ಅಹಮದಾಬಾದ್ : ವಿಶ್ವ ಕಪ್ ಫೈನಲ್ (ICC World Cup 2023) ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಮಾಡುವುದಾಗಿ ಹೇಳಿದೆ. ಆ ತಂಡದ ನಾಯಕ ಪಿಚ್ ಒಣಗಿರುವುದರಿಂದ ಹಾಗೂ ಇಬ್ಬನಿ ಪರಿಣಾಮ ಹೆಚ್ಚಿರುವ ಕಾರಣ ಮೊದಲು ಫೀಲ್ಡಿಂಗ್ ಮಾಡಿ ಆ ಬಳಿಕ ಚೇಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸೂಕ್ತ ಆಯ್ಕೆಯನ್ನು ಮಾಡಿಕೊಂಡಿದ್ದಾರೆ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ. ಆದರೆ, ಭಾರತ ತಂಡದ ಪಾಲಿಗೆ ಟಾಸ್ ಸೋಲು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಗೊತ್ತಿಲ್ಲ. ಯಾಕೆಂದರೆ ಭಾರತ ತಂಡ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸಲು ರೆಡಿಯಾಗಿದೆ ಎಂಬುದಾಗಿ ಕ್ರಿಕೆಟ್ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
Not a high scoring game
— DK (@DineshKarthik) November 19, 2023
Team batting second if dew around is better suited for a win
Though interestingly both teams might bat first I feel
Big game . Put runs on board #CricketWorldCup pic.twitter.com/1uDVusZYPa
ಟಾಸ್ ಸೋಲಿನಿಂದ ನಮಗೇನು ನಷ್ಟವಾಗಿಲ್ಲ ಎಂಬುದಾಗಿ ಭಾರತ ತಂಡ ನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ನಾವು ಟಾಸ್ ಗೆದ್ದಿದ್ದರೆ ನಮ್ಮದು ಬ್ಯಾಟಿಂಗ್ ಆಯ್ಕೆಯೇ ಆಗಿರುತ್ತಿತ್ತು ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಟಾಸ್ ನಿರ್ಣಯದಲ್ಲಿ ಎರಡೂ ತಂಡಗಳು ಸಂತೋಷಗೊಂಡಿವೆ ಎಂದೇ ಹೇಳಬಹುದು. ರೋಹಿತ್ ಮಾತಿನಲ್ಲಿ ಸತ್ಯವಿದೆ. ಯಾಕೆಂದರೆ ಭಾರತ ತಂಡ ದೊಡ್ಡ ಮೊತ್ತವನ್ನು ಪೇರಿಸಿಯೇ ಎದುರಾಳಿಯನ್ನು ನಿಯಂತ್ರಣ ಮಾಡುವ ಗುರಿಯನ್ನು ಹೊಂದಿರುವುದು ತಂಡದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ಸ್ಪಷ್ಟವಾಗುತ್ತದೆ. ಪಿಚ್ ಸ್ವಲ್ಪ ಮಟ್ಟಿಗೆ ಸ್ಪಿನ್ಗೆ ನೆರವಾಗುತ್ತದೆ ಎಂಬ ಸುಳಿವು ಇರುವ ಹೊರತಾಗಿಯೂ ರೋಹಿತ್ ಶರ್ಮಾ ಅಶ್ವಿನ್ ಅವರನ್ನು 11ರ ಬಳಗಕ್ಕೆ ಸೇರಿಸದೇ ಸೂರ್ಯಕುಮಾರ್ ಅವರನ್ನು ಉಳಿಸಿಕೊಂಡಿದ್ದಾರೆ. ಅಂದರೆ ಭಾರತ ತಂಡದ ಗುರಿ ಸ್ಪಷ್ಟವಾಗಿದೆ. ಅಂದರೆ, ಮೊದಲು ಬ್ಯಾಟ್ ಮಾಡಿದ ಒಡ್ಡ ಮೊತ್ತವನ್ನು ಪೇರಿಸಿ ಎದುರಾಳಿಯನ್ನು ನಿಯಂತ್ರಿಸುವುದೇ ಟೀಮ್ ಇಂಡಿಯಾದ ಗುರಿಯಾಗಿದೆ.
