Site icon Vistara News

Pralhad Joshi: 17ನೇ ಲೋಕಸಭೆಯಲ್ಲಿ 221 ವಿಧೇಯಕ ಅಂಗೀಕಾರ ಎಂದ ಪ್ರಲ್ಹಾದ್ ಜೋಶಿ

Total 221 bills approved by 17th Lok Sabha Says Pralhad Joshi

ನವದೆಹಲಿ: ಹದಿನೇಳನೇ ಲೋಕಸಭೆ (17th Lok Sabha) ಅವಧಿಯಲ್ಲಿ ಉಭಯ ಸದನಗಳಲ್ಲಿ (Parliament) ಐದು ವರ್ಷಗಳ ಕಾಲ ಒಟ್ಟು 221 ವಿಧೇಯಕಗಳನ್ನು (221 Bills Passed) ಅಂಗೀಕರಿಸಲಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ(Union Minister Pralhad Joshi).

17ನೇ ಲೋಕಸಭೆ ಕೊನೆಯ ಅಧಿವೇಶನದ ಕಡೆ ದಿನವಾದ ಶನಿವಾರ ಸಂಸತ್ ಕಲಾಪದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿರುವ ಪ್ರಲ್ಹಾದ್ ಜೋಶಿ ಅವರು, 5 ವರ್ಷಗಳಲ್ಲಿ 545 ಸಭೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದು ಹೇಳಿದ್ದಾರೆ.

5 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುವ ಸುಯೋಗಕ್ಕಾಗಿ ಕೃತಜ್ಞನಾಗಿರುತ್ತೇನೆ ಎಂದಿದ್ದಾರೆ.

ಕಳೆದ 5 ವರ್ಷಗಳಲ್ಲಿ ಉಭಯ ಸದನಗಳ ವ್ಯವಹಾರಕ್ಕೆ ಕೊಡುಗೆ ನೀಡಿ, 545 ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಪ್ರತಿಯೊಬ್ಬ ಸದಸ್ಯರು ಮತ್ತು ರಾಜಕೀಯ ಪಕ್ಷಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಜೋಶಿ.

ಉಭಯ ಸದನಗಳಿಂದ ಒಟ್ಟು 221 ಮಸೂದೆಗಳು ಅಂಗೀಕರಿಸಲ್ಪಟ್ಟವು ಮತ್ತು ಕಾಯಿದೆಗಳಾಗಿ ಮಾರ್ಪಟ್ಟಿವೆ ಎಂದು ಸಂಸದೀಯ ಸಚಿವ ಜೋಶಿ ವಿವರಿಸಿದ್ದಾರೆ.

17 ನೇ ಲೋಕಸಭೆಯ ಉತ್ಪಾದಕತೆ 97% ಆಗಿದೆ. ಈ ಸಭೆಯನ್ನು ಮುಕ್ತಾಯಗೊಳಿಸುತ್ತಿದ್ದಂತೆ, 100% ಕ್ಕಿಂತ ಹೆಚ್ಚು ಉತ್ಪಾದಕತೆಯನ್ನು ಸಾಧಿಸುವ ಸಂಕಲ್ಪದೊಂದಿಗೆ ನಾವು 18ನೇ ಲೋಕಸಭೆಗೆ ಪ್ರವೇಶಿಸುತ್ತೇವೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ ಸಚಿವ ಜೋಶಿ.

PM Narendra Modi: ಲೋಕಸಭೆಯಲ್ಲಿ ನಮೋ ‘ರಾಮ’ಸ್ಮರಣೆ; ಪ್ರತಿಪಕ್ಷಗಳಿಗೆ ಚಾಟಿ

17ನೇ ಲೋಕಸಭೆಯ (17th Lok Sabha Session) ಕೊನೆಯ ಅಧಿವೇಶನದದ ಕಡೇ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಯೋಧ್ಯೆ ರಾಮಮಂದಿರ (Ayodhya Ram Mandir) ಸೇರಿದಂತೆ ಹಲವು ವಿಚಾರಗಳ ಬಗ್ಗೆ ಲೋಕಸಭೆಯಲ್ಲಿ ಮನಬಿಚ್ಚಿ ಮಾತನಾಡಿದರು. ರಾಮಮಂದಿರದಿಂದ ಹೊಸ ಸಂವೇದನೆ ಸೃಷ್ಟಿಯಾಗಿದೆ. ಮಂದಿರದ ಹಿಂದೆ ಸಬ್‌ ಕಾ ಸಾಥ್‌, ಸಬ್ ಕಾ ವಿಕಾಸ್‌ ದೂರದೃಷ್ಟಿಯೂ ಇದೆ ಎಂದು ಬಣ್ಣಿಸಿದರು. ರಾಮಮಂದಿರದ ಬಗ್ಗೆ ಎಲ್ಲರೂ ಧೈರ್ಯ ತೋರಲಿಲ್ಲ ಅನ್ನೋ ಮೂಲಕ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ (Pran Pratashta) ಬಹಿಷ್ಕರಿಸಿದ ಪ್ರತಿಪಕ್ಷದ (Congress Party) ನಾಯಕರಿಗೂ ಚಾಟಿ ಬೀಸಿದರು. ಜತೆಗೆ ಸಂಸತ್‌‌ನಲ್ಲಿ ಸೆಂಗೋಲ್ ಪ್ರತಿಷ್ಠಾಪನೆ, ಭಾರತಕ್ಕೆ ಜಿ20 ಅಧ್ಯಕ್ಷತೆಯ ಅವಕಾಶ ಸಿಕ್ಕಿದ್ದು, ಸಂಸತ್ತು ಪೇಪರ್‌ಲೆಸ್‌ ಆಗಿದ್ದು, ಮುಂದಿನ 25 ವರ್ಷದಲ್ಲಿ ವಿಕಸಿತ ಭಾರತ ನಿರ್ಮಿಸುವ ಸಂಕಲ್ಪದ ನೆನಪನ್ನು ಮೋದಿ ಮೆಲಕು ಹಾಕಿದ್ದು ವಿಶೇಷ.

ಮುಂದಿನ ಪೀಳಿಗೆ ರಾಮಮಂದಿರದ ಬಗ್ಗೆ ನೆನೆಯುತ್ತದೆ. ರಾಮಮಂದಿರದ ಬಗ್ಗೆ ಎಲ್ಲರೂ ಸೂಕ್ತ ಧೈರ್ಯ ತೋರಿಲ್ಲ. ಯುದ್ಧಭೂಮಿಯಿಂದಲೇ ಓಡುವ ಪ್ರವೃತ್ತಿ ತೋರಿದ್ದಾರೆ ಎಂದ ಮೋದಿ ಹೇಳಿದರು. ಯಾವ ಪಕ್ಷ, ವ್ಯಕ್ತಿ ಹೆಸರು ಹೇಳದೆ ಕಾಂಗ್ರೆಸ್‌ಗೆ ಮೋದಿ ಅವರು ಟಾಂಗ್ ನೀಡಿದರು. ಆದರೆ ನಮಗೆ ಸಂವೇದನೆ, ಸಂಕಲ್ಪ, ಸಹಾನುಭೂತಿ ಇದೆ. ಯಸ್ವಿಯಾಗಿ ಸದನ ನಡೆಸಿದ ಸ್ಪೀಕರ್‌‌ಗೆ ಸೆಲ್ಯೂಟ್‌. ದೇಶಕ್ಕೆ ಒಂದೇ ಸಂವಿಧಾನ ಇರಬೇಕೆಂಬ ನಿರೀಕ್ಷೆ ಸಾಬೀತಾಗಿದೆ ಎಂದು ಮೋದಿ ಹೇಳಿದರು.

ಮಂಗಳಮುಖಿ ಸಮುದಾಯವು ಯಾವಾಗಲೂ ಅಗೌರವವನ್ನು ಅನುಭವಿಸುತ್ತಿತ್ತು. 17 ನೇ ಲೋಕಸಭೆಯ ಸದಸ್ಯರು ಅವರ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಅವರಿಗೆ ಉತ್ತಮ ಜೀವನವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದರು. ಭಾರತವು ಮಂಗಳಮುಖಿಯರಿಗಾಗಿ ಏನು ಮಾಡಿದೆ ಎಂದು ಜಗತ್ತು ಚರ್ಚಿಸುತ್ತದೆ. ನಾವು ತೃತೀಯಲಿಂಗಿಗಳಿಗೆ ಅಸ್ತಿತ್ವವನ್ನು ನೀಡಿದ್ದೇವೆ, ಅವರನ್ನುಗುರುತಿಸಿದ್ದೇವೆ. ತೃತೀಯಲಿಂಗಿ ಸಮುದಾಯಕ್ಕೆ 16,000-17,000 ಗುರುತಿನ ಚೀಟಿಗಳನ್ನು ನೀಡಲಾಗಿದೆ. ಪದ್ಮ ಪ್ರಶಸ್ತಿಗಳ ಮೂಲಕ ಅವರನ್ನು ಸನ್ಮಾನಿಸಿದ್ದೇವೆ (Padma Awards) ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ತೃತೀಯಲಿಂಗಿ ಸಮುದಾಯದ ಜನರು ಮುದ್ರಾ ಯೋಜನೆಯಡಿ ಸಾಲ ಪಡೆದು ವ್ಯಾಪಾರ ಆರಂಭಿಸಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು. “ನಾವು ತೃತೀಯಲಿಂಗಿಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿದ್ದೇವೆ. ಅವರು ಮೊದಲು ಮಾಡದ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲಾರಂಭಿಸಿದ್ದಾರೆ. ಅವರು ಈಗ ಗೌರವದ ಜೀವನ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು. 2019ರಲ್ಲಿ ನರ್ತಕಿ ನಟರಾಜ ಅವರು ಪದ್ಮ ಪ್ರಶಸ್ತಿ ಪಡೆದ ಮೊದಲ ತೃತೀಯಲಿಂಗಿಯಾಗಿದ್ದಾರೆ. ಕರ್ನಾಟಕದವರೇ ಆದ ಮಂಜಮ್ಮ ಜೋಗತಿ ಅವರೂ ಪದ್ಮ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ಲೋಕಸಭೆಯಲ್ಲಿ ನಮೋ ‘ರಾಮ’ಸ್ಮರಣೆ; ಪ್ರತಿಪಕ್ಷಗಳಿಗೆ ಚಾಟಿ

Exit mobile version