Site icon Vistara News

ICC World Cup 2023 : ಹಮಾಸ್ ಉಗ್ರರಿಗೆ ಬೆಂಬಲ ನೀಡಿದ ರಿಜ್ವಾನ್​ ಬೆಂಡೆತ್ತಿದ ಪಾಕ್​ ಕ್ರಿಕೆಟಿಗ!

ನವದೆಹಲಿ: ಶ್ರೀಲಂಕಾ ವಿರುದ್ಧದ ಪಾಕಿಸ್ತಾನದ ತಂಡದ ವಿಶ್ವ ಕಪ್​ ಪಂದ್ಯದ (ICC World Cup 2023) ಗೆಲುವನ್ನು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ದದಲ್ಲಿ ಪ್ರಾಣ ಕಳೆದುಕೊಂಡವರಿಗೆ ಅರ್ಪಿಸಿದ ಪಾಕಿಸ್ತಾನದ ಸ್ಟಾರ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಹೇಳಿಕೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ತಿರುಗೇಟು ನೀಡಿದ್ದಾರೆ. ಮುಂದಿನ ಬಾರಿ ಗೆಲುವನ್ನು ಮಾನವೀಯತೆಗೆ ಸಮರ್ಪಿಸಬೇಕು ಎಂದು ಕನೇರಿಯಾ ಹೇಳುವ ಮೂಲಕ ಅವರಿಗೆ ಪರೋಕ್ಷ ಪ್ರತಿಕ್ರಿಯೆ ಕೊಟ್ಟಿದ್ದಾರೆ.

“ಮುಂದಿನ ಬಾರಿ, ನಿಮ್ಮ ಗೆಲುವನ್ನು ಮಾನವೀಯತೆಗೆ ಅರ್ಪಿಸಿ. ಸರ್ವಶಕ್ತನು ಎಂದಿಗೂ ಕ್ರೌರ್ಯವನ್ನು ಬೆಂಬಲಿಸುವುದಿಲ್ಲ. #IndvsPak” ಎಂದು ದಾನಿಶ್ ಕನೇರಿಯಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೂಲ ಪೋಸ್ಟ್ ಬಗ್ಗೆ ಹೇಳುವುದಾದರೆ, ಏಕದಿನ ವಿಶ್ವಕಪ್ 2023 ರ ಎಂಟನೇ ಪಂದ್ಯದಲ್ಲಿ ಪಾಕಿಸ್ತಾನವು ಶ್ರೀಲಂಕಾ ವಿರುದ್ಧ ಭಾರಿ ಗೆಲುವು ದಾಖಲಿಸಿದೆ. 345 ರನ್​ಗಳ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನಕ್ಕೆ ರಿಜ್ವಾನ್ ಮತ್ತು ಅಬ್ದುಲ್ಲಾ ಶಫೀಕ್ ಅವರ ಅದ್ಭುತ ಶತಕಗಳು ನೆರವಾದವರು. ಹೀಗಾಗಿ ಪಾಕಿಸ್ತಾನ 6 ವಿಕೆಟ್​ಗಳಿಂದ ಜಯ ಸಾಧಿಸಿತ್ತು.

ಗೆಲುವಿನ ನಂತರ, ರಿಜ್ವಾನ್ ತಮ್ಮ ಎಕ್ಸ್ ಖಾತೆಯಲ್ಲಿ, “ಇದು ಗಾಜಾದಲ್ಲಿನ ನಮ್ಮ ಸಹೋದರ ಸಹೋದರಿಯರಿಗಾಗಿ. ಗೆಲುವಿಗೆ ಕೊಡುಗೆ ನೀಡಲು ಸಂತೋಷವಾಗಿದೆ. ಇದನ್ನು ಸುಲಭಗೊಳಿಸಿದ ಕೀರ್ತಿ ಇಡೀ ತಂಡಕ್ಕೆ, ವಿಶೇಷವಾಗಿ ಅಬ್ದುಲ್ಲಾ ಶಫೀಕ್ ಮತ್ತು ಹಸನ್ ಅಲಿಗೆ ಅಭಿನಂದನೆಗಳು. ಅದ್ಭುತ ಆತಿಥ್ಯ ಮತ್ತು ಬೆಂಬಲಕ್ಕಾಗಿ ಹೈದರಾಬಾದ್ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದರು.

ಒಂದೇ ಪಂದ್ಯದಲ್ಲಿ ಸೋತಿರುವ ಪಾಕ್​

ಏಕದಿನ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನದ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ತಂಡವು ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದೆ/ ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದೆ. ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ಮೊದಲ ಎರಡು ಪಂದ್ಯಗಳಲ್ಲಿ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾವನ್ನು ಮಣಿಸಿತ್ತು. ಆದಾಗ್ಯೂ, ಅವರು ವಿಶ್ವಕಪ್ನ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಿ ಹೀನಾಯ ಸೋಲಿಗೆ ಒಳಗಾಗಿತ್ತು.

ಮೊದಲು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನದ ಅಗ್ರ ಕ್ರಮಾಂಕದಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಉತ್ತಮ ಜೊತೆಯಾಟವನ್ನು ನಿರ್ಮಿಸಿದರು. ಆದಾಗ್ಯೂ, ಅವರು ಔಟಾದ ನಂತರ, ಮಧ್ಯಮ ಕ್ರಮಾಂಕವು ಲಾಭ ಪಡೆಯಲು ವಿಫಲವಾಯಿತು, ಏಕೆಂದರೆ ಅವರು ಕೇವಲ 191 ರನ್​​ಗಳಿಗೆ ಆಲೌಟ್ ಆದರು.

ಇದನ್ನೂ ಓದಿ: ICC World Cup 2023 : ಲಾಟರಿ ಚಾಂಪಿಯನ್​ಗಳು; ನೆಟ್ಟಿಗರು ಇಂಗ್ಲೆಂಡ್​ ತಂಡವನ್ನು ಟ್ರೋಲ್ ಮಾಡಿದ್ಯಾಕೆ?

ಸಣ್ಣ ಮೊತ್ತವನ್ನು ರಕ್ಷಿಸುವ ಗುರಿಯನ್ನು ಹೊಂದಿದ್ದ ಪಾಕ್​​ ತಂಡದ ಬೌಲಿಂಗ್ ದಾಳಿಯು ರೋಹಿತ್ ಶರ್ಮಾ ಅವರ ಪ್ರಾಬಲ್ಯಕ್ಕೆ ಅಪ್ಪಚ್ಚಿಯಾಯಿತು. ಶಾಹೀನ್ ಅಫ್ರಿದಿ 2 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆದಾಗ್ಯೂ, ಭಾರತವು ಏಳು ವಿಕೆಟ್​ಗಳಿಂದ ಪಂದ್ಯವನ್ನು ಗೆದ್ದಿತು.

ಜೈ ಶ್ರೀರಾಮ್ ಎಂದು ಕೂಗಿದ್ದ ಅಭಿಮಾನಿಗಳು

ಭಾರತ ಹಾಗೂ ಪಾಕಿಸ್ತಾನ (ind vs pak) ನಡುವಿನ ವಿಶ್ವ ಕಪ್​ ಕ್ರಿಕೆಟ್ ಪಂದ್ಯ ಅಷ್ಟೊಂದು ಜಿದ್ದಾಜಿದ್ದಿನಿಂದ ಕೂಡಿರಲಿಲ್ಲ. ಭಾರತ ತಂಡದ ಬೌಲಿಂಗ್ ದಾಳಿಗೆ ಬೆದರಿದ ಪಾಕ್​ 191 ರನ್​ಗೆ ಆಲ್​ಔಟ್ ಆದರೆ, ಭಾರತ ತಂಡ ನಿರಾಯಾಸವಾಗಿ 3 ವಿಕೆಟ್​ ಕಳೆದುಕೊಂಡು ಗೆಲುವು ಸಾಧಿಸಿತ್ತು. ಆದರೆ, ಪಂದ್ಯದುದ್ದಕ್ಕೂ ಅಭಿಮಾನಿಗಳ ಅಬ್ಬರ ಜೋರಾಗಿತ್ತು. ಯಾಕೆಂದರೆ 1.32 ಲಕ್ಷ ಸೀಟ್​ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಭಾರತೀಯ ಅಭಿಮಾನಿಗಳೇ ತುಂಬಿದ್ದರು. ಅವರಿಗೆ ಸಂತಸಕ್ಕೆ ಯಾವುದೇ ಲಗಾಮು ಇರಲಿಲ್ಲ. ಹೀಗಾಗಿ ಭಾರತೀಯ ತಂಡಕ್ಕೆ ಬೆಂಬಲ ನೀಡುವ ಜತೆಗೆ ವಿರೋಧಿ ತಂಡದ ಆಟಗಾರರನ್ನು ಲೇವಡಿ ಮಾಡುವ ಕೆಲಸ ಜೋರಾಗಿ ನಡೆದಿದೆ. ಅಂತೆಯೇ 49 ರನ್​ಗೆ ಔಟಾಗಿ ಪೆವಿಲಿಯನ್​ಗೆ ಮರಳುತ್ತಿದ್ದ ಮೊಹಮ್ಮದ್​ ರಿಜ್ವಾನ್ ಮುಂದೆ ಜೈ ಶ್ರೀರಾಮ್​ ಎಂದು ಕೂಗಿದ ಘಟನೆ ನಡೆದಿದೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಕಾರಣವಾಗಿದೆ

Exit mobile version