Site icon Vistara News

INDIA Bloc: ನಿತೀಶ್ ಕುಮಾರ್ ಇಂಡಿಯಾ ಕೂಟ ತೊರೆಯಲು ಅಸಲಿ ಕಾರಣ ಇದು!

Why Did Nitish kumar quits INDIA alliance?

ನವದೆಹಲಿ: ಬಿಹಾರದಲ್ಲಿ ಉಂಟಾಗಿದ್ದ ನಾಲ್ಕೈದು ದಿನಗಳ ರಾಜಕೀಯ ಉಹಾಪೋಹಕ್ಕೆ (Bihar Politcs) ಭಾನುವಾರ ತೆರೆ ಬಿದ್ದಿದೆ. ರಾಷ್ಟ್ರೀಯ ಜನತಾ ದಳದ (RJD) ಸಖ್ಯ ತೊರೆದಿರುವ ಜೆಡಿಯು ನಾಯಕ ನಿತೀಶ್ ಕುಮಾರ್ (Nitish Kumar) ಮತ್ತೊಮ್ಮೆ ಬಿಜೆಪಿ ಜತೆಗೆ (BJP Party) ಕೈ ಜೋಡಿಸಿ, ಬಿಹಾರ ಸಿಎಂ ಆಗಿದ್ದಾರೆ(Bihar CM). ಒಂದು ದಶಕದಲ್ಲಿ ಅವರು ಇದು ಐದನೇ ಬಾರಿಗೆ ಮೈತ್ರಿ ಪಕ್ಷವನ್ನು ಬದಲಿಸಿದಂತಾಗಿದೆ. ಆರ್‌ಜೆಡಿಯನ್ನು ಕೈಬಿಡುವ ಮೂಲಕ ಅವರು ಇಂಡಿಯಾ ಕೂಟದಿಂದಲೂ (INDIA Bloc) ಹೊರ ಬಂದಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂಬ ಕುತೂಹಲವಿದೆ. ನಿತೀಶ್ ಕುಮಾರ್ ಅವರೇ ಮುಂದಾಗಿ, ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಇಂಡಿಯಾ ಕೂಟವನ್ನು ರಚಿಸಿದ್ದರು. ಈಗ ಅವರೇ ಅದನ್ನು ತೊರೆದಿದ್ದಾರೆ. ಇದಕ್ಕೆ ಕಾರಣ ಏನು?

ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ ಮತ್ತು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಜೊತೆ ಕೆಲಸ ಮಾಡಲು ಸಾಧ್ಯವಾಗದ ಪರಿಣಾಮ ನಿತೀಶ್ ರಾಜಕುಮಾರ್ ನೀಡಿದರು. ಪಕ್ಷದ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ, ಸಮ್ಮಿಶ್ರದಲ್ಲಿ ಅಸಮರ್ಥನೀಯ ಪರಿಸ್ಥಿತಿಯ ಕಾರಣದಿಂದ ಕೆಳಗಿಳಿಯಲು ಸಲಹೆ ಪಡೆದರು ಎಂದು ನಿತೀಶ್ ಕುಮಾರ್ ಅವರೇ ಹೇಳಿಕೊಂಡಿದ್ದಾರೆ. ಆದರೆ, ಮತ್ತೊಂದೆಡೆ ಜೆಡಿಯು ಕಾಂಗ್ರೆಸ್ ಪಕ್ಷವೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎಂದು ಹೇಳಿದೆ.

ಸಂಯುಕ್ತ ಜನತಾ ದಳದ ವರ್ತಾರ ಕೆ ಸಿ ತ್ಯಾಗಿ ಅವರು, ಇಂಡಿಯಾ ಕೂಟದ ನಾಯಕತ್ವವನ್ನು ಹೈಜಾಕ್ ಮಾಡಲು ಯತ್ನಿಸಿತು. ಹಾಗಾಗಿಯೇ ಜೆಡಿಯುವ ಇಂಡಿಯಾ ಕೂಟದಿಂದ ಹೊರ ಬರಬೇಕಾಯಿತು ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಜತೆಗೂಡಿ ಸಂಚು ರೂಪಿಸಿದ ಕಾಂಗ್ರೆಸ್ ನಾಯಕತ್ವವನ್ನು ಪಡೆದುಕೊಳ್ಳಲು ಹವಣಿಸಿತು ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 19ರಂದು ನಡೆದ ಇಂಡಿಯಾ ಮೈತ್ರಿ ಕೂಟದ ಸಭೆಯಲ್ಲಿ ಸಂಚಿನ ಮೂಲಕವೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಹುದ್ದೆಗೆ ಪ್ರಕಟಿಸಲಾಯಿತು. ಪಿತೂರಿಯ ಮೂಲಕ, ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮುಖವಾಗಿ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ಪಕ್ಷದ ವಿರುದ್ಧ ಇತರ ಎಲ್ಲಾ ಪಕ್ಷಗಳು ಹೋರಾಟದ ಮೂಲಕ ತಮ್ಮದೇ ಆದ ಗುರುತನ್ನು ಮಾಡಿಕೊಂಡಿವೆ ಎಂದು ತ್ಯಾಗಿ ಅವರು ಹೇಳಿದರು.

ಸೀಟು ಹಂಚಿಕೆ ಪ್ರಕ್ರಿಯೆಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿತ್ತು ಮತ್ತು ಸೂಕ್ತವಲ್ಲದ ಬೇಡಿಕೆಗಳನ್ನು ಮಾಡುತ್ತಿತ್ತು. ಇದರಿಂದ ಪ್ರಾದೇಶಿಕ ನಾಯಕರು ಅಸಮಾಧಾನಕ್ಕೊಳಗಾದರು. ಕಾಂಗ್ರೆಸ್ ನಡೆದುಕೊಳ್ಳುತ್ತಿದ್ದ ರೀತಿ ಇಂಡಿಯಾ ಮೈತ್ರಿ ಕೂಟ ಒಗ್ಗಟ್ಟು ಮತ್ತು ಪರಿಣಾಮಕಾರಿಯಾಗುವುದಕ್ಕೆ ಹಾನಿಕಾರವಾಗಿತ್ತು ಎಂದು ತ್ಯಾಗಿ ಅವರು ಹೇಳಿದ್ದಾರೆ. ತಕ್ಷಣಕ್ಕೆ ಸೀಟ್ ಷೇರಿಂಗ್ ಆಗಬೇಕು ಎಂದು ನಾವು ಒತ್ತಾಯಿಸುತ್ತಿದ್ದೆವು. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ಈ ಪ್ರಕ್ರಿಯೆಯನ್ನು ಎಳೆಯುತ್ತಾ ಕಾಲಹರಣ ಮಾಡುತ್ತಿತ್ತು. ಬಿಜೆಪಿ ವಿರುದ್ಧ ಇಂಡಿಯಾ ಕೂಟಕ್ಕೆ ಹೋರಾಡಲು ಯೋಜನೆಗಳೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Nitish Kumar: ನಿತೀಶ್ ಕುಮಾರ್ ಬಂಡಾಯದ ನಡುವೆ ದುರ್ವಾಸನೆ ಬೀರುತ್ತಿದೆ ಲಾಲು ಪುತ್ರಿಯ ‘ತ್ಯಾಜ್ಯ’ ಪೋಸ್ಟ್

Exit mobile version