Site icon Vistara News

IPL 2023 : ಡಗ್​ಔಟ್​​ನಲ್ಲಿ ಪಂತ್​ ಜೆರ್ಸಿ ನೇತು ಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ವಿರುದ್ಧ ಬಿಸಿಸಿಐ ಗರಂ

BCCI is fierce against the Delhi Capitals franchise, who hung the Pant jersey in the dugout.

#image_title

ನವ ದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್​ ಕಾರು ಅಪಘಾತದಲ್ಲಿ ಗಾಯಗೊಂಡು ಹಾಲಿ ಆವೃತ್ತಿಯ ಟೂರ್ನಿಯಲ್ಲಿ ಆಡುತ್ತಿಲ್ಲ. ಆದರೆ, ಅವರ ತಂಡ ಹಾಗೂ ಹೆಡ್ ಕೋಚ್​ ರಿಕಿ ಪಾಂಟಿಂಗ್​ ಯುವ ಆಟಗಾರನ ಸ್ಮರಣೆಯಲ್ಲಿದೆ. ಹಾಲಿ ಆವೃತ್ತಿಯ ಟೂರ್ನಿ ಆರಂಭಗೊಂಡ ಬಳಿಕದಿಂದಲೂ ಪಂತ್​ ನಮ್ಮೊಂದಿಗಿದ್ದಾರೆ, ನಾವು ಅವರೊಂದಿಗೆ ಇದ್ದೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇವೆಲ್ಲದಕ್ಕಿಂತ ಹೆಚ್ಚಾಗಿ ಲಕ್ನೊ ಸೂಪರ್​ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ಧರಿಸುವ 17 ಸಂಖ್ಯೆಯುಳ್ಳ ಜೆರ್ಸಿಯನ್ನು ಡಗ್​ಔಟ್​ ಮೇಲೆ ನೇತು ಹಾಕಿದ್ದು. ಆದರೆ, ಈ ಕ್ರಮದ ಬಗ್ಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ ಎಂಬುದಾಗಿ ವರದಿಯಾಗಿದೆ.

ಜೆರ್ಸಿಯನ್ನು ತಂಡದ ಡಗ್​ಔಟ್​ ಮೇಲೆ ನೇತು ಹಾಕುವುದು ನಿಧನ ಹೊಂದಿದಾಗ. ಗಾಯಗೊಂಡವರಿಗೆಲ್ಲ ಈ ರೀತಿ ಮಾಡುವುದು ಸರಿಯಲ್ಲ. ರಿಷಭ್​ ಪಂತ್​ ಅವರಿಗೆ ಧೈರ್ಯ ತುಂಬುವುದು ಸರಿ ಎನಿಸಿದರೂ ಅವರು ನಿರೀಕ್ಷೆಗಿಂತ ಅತಿ ವೇಗದಲ್ಲಿ ಗುಣಮುಖರಾಗುತ್ತಿದ್ದಾರೆ. ಹೀಗಾಗಿ ಮಿತಿ ಮೀರಿ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ ಎಂದು ಫ್ರಾಂಚೈಸಿಗೆ ಬಿಸಿಸಿಐ ಹೇಳಿದೆ ಎಂಬುದಾಗಿ ವರದಿಯಾಗಿದೆ.

ಇದನ್ನೂ ಓದಿ : IPL 2023 : ಧೋನಿಯನ್ನು ನೋಡಿ ಕಲಿಯಿರಿ; ಯುವ ಆಟಗಾರರಿಗೆ ಕಿವಿ ಮಾತು ಹೇಳಿದ ಉತ್ತಪ್ಪ, ರೈನಾ

ಈ ವರದಿ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಪಂತ್​ಗೆ ಬೆಂಬಲ ಸೂಚಿಸು ತಮ್ಮ ಕೆಲಸ ಮುಂದುವರಿಯಲಿದೆ ಎಂಬುದಾಗಿ ಫ್ರಾಂಚೈಸಿ ಹೇಳಿದೆ. ಅದರ ಪ್ರಕಾರ ಪಂದ್ಯವೊಂದರಲ್ಲಿ ತಂಡದ ಎಲ್ಲ ಆಟಗಾರರು ಪಂತ್ ಧರಿಸುವ 17 ಸಂಖ್ಯೆ ಜೆರ್ಸಿ ಧರಿಸಲಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಘಟಕದ ಆಕ್ಷೇಪ

