Site icon Vistara News

Chennai Murder : ಪ್ರಿಯತಮನನ್ನು ಕೊಂದು ಕತ್ತರಿಸಿ ಎಸೆದ ಮಹಿಳೆಯ ಬಂಧನ

Woman Murder

ಚೆನ್ನೈ: ತನ್ನಲ್ಲಿಗೆ ಬರುತ್ತಿದ್ದ ಪುರುಷರನನ್ನೇ ಕೊಲೆ ಮಾಡಿ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಎಸೆದ ವೇಶ್ಯೆಯೊಬ್ಬಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಚೆನ್ನೈ ಇಂಟರ್​ನ್ಯಾಷನಲ್​ ಏರ್​ಪೋರ್ಟ್​​ನಲ್ಲಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಗ್ರೌಂಡ್ ಸ್ಟಾಪ್​ ಕೆಲಸ ಮಾಡುತ್ತಿದ್ದರು. ಮಾರ್ಚ್​ನಲ್ಲಿ ಕಣ್ಮರೆಯಾಗಿದ್ದ ಅವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದಾಗ ಕೊಲೆ ನಡೆದಿರುವುದು ಬಹಿರಂಗಗೊಂಡಿದೆ. ಮಹಿಳೆ ತುಂಡು ಮಾಡಿದ ದೇಹವನ್ನು ಕಂಡ ಕಂಡಲ್ಲಿ ಎಸೆಯಲು ಬೇರೆ ಗಿರಾಕಿಗಳ ನೆರವು ಪಡೆದುಕೊಂಡಿದ್ದಳು.

ಕೊಲೆಯಾದವರನ್ನು ಎಮ್​ ಜಯನಾಥನ್​ ಎಂದು ಗುರುತಿಸಲಾಗಿದೆ. ಆರೋಪಿ ಮಹಿಳೆ ಜಿ ಭಾಗ್ಯಲಕ್ಷ್ಮಿ ಕೊಲೆ ಮಾಡಿದ ಬಳಿಕ ದೇಹವನ್ನು ತುಂಡು ಮಾಡಲು ಬೇರೆ ಗಿರಾಕಿಗಳ ನೆರವು ಪಡೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜಯನಾಥನ್​ ಅವರು ನಾಗನಲ್ಲೂರು ಪ್ರದೇಶದ ನಿವಾಸಿಯಾಗಿದ್ದು ಸಹೋದರಿಯ ಜತೆ ವಾಸವಿದ್ದರು. ಅವರು ಆರೋಪಿ ಭಾಗ್ಯಲಕ್ಷ್ಮೀಯ ಬಳಿಗೆ ಆಗಾಗ ಹೋಗುತ್ತಿದ್ದರು. ಈ ವೇಳೆ ಅವರ ನಡುವೆ ಆತ್ಮೀಯತೆ ಸೃಷ್ಟಿಯಾಗಿತ್ತು. ಅವರಿಬ್ಬರು ದೇವಸ್ಥಾನವೊಂದರಲ್ಲಿ ಮದುವೆ ಕೂಡ ಆಗಿ ಪ್ರತ್ಯೇಕಗೊಂಡಿದ್ದರು. ಆದರೆ, ಅವರಿಬ್ಬರ ವಿವಾಹದ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ Shraddha Walker murder case : ಶ್ರದ್ಧಾಳ ದೇಹವನ್ನು ಕತ್ತರಿಸಲು 1 ಗರಗಸ, 2 ಚಾಕು ಉಪಯೋಗಿಸಿದ್ದ ಅಫ್ತಾಬ್; ಚಾರ್ಜ್​ಶೀಟ್​ನಲ್ಲಿ ಇನ್ನೇನಿದೆ ವಿವರ?

ಮಾರ್ಚ್​ 18ರಂದು ಜಯನಾಥನ್​ ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಹೋದರಿ ದೂರು ದಾಖಲಿಸಿದ್ದರು. ಪೊಲೀಸರು ಮೊಬೈಲ್​ ಫೋನ್ ನೆಟ್ವರ್ಕ್ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಭಾಗ್ಯಲಕ್ಷ್ಮಿಯ ಮನೆಗೆ ಹೋಗಿರುವುದು ಗೊತ್ತಾಗಿದೆ. ಪೊಲೀಸರು ಹೋಗಿ ವಿಚಾರಿಸಿದಾಗ ಗೊಂದಲಕಾರಿ ಹೇಳಿಕೆ ನೀಡಿದ ಕಾರಣ ಹೇಳಿಕೆ ನೀಡಿದ ಕಾರಣ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಪ್ಲಾಸ್ಟಿಕ್​ನಲ್ಲಿ ತುಂಬಿ ಎಸೆದಿದ್ದರು

ಜಯನಾಥನ್​ ಅವರನ್ನು ಕೊಲೆ ಮಾಡಿದ್ದ ಭಾಗ್ಯ ಲಕ್ಷ್ಮಿ ಚೆನ್ನೈನಲ್ಲಿ ತನಗೆ ಪರಿಚಯ ಇರುವ ಇನ್ನಷ್ಟು ಮಂದಿಯನ್ನು ಕರೆಸಿಕೊಂಡು ದೇಹವನ್ನು ಹಲವು ತುಂಡು ಮಾಡಿದ್ದರು. ಬಳಿಕ ಪ್ರತ್ಯೇಕವಾಗಿ ಪ್ಲಾಸ್ಟಿಕ್​ ಬ್ಯಾಗ್​ಗಳಲ್ಲಿ ತುಂಬಿಸಿ ಕೋವಲಮ್​ ಪ್ರದೇಶದಲ್ಲಿ ಎಸೆದಿದ್ದರು. ಎರಡ್ಮೂರು ಬಾರಿ ಬಸ್​ನಲ್ಲಿ ಹೋಗಿ ಎಸೆದು ಬಂದಿದ್ದರೆ ಇನ್ನೆರಡು ಬಾರಿ ಬಾಡಿಗೆ ಕಾರಿನಲ್ಲಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ

Exit mobile version