ಸಾಧ್ವಿ ಪ್ರಜ್ಞಾ ಕರೆದೊಯ್ದಿದ್ದಳಲ್ಲದೆ, ಮುಸ್ಲಿಂ ಯುವಕನನ್ನು ಪ್ರೇಮಿಸದಂತೆ ತಾಕೀತು ಮಾಡಿದ್ದಳು.

19 ವರ್ಷದ ನರ್ಸಿಂಗ್‌ ವಿದ್ಯಾರ್ಥಿನಿಯ ಮದುವೆ ಮೇ 30ರಂದು ನಿಗದಿಯಾಗಿತ್ತು. ಆದರೆ ಅದಕ್ಕೂ ಮುನ್ನವೇ ಆಕೆ ಮನೆಯಿಂದ ನಗ ನಗದು ಗಂಟು ಕಟ್ಟಿಕೊಂಡು ಪ್ರಿಯಕರ ಯೂಸುಫ್‌ ಎಂಬಾತನೊಂದಿಗೆ ಪರಾರಿಯಾಗಿದ್ದಾಳೆ. ಭೋಪಾಲದ ಕಮಲಾನಗರ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಾಗಿದೆ. ಯೂಸುಫ್‌ ರೌಡಿ ಶೀಟರ್‌ ಆಗಿದ್ದು, ಈತನ ವಿರುದ್ಧ ಪೊಲೀಸ್ ದಾಖಲೆಯಲ್ಲಿ ಏಳು ಕ್ರಿಮಿನಲ್‌ ಪ್ರಕರಣಗಳಿವೆ. ಈತ ಮಗಳನ್ನು ಅಪಹರಿಸಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ. ಆದರೆ ನಾನು ಸ್ವ ಇಚ್ಛೆಯಿಂದ ಆತನ ಜತೆ ಹೋಗಿದ್ದೇನೆ ಎಂದು ಯುವತಿ ಹೇಳಿದ್ದಾಳೆ.

ಇದನ್ನೂ ಓದಿ: Viral Video: ಕ್ರೂರ ಮೊಸಳೆ-ಜಾಣ ಜಿಂಕೆ; ಒಂದೇ ಜಂಪ್​​ ನಲ್ಲಿ ಜೀವ ಉಳಿಯಿತು!

Exit mobile version