Site icon Vistara News

Bigg boss Kannada | ಕರಿಬೇವು ಚೆಲ್ಲಿದ ವಿನೋದ್ ಗೊಬ್ಬರ ಗಾಲಗೆ ಕ್ಲಾಸ್ ತೆಗೆದುಕೊಂಡ ಕಾವ್ಯ ಶ್ರೀ

big boss kannada

ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ ಮೊದಮೊದಲಿಗೆ ಕಾವ್ಯ ಶ್ರೀ ಮತ್ತು ವಿನೋದ್ ನಡುವೆ ಜಗಳ ಆಗುತ್ತಿತ್ತು. ಎಷ್ಟೋ ಬಾರಿ ಉಳಿದ ಸ್ಪರ್ಧಿಗಳು ಇವರಿಬ್ಬರನ್ನು ಸರಿ ಮಾಡಿದ್ದು ಉಂಟು. ಇದೀಗ ಕಾವ್ಯ ಶ್ರೀ ಅವರೇ ವಿನೋದ್ ಗೊಬ್ಬರಗಾಲಗೆ ತಮಾಷೆ ಮಾಡಿದ್ದಾರೆ. ಅಡುಗೆ ಮನೆಯಲ್ಲಿ ಹೆಚ್ಚು ಜನರಿದ್ದಾಗ ಗೊಬ್ಬರಗಾಲ ಕರಿಬೇವಿನ ಸೊಪ್ಪನ್ನು ಚೆಲ್ಲಿದ್ದಾರೆ. ಇದನ್ನು ಕಾವ್ಯಶ್ರೀ ನಗು ನಗುತ್ತಾನೆ ಆಕ್ಷೇಪಿಸಿದ್ದು, ಮನೆಯವರಿಗೆಲ್ಲಾ ನಗು ತರಿಸಿದೆ.

ಗೊಬ್ಬರಗಾಲ ಕರಿಬೇವು ಚೆಲ್ಲಿದ್ದನ್ನು ಕಂಡ ಕಾವ್ಯಶ್ರೀ ‘ಯಾಕೋ ಕರಿಬೇವು ಹಿಂಗೆ ಚೆಲ್ಲಿದ್ದೀಯಾ ನಿನ್ನ ಮುಖಕ್ಕೆ ಪ್ಯಾರ್ ಹಾಕ’ ಎಂದಿದ್ದಾರೆ.

ಗೊಬ್ಬರಗಾಲ ಉತ್ತರ‌ ನೀಡಿ, ಪ್ಯಾರ್ ಅಂದರೆ ಏನು ಹೇಳಿ ಎಂದಿದ್ದಾರೆ. ಬಳಿಕ ಕಾವ್ಯ ಶ್ರೀ ಅವರು ಗೊಬ್ಬರಗಾಲ ಅವರಿಗೆ “ನಿನ್ನ ಮುಖ ನಾಯಿ ನೆಕ್ಕ ಎಂದಿದ್ದಾರೆ. ಅದಕ್ಕೆ ಗೊಬ್ಬರಗಾಲ, “ನಿನ್ನನ್ನೇ ನಾಯಿ ಅಂತ ಅಂದುಕೊಂಡಿದ್ದೀನಿ” ಎಂದು ಉತ್ತರ ನೀಡಿದ್ದಾರೆ.

ಕಳೆದ ಎರಡು ವಾರದಿಂದ ಕಾವ್ಯಶ್ರೀ ಅವರು ಮನೆಯಲ್ಲಿ ಆಕ್ಟಿವ್ ಆಗಿದ್ದು, ನೆಟ್ಟಿಗರು ಕಾವ್ಯಶ್ರೀ ತಮಾಷೆ ನೋಡಿ ಇದೇ ರೀತಿ ಆಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಸಾನ್ಯ ನೇರವಾಗಿ ನಾಮಿನೇಟ್‌ ಮಾಡಿದ್ದಕ್ಕೆ ಆರ್ಯವರ್ಧನ್‌ ಫುಲ್‌ ಗರಂ!

Exit mobile version