Site icon Vistara News

IND vs AUS | ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡವನ್ನೇ ಬದಲಾಯಿಸಿದ ಬಿಸಿಸಿಐ!

asia cup

ತಿರುವನಂತಪುರ : ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಗೆ ಕೆಲವೇ ಗಂಟೆಗಳ ಮೊದಲು ಬಿಸಿಸಿಐ, ಮೂವರು ಆಟಗಾರರ ಸೇರ್ಪಡೆಯೊಂದಿಗೆ ಹೊಸ ತಂಡವನ್ನು ಪ್ರಕಟಿಸಿದೆ. ದೀಪಕ್‌ ಹೂಡ ಗಾಯದ ಸಮಸ್ಯೆ ಹಾಗೂ ಮೊಹಮ್ಮದ್‌ ಶಮಿ ಕೊರೊನಾ ಸೋಂಕಿನ ಕಾರಣ ತಂಡಕ್ಕೆ ಅಲಭ್ಯರಾದ ಕಾರಣ ಪರಿಷ್ಕೃತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಇಬ್ಬರು ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಕ್ಕೆ ಉಳಿದರೆ, ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಹಾಗೂ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್‌ ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿದೆ. ನಾಲ್ವರ ಅಲಭ್ಯತೆಯ ಹೊರತು ಮೂವರನ್ನು ಮಾತ್ರ ತಂಡಕ್ಕೆ ಸೇರಿಸಲಾಗಿದೆ. ಅವರೆಂದರೆ ಶ್ರೇಯಸ್‌ ಅಯ್ಯರ್‌, ಉಮೇಶ್ ಯಾದವ್‌ ಹಾಗೂ ಬಂಗಾಳದ ಅಲ್‌ರೌಂಡರ್‌ ಶಹಬಾಜ್‌ ಅಹಮದ್‌.

ದೀಪಕ್‌ ಹೂಡಾ ಅವರು ಗಾಯದ ಸಮಸ್ಯೆಯಿಂದ ಹೊರಕ್ಕೆ ಉಳಿದಿದ್ದಾರೆ ಎಂಬುದಾಗಿ ಬಿಸಿಸಿಐ ಬುಧವಾರ ಪ್ರಕಟಣೆ ಹೊರಡಿಸಿದೆ. ನಾಲ್ವರ ಅಲಭ್ಯತೆ ಹಾಗೂ ಇಬ್ಬರು ಗಾಯದಿಂದ ಹೊರಕ್ಕೆ ಉಳಿದಿರುವ ವಿಚಾರ ಮೊದಲ ಗೊತ್ತಾಗಿದ್ದರೂ, ಬುಧವಾರವಷ್ಟೇ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ.

ತಂಡ ಹೀಗಿದೆ

ರೋಹಿತ್‌ ಶರ್ಮ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ದಿನೇಶ್ ಕಾರ್ತಿಕ್‌, ರವಿಚಂದ್ರನ್‌ ಅಶ್ವಿನ್‌, ಯಜ್ವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ಅರ್ಶ್‌ದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌, ದೀಪಕ್‌ ಚಾಹರ್‌, ಜಸ್‌ಪ್ರಿತ್‌ ಬುಮ್ರಾ, ಉಮೇಶ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ಶಹಬಾಜ್‌ ಅಹಮದ್‌.

Exit mobile version