Site icon Vistara News

IPL 2023 : ತಿಣುಕಾಡಿ ಮೊದಲ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್​, ಕೆಕೆಆರ್​ ತಂಡಕ್ಕೆ ಹ್ಯಾಟ್ರಿಕ್​ ಸೋಲು

#image_title

ನವದೆಹಲಿ: ಐಪಿಎಲ್​ 16ನೇ ಆವೃತ್ತಿಯಲ್ಲಿ (IPL 2023) ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮೊದಲ ವಿಜಯ ದಾಖಲಿಸಿದೆ. ಗುರುವಾರದ ಡಬಲ್​ ಹೆಡರ್​ನಲ ಎರಡನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್ ವಿರುದ್