Site icon Vistara News

Gautam Gambhir : ಆರ್​ಸಿಬಿಯ ಮಾಜಿ ಬ್ಯಾಟರ್​ ಬ್ಯಾಟಿಂಗ್​ ಕೋಚ್​ ಆಗಲಿ ಎಂದು ಬೇಡಿಕೆ ಇಟ್ಟ ಗಂಭೀರ್​

Gautam Gambhir

ಬೆಂಗಳೂರು: ಟೀಮ್ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ಮಾಜಿ ಆಲ್​ರೌಂಡರ್​ ಅಭಿಷೇಕ್ ನಾಯರ್ ಅವರ ಸೇವೆಯನ್ನು ಗೌತಮ್ ಗಂಭೀರ್ (Gautam Gambhir) ಭಾರತ ತಂಡಕ್ಕಾಗಿ ಕೋರಿದ್ದಾರೆ ಎಂಬುದಾಗಿ ವರದಿಯಾಗಿದೆ. ಹಿರಿಯ ರಾಷ್ಟ್ರೀಯ ಪುರುಷರ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಗಂಭೀರ್​, ಐಪಿಎಲ್ 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್​​ನಲ್ಲಿ ಅಭಿಷೇಕ್​ ಜತೆ ಕೆಲಸ ಮಾಡಿದ್ದರು. ಇದೀಗ ಅವರನ್ನೇ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಅಭಿಷೇಕ್ ನಾಯರ್​ ಐಪಿಎಲ್​ನಲ್ಲಿ ಆರ್​ಸಿಬಿ ಪರವಾಗಿ ಆಡಿದ್ದರು.

ಅಭಿಷೇಕ್ ನಾಯರ್ ಅವರನ್ನು ತಮ್ಮ ಸಹಾಯಕ ಸಿಬ್ಬಂದಿ ತಂಡಕ್ಕೆ ಸೇರಿಸಿಕೊಳ್ಳುವಂತೆ ಗಂಭೀರ್ ಭಾರತೀಯ ಕ್ರಿಕೆಟ್ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ನಾಯರ್ ಅವರು ಕೆಕೆಆರ್ ಅಕಾಡೆಮಿಯ ಮುಖ್ಯಸ್ಥರಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಉತ್ತಮ ಮಾರ್ಗದರ್ಶಕರಾಗಿ ತಮ್ಮ ಕೆಲಸವನ್ನು ಸಾಬೀತು ಮಾಡಿದ್ದಾರೆ. ಹಲವಾರು ಯುವ ಮತ್ತು ಅನುಭವಿ ಕ್ರಿಕೆಟಿಗರು ತಮ್ಮ ವೃತ್ತಿಜೀವನವನ್ನು ರೂಪಿಸುವಲ್ಲಿ ನಾಯರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮೇ ತಿಂಗಳ ಆರಂಭದಲ್ಲಿ ಕೆಕೆಆರ್ ತನ್ನ ಮೂರನೇ ಐಪಿಎಲ್ ಕಿರೀಟವನ್ನು ಎತ್ತಿಹಿಡಿದ ನಂತರ ಸ್ಪಿನ್ನರ್ ವರುಣ್ ಚಕ್ರವರ್ತಿ ನಾಯರ್ ಬಗ್ಗೆ ವಿಶೇಷ ಉಲ್ಲೇಖ ಮಾಡಿದ್ದರು.

ಗೌತಮ್ ಗಂಭೀರ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ಖಚಿತಪಡಿಸಲಾಗಿದ್ದು, ಬಿಸಿಸಿಐ ಈಗ ಇತರ ಸಹಾಯಕ ಸಿಬ್ಬಂದಿಯನ್ನು ಅಂತಿಮಗೊಳಿಸಲು ನೋಡುತ್ತಿದೆ. ದ್ರಾವಿಡ್ ಅವರೊಂದಿಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಕೂಡ ತಂಡದಿಂದ ಬೇರ್ಪಟ್ಟಿದ್ದಾರೆ.

ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರನ್ನು ಅಭಿನಂದಿಸಲಾಗಿದೆ. ಬಿಸಿಸಿಐ ಅವರ ಕೊಡುಗೆಯನ್ನು ಗೌರವಿಸುತ್ತದೆ ಮತ್ತು ಅವರು ಮುಂದೆ ಸಾಗಲಿ ಎಂದು ಹಾರೈಸುತ್ತದೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಗೌತಮ್ ಗಂಭೀರ್ ಅವರಿಗೆ ತಮ್ಮದೇ ಆದ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಿದ್ದರೂ ಬಿಸಿಸಿಐ ಶೀಘ್ರದಲ್ಲೇ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಿದೆ.

ಗಂಭೀರ್ ಅವರು ಭಾರತದ ಮಾಜಿ ಕ್ರಿಕೆಟಿಗರಾದ ಅಭಿಷೇಕ್ ನಾಯರ್ ಮತ್ತು ವಿನಯ್ ಕುಮಾರ್ ಅವರನ್ನು ಕ್ರಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ತರಬೇತುದಾರರನ್ನಾಗಿ ಕೇಳಿದ್ದಾರೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಅನುಭವ ಕಡಿಮೆ, ಕೆಲಸ ಹೆಚ್ಚು

ನಾಯರ್ ಅಥವಾ ಕುಮಾರ್ ಯಾವುದೇ ರಾಜ್ಯ ಅಥವಾ ರಾಷ್ಟ್ರೀಯ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸಿಲ್ಲ ಹೀಗಾಗಿ ಅಂತಾರಾಷ್ಟ್ರೀಯ ಅನುಭವ ಕಡಿಮೆ. ಆದರೆ, ಕೆಲಸದಲ್ಲಿ ಚಾಕಚಕ್ಯತೆ ಹೊಂದಿದ್ದಾರೆ. ನಾಯರ್ ಅವರು ಕೋಲ್ಕತಾ ನೈಟ್ ರೈಡರ್ಸ್ನ ಸಹಾಯಕ ತರಬೇತುದಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಕೆಲಸಕ್ಕಾಗಿ ಎಲ್ಲೆಡೆಯಿಂದ ಪ್ರಶಂಸೆಯನ್ನು ಪಡೆದಿದ್ದಾರೆ. ವಿನಯ್ ಕುಮಾರ್ ಈ ಹಿಂದೆ ಯುಎಇಯ ಐಎಲ್ಟಿ 20 ಯಲ್ಲಿ ಎಂಐ ಎಮಿರೇಟ್ಸ್​​ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: Rahul Dravid : ತಮಗೆ ನೀಡಿದ 2.5 ಕೋಟಿ ರೂಪಾಯಿ ನಿರಾಕರಿಸಿ ಸಮಾನತೆ ತತ್ವ ಸಾರಿದ ರಾಹುಲ್ ದ್ರಾವಿಡ್​

ಗಂಭೀರ್ ಕೇವಲ ಒಂದು ಋತುವಿನ ನಂತರ ನೈಟ್ ರೈಡರ್ಸ್​ನ ಮಾರ್ಗದರ್ಶಕ ಹುದ್ದೆಯನ್ನು ತೊರೆದು ಭಾರತದ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಐಪಿಎಲ್ 2024 ರಲ್ಲಿ ಕೆಕೆಆರ್​ನ ಯಶಸ್ಸಿಗೆ ಮಾಜಿ ಆರಂಭಿಕ ಆಟಗಾರ ಭಾರಿ ಮನ್ನಣೆ ಪಡೆದರು. ಗಂಭೀರ್ ಮತ್ತು ನಾಯರ್ ನಿಕಟ ಕೆಲಸದ ಸಂಬಂಧವನ್ನು ಹೊಂದಿದ್ದಾರೆ. ಮುಂಬೈನ ಮಾಜಿ ಕ್ರಿಕೆಟಿಗ ಟೆಸ್ಟ್ ಮತ್ತು ಏಕದಿನ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.

Exit mobile version