ರಿಷಭ್​ ಪಂತ್ ಅವರನ್ನು ಪಂದ್ಯವೊಂದರ ವೇಳೆ ಡಗ್​ಔಟ್​ನಲ್ಲಿ ಕೂರಿಸುವುದು ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯೋಜನೆಯಾಗಿದೆ. ಇದನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ ಆಕ್ಷೇಪಿಸಿದೆ ಎಂಬುದಾಗಿಯೂ ವರದಿಯಾಗಿದೆ. ಐಪಿಎಲ್​ ಅಥವಾ ಕ್ರಿಕೆಟ್ ನಿಯಮದ ಪ್ರಕಾರ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಬಿಟ್ಟು ಡಗ್​ ಔಟ್​ನಲ್ಲಿ ಕುಳಿತುಕೊಳ್ಳುವಂತಿಲ್ಲ. ಫ್ರಾಂಚೈಸಿ ಮಾಲೀಕರು ಕೂಡ ಆ ಪ್ರದೇಶಕ್ಕೆ ಪ್ರವೇಶ ಮಾಡುವಂತಿಲ್ಲ. ಅದರು ಭ್ರಷ್ಟಾಚಾರ ತಡೆಯ ನಿಯಮವಾಗಿದೆ. ಹೀಗಾಗಿ ಪ್ರಸ್ತುತ ತಂಡದಲ್ಲಿಯೇ ಇಲ್ಲದ ಪಂತ್ ಅವರನ್ನು ಡಗ್ಔಟ್​ಗೆ ಕರೆಸಿಕೊಳ್ಳುವುದು ಸರಿಯಲ್ಲ ಎಂಬುದು ಆಕ್ಷೇಪವಾಗಿದೆ.

ರಿಷಭ್​ ಅಲಭ್ಯತೆ ಬಗ್ಗೆ ಗಂಗೂಲಿ ಹೇಳಿದ್ದೇನು?

ರಿಷಭ್​ ಪಂತ್​ ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ತಂಡವೂ ಅವರ ಸೇವೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ನನಗೆ ಖಾತರಿಯಿದೆ. ಅವರು ಯುವ ಆಟಗಾರನಾಗಿದ್ದು ತಮ್ಮ ವೃತ್ತಿ ಕ್ರಿಕೆಟ್​ನಲ್ಲಿ ಸಾಧನೆ ಮಾಡಲು ಸಾಕಷ್ಟು ಸಮಯ ಹೊಂದಿದ್ದಾರೆ. ಅವರೊಬ್ಬ ವಿಶೇಷ ಕ್ರಿಕೆಟ್​ ಪ್ರತಿಭೆ ಎಂಬುದನ್ನು ನಾನು ಪ್ರತಿ ಬಾರಿಯೂ ಹೇಳುತ್ತೇನೆ ಎಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಂಪ್​ ಆರಂಭಕ್ಕೆ ಮೊದಲು ಅವರು ಹೇಳಿದರು.

ರಿಷಭ್​ ಪಂತ್​ ಆದಷ್ಟು ಬೇಗ ತಂಡಕ್ಕೆ ಮರಳಲಿ ಎಂದು ನಾನು ಬಯುಸುತ್ತೇನೆ. ಆದರೆ, ಅದಕ್ಕೆ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಲಿ. ಅವರು ಸಂಪೂರ್ಣವಾಗಿ ಗುಣಮುಖರಾದ ಬಳಿಕವಷ್ಟೇ ತಂಡಕ್ಕೆ ಬರಬೇಕು. ಆತುರ ಆತುರವಾಗಿ ತಂಡಕ್ಕೆ ಮರಳುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.

ರಿಷಭ್ ಪಂತ್​ ಕಳೆದ ವರ್ಷಾಂತ್ಯದಲ್ಲಿ ತಮ್ಮ ಕಾರಿನ ಮೂಲಕ ಡೆಲ್ಲಿಯಿಂದ ಡೆಹ್ರಾಡೂನ್​ಗೆ ಪ್ರಯಾಣ ಮಾಡುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದರು. ಅವರ ಕಾರು ಡಿವೈಡರ್​ಗೆ ಗುದ್ದಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ಸುಟ್ಟಗಾಯಗಳು ಹಾಗೂ ಮಂಡಿಯ ಮುರಿತಕ್ಕೆ ಒಳಗಾಗಿದ್ದರು. ಮೊದಲು ಡೆಹ್ರಾಡೂನ್​ನಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮುಂಬಯಿಯ ಕೊಕಿಲಾ ಬೆನ್​ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆದಿದ್ದರು.

Exit mobile version