Site icon Vistara News

IPL 2023 : ಲಕ್ನೊ ಸೂಪರ್​ ಜಯಂಟ್ಸ್​ ತಂಡ ಸೇರಿದ ಯುವ ಬೌಲರ್​ ಅರ್ಪಿತ್​ ಗುಲೇರಿಯಾ

Arpit Guleria is a young bowler who has joined the Lucknow Super Giants team

#image_title

ಲಖನೌ: ಲಕ್ನೊ ಸೂಪರ್ ಜಯಂಟ್ಸ್​ ತಂಡದ ವೇಗದ ಬೌಲರ್​ ಮಾಯಾಂಕ್​ ಯಾದವ್​ ಗಾಯಗೊಂಡಿದ್ದಾರೆ. ಅವರು ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಆಡುವುದಿಲ್ಲ ಎಂಬುದಾಗಿ ತಂಡದ ಮೂಲಗಳು ತಿಳಿಸಿವೆ. ಹೀಗಾಗಿ ಹಿಮಾಚಲ ಪ್ರದೇಶದ ಮಾಯಾಂಕ್​ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಲಕ್ನೊ ಫ್ರಾಂಚೈಸಿ. ಇದರೊಂದಿಗೆ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಗಾಯಾಗಳುಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗಿದೆ. ಮಯಾಂಕ್​ ಯಾದವ್​ಗೆ ಆಗಿರುವ ಗಾಯದ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ತಂಡವನ್ನು ತೊರೆದು ಪುನಶ್ಚೇತನಕ್ಕೆ ಹೋಗಲಿದ್ದಾರೆ ಎಂಬುದಾಗಿ ಮಾಹಿತಿ ಬಂದಿದೆ.

ಅರ್ಪಿತ್​ ಗುಲೇರಿಯಾ ಅವರನ್ನು 20 ಲಕ್ಷ ರೂಪಾಯಿ ಮೂಲಬೆಲೆಗೆ ಲಕ್ನೊ ತಂಡ ತನ್ನದಾಗಿಸಿಕೊಂಡಿದೆ. ಈ ಬೌಲರ್​ ಕಿರು ಅವಧಿಯ ದೇಶಿಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 15 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 44 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡಿದ್ದು, 13 ಲಿಸ್ಟ್​ ಎ ಪಂದ್ಯಗಳಲ್ಲಿ 11 ವಿಕೆಟ್​ ಕಬಳಿಸಿದ್ದಾರೆ.

ಟಿ20 ಪಂದ್ಯವನ್ನೇ ಆಡದ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡ ಕೆಕೆಆರ್​

ಕೋಲ್ಕೊತಾ: ಸುಯಾಶ್ ಶರ್ಮಾ ಯುವ ಲೆಗ್​ ಸ್ಪಿನ್ನರ್ ಅನ್ನು ಐಪಿಎಲ್​ಗೆ ಪರಿಚಯಿಸಿದ್ದ ಕೋಲ್ಕೊತಾ ನೈಟ್​ ರೈಡರ್ಸ್ ತಂಡದ ಇದೀಗ ಒಂದೇ ಒಂದು ಟಿ20 ಪಂದ್ಯವನ್ನು ಆಡದ ಬ್ಯಾಟರ್​ ಒಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿದೆ. 20 ವರ್ಷದ ಆರ್ಯ ದೇಸಾಯಿ ಕೆಕೆಆರ್​ ಬಳಗ ಸೇರಿಕೊಂಡ ಆಟಗಾರ. 20 ಲಕ್ಷ ರೂಪಾಯಿ ನೀಡಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಫ್ರಾಂಚೈಸಿ. ದೇಸಾಯಿ ಟಾಟಾ ಐಪಿಎಲ್​ನ ಇನ್ನುಳಿದ ಪಂದ್ಯಗಳಲ್ಲಿ ಕೆಕೆಆರ್​ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಗುಜರಾತ್ ಮೂಲಕ ಆರ್ಯ ದೇಸಾಯಿ ಮೂರು ಪ್ರಥಮದರ್ಜೆ ಪಂದ್ಯಗಳನ್ನು ಗುಜರಾತ್ ತಂಡದ ಪರವಾಗಿ ಆಡಿದ್ದಾನೆ. ಒಟ್ಟು 151 ರನ್​ಗಳನ್ನು ಅವರು ಬಾರಿಸಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : IPL 2023 : ಚಿನ್ನದ ಹುಡುಗ ನೀರಜ್​ ಚೋಪ್ರಾ ಅವರಂತೆಯೇ ಕಾಣುವ ಕೆಕೆಆರ್​ನ ಈ ಸ್ಪಿನ್ನರ್​ ಯಾರು?

ದೇಸಾಯಿ 2022-23ರಲ್ಲಿ ಮೂರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿದ್ದಾನೆ. ವಿದರ್ಭ ತಂಡದ ವಿರುದ್ಧ ಅವರು ಅರ್ಧ ಶತಕ ಕೂಡ ಬಾರಿಸಿದ್ದರು. ಆದರೆ, ಸೀಮಿತ ಓವರ್​ಗಳ ಮಾದರಿಯಲ್ಲಿ ಒಂದೇ ಒಂದು ಪಂದ್ಯವನ್ನು ಅವರು ಆಡಿರಲಿಲ್ಲ.

ಕೆಕೆಆರ್ ತಂಡ ಯುವ ಆಟಗಾರರಿಗೆ ಪ್ರೋತ್ಸಾಹ ಕೊಡುವುದು ಇದೇ ಮೊದಲಲ್ಲ. ಕಳೆದ ವಾರ ಸ್ಪಿನ್​ ಬೌಲರ್​ ಸುಯಾಶ್​ ಶರ್ಮಾಗೆ ಅವಕಾಶ ನೀಡುವ ಮೂಲಕ ಮೆಚ್ಚುಗೆ ಗಳಿಸಿತ್ತು. ಸುಯಾಶ್​ ದೇಶಿಯ ಕ್ರಿಕೆಟ್​ನಲ್ಲಿ ಆಡದೇ ಇರುವ ಹೊರತಾಗಿಯೂ ಆರ್​ಸಿಬಿ ವಿರುದ್ಧದ ಹಣಾಹಣಿಯಲ್ಲಿ ಅವಕಾಶ ನೀಡಲಾಗಿತ್ತು. ಆ ಪಂದ್ಯದಲ್ಲಿ ಅವರು ಮೂರು ವಿಕೆಟ್​ ಕಿತ್ತು ತಂಡದ 81 ರನ್​ಗಳ ಅಂತರದ ವಿಜಯದಲ್ಲಿ ಪಾಲು ಪಡೆದುಕೊಂಡಿದ್ದರು.

Exit mobile version