Site icon Vistara News

Viral Video | ತರಕಾರಿ ಮೇಲೆ ಮೂತ್ರ ಸಿಂಪಡಿಸಿ ಮಾರಾಟ, ಕುತ್ಸಿತ ಮನಸ್ಸಿನ ವ್ಯಕ್ತಿಯ ಬಂಧನ

Image

ಲಖನೌ: ಬೆಳಗ್ಗೆ ಬೆಳಗ್ಗೆ ತಾಜಾ ತರಕಾರಿ ಸಿಗುತ್ತದೆ ಎಂದು ಮನೆಯ ಬಳಿ ಬರುವ ಮಾರಾಟಗಾರರ ಬಳಿ ತರಕಾರಿ ಖರೀದಿಸುತ್ತೇವೆ. ಆದರೆ, ಉತ್ತರ ಪ್ರದೇಶಲ್ಲಿ ಹೀಗೆ ಮನೆ ಮನೆಗೂ ತೆರಳಿ ತರಕಾರಿ ಮಾರಾಟ ಮಾಡುವ ವ್ಯಕ್ತಿಯೊಬ್ಬ ಮಾರುವ ಮುನ್ನ ತರಕಾರಿ ಮೇಲೆ ತನ್ನದೇ ಮೂತ್ರ ಸಿಂಪಡಿಸಿ ಕುತ್ಸಿತ ಮನಸ್ಸನ್ನು ಪ್ರದರ್ಶಿಸಿದ್ದಾನೆ. ಈ ವಿಡಿಯೊ ವೈರಲ್‌ ಆಗಿದ್ದು (Viral Video), ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರೇಲಿಯ ಇಜ್ಜತ್‌ ನಗರದಲ್ಲಿ ಷರೀಫ್‌ ಖಾನ್‌ ಎಂಬ ವ್ಯಕ್ತಿಯು ಗಾಡಿಯ ಮೂಲಕ ತರಕಾರಿ ಮಾರಾಟ ಮಾಡುತ್ತಾನೆ. ಆದರೆ, ಈತ ಮಾರಾಟ ಮಾಡುವ ಮುನ್ನ ಮೂತ್ರ ವಿಸರ್ಜಿಸಿ, ಅದನ್ನು ತರಕಾರಿ ಮೇಲೆ ಸಿಂಪಡಿಸಿದ್ದಾನೆ. ಇದನ್ನು ಕಾರಿನಲ್ಲಿ ಕುಳಿತ ದುರ್ಗೇಶ್‌ ಎಂಬುವರು ವಿಡಿಯೊ ಮಾಡಿ, ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಜಾಲತಾಣಗಳಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ಪ್ರೇಮ್‌ ನಗರ ಪೊಲೀಸ್‌ ಠಾಣೆಯಲ್ಲಿ ಷರೀಫ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅಲ್ಲದೆ, ವಿಡಿಯೊ ವೈರಲ್‌ ಆದ ಬಳಿಕ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರು ತರಕಾರಿ ಮಾರಾಟಗಾರನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Bharat Jodo Yatra | ಬಾಲಕಿಯೊಬ್ಬಳು ಚಪ್ಪಲಿ ಹಾಕಿಕೊಳ್ಳಲು ನೆರವಾದ ರಾಹುಲ್‌ ಗಾಂಧಿ, ವಿಡಿಯೊ ವೈರಲ್

Exit mobile version