ನಾನು ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆ. ಉತ್ತಮ ಪಿಚ್. ದೊಡ್ಡ ಸ್ಕೋರ್ ಬಾರಿಸಿ ಎದುರಾಳಿ ಮೇಳೆ ಒತ್ತಡ ಹೇರುವ ತಂತ್ರ ನಮ್ಮದು . ಕ್ರಿಕೆಟ್ ಈವೆಂಟ್ ನ ಅತಿದೊಡ್ಡ ಸಂದರ್ಭ. ನಾವು ಚೆನ್ನಾಗಿ ಮತ್ತು ಶಾಂತವಾಗಿ ಇರಬೇಕು. ಫೈನಲ್ನಲ್ಲಿ ತಂಡವನ್ನು ಮುನ್ನಡೆಸುವುದು ನನ್ನ ಕನಸು. ಅದು ನನಸಾಗಿದೆ. ನಮ್ಮ ಮುಂದೆ ಏನಿದೆ ಎಂದು ನನಗೆ ತಿಳಿದಿದೆ. ನಾವು ಉತ್ತಮವಾಗಿ ಆಡಬೇಕು ಮತ್ತು ಫಲಿತಾಂಶವನ್ನು ಪಡೆಯಬೇಕು. ನೀವು ಮೈದಾನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕಳೆದ 10 ಪಂದ್ಯಗಳಲ್ಲಿ ನಾವು ಸ್ಥಿರವಾಗಿ ಆಡಿದ್ದೇವೆ. ನಾವು ಒಂದೇ ತಂಡದಲ್ಲಿ ಆಡುತ್ತಿದ್ದೇವೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ
ಪಿಚ್ ಹೇಗಿದೆ?
ಪಿಚ್ ಸಂಖ್ಯೆ ಐದರಲ್ಲಿ ಪಂದ್ಯ ನಡೆಯಲಿದೆ. ಇದೇ ಪಿಚ್ ಅನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬಳಸಲಾಗಿದೆ. ಇದು ಅದಕ್ಕಿಂತ ಭಿನ್ನವಾಗಿದೆ ಏಕೆಂದರೆ ಇದನ್ನು ಬಹಳ ಸಮಯದವರೆಗೆ ತೆರೆದಿಡಲಾಗಿದೆ. ಇದು ತುಂಬಾ ಒಣಗಿದಂತೆ ಕಾಣುತ್ತದೆ, ಹೆಚ್ಚು ಉರುಳುವುದಿಲ್ಲ. ವಿಶೇಷವಾಗಿ ಸ್ಪಿನ್ನರ್ ಗಳಿಗೆ ನೆರವಾಗುವಂತೆ. ಅದು ಸ್ವಲ್ಪ ತಿರುಗುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಇಬ್ಬನಿ ಇಲ್ಲದಿದ್ದರೆ, ನೀವು ತೊಂದರೆಗೆ ಸಿಲುಕಬಹುದು. ಮೊದಲು ಬ್ಯಾಟಿಂಗ್ ಮಾಡಿ, ದೊಡ್ಡ ಸ್ಕೋರ್ ಬಾರಿಸುವುದೇ ಉತ್ತಮ ಆದರೆ ಭಾರತ ತಂಡ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಎಂದು ಕಾಮೆಂಟೇಟರ್ ರವಿ ಶಾಸ್ತ್ರಿ ಹೇಳಿದ್ದಾರೆ.
ಕಳೆದ ಮೂರು ವಿಶ್ವಕಪ್ ಮತ್ತು ನಾಲ್ಕು ಟಿ20 ವಿಶ್ವಕಪ್ ಫೈನಲ್ ನಲ್ಲಿ ಎರಡನೇ ಬ್ಯಾಟಿಂಗ್ ಮಾಡಿದವರು ಗೆದ್ದಿದ್ದಾರೆ. ಈ ಆಧಾರದಲ್ಲಿ ಆಸಿಸ್ ಬೌಲಿಂಗ್ ಆಯ್ದುಕೊಂಡಿದೆ. ಆದರೆ ಮೊದಲು ಬ್ಯಾಟ್ ಬೃಹತ್ ರನ್ ಪೇರಿಸಿದರೆ ಆಸ್ಟ್ರೇಲಿಯಾ ಮೇಲೆ ಒತ್ತಡ ಬೀಳಲಿದೆ. ಹಾಗಾಗಿ ಮೊದಲು ಬ್ಯಾಟಿಂಗ್ ಅವಕಾಶ ಸಿಕ್ಕಿರುವುದು ಭಾರತಕ್ಕೇ ಅನುಕೂಲಕರ. ಹೀಗಾಗಿ ಈ ಪಿಚ್ನಲ್ಲಿ ಭಾರತ ತಂಡ ದೊಡ್ಡ ಮೊತ್ತ ಪೇರಿಸಿ ಗೆಲ್ಲುವುದು ಗ್ಯಾರಂಟಿ ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ.
ತಂಡಗಳು
ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹೇಜಲ್ವುಡ್.