Site icon Vistara News

Telangana battle | ತೆಲಂಗಾಣದ ಮುನುಗೋಡೆ ಉಪಚುನಾವಣೆಯಲ್ಲಿ ಟಿಆರ್‌ಎಸ್-ಬಿಜೆಪಿ ಹಣಾಹಣಿ

bjptrs

ಮುನುಗೋಡೆ : ತೆಲಂಗಾಣದ ಮುನುಗೋಡೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ನವೆಂಬರ್‌ 3ಕ್ಕೆ ನಡೆಯಲಿದೆ. ಆಡಳಿತಾರೂಢ ಟಿಆರ್‌ಎಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ (Telangana battle) ನಡೆಯಲಿದೆ. ಸ್ವಾರಸ್ಯವೆಂದರೆ ಈ ಸಲ ಇಲ್ಲಿ ಜಾತಿ ಕೂಡ ನಿರ್ಣಾಯಕವಾಗುವ ಸಾಧ್ಯತೆ ಇದೆ.

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಬ್ಬದ ವಾತಾವರಣ ಇದ್ದು, ಮತದಾರರನ್ನು ಸೆಳೆಯಲು ಎಲ್ಲ ಪಕ್ಷಗಳು ಕಸರತ್ತು ನಡೆಸಿವೆ.

ಬಿಜೆಪಿಯು ಟಿಆರ್‌ಎಸ್‌ನ ಭ್ರಷ್ಟಾಚಾರ, ಸರ್ಕಾರಿ ಯೋಜನೆಗಳ ಕಳಪೆ ನಿರ್ವಹಣೆ, ಅನುಷ್ಠಾನ ವಿಚಾರಗಳನ್ನು ಚುನಾವಣೆಯ ಅಸ್ತ್ರವಾಗಿ ಬಳಸಿದೆ. 2023ರ ಅಸೆಂಬ್ಲಿ ಚುನಾವಣೆ ದೃಷ್ಟಿಯಿಂದ ಇದು ಕುತೂಹ ಮೂಡಿಸಿದೆ. ಕ್ಷೇತ್ರದಲ್ಲಿ ತೀವ್ರ ಆಡಳಿತ ವಿರೋಧಿ ಅಲೆ ಇರುವುದರಿಂದ ಬಿಜೆಪಿ ಹುಮ್ಮಸ್ಸಿನಲ್ಲಿದೆ.

Exit mobile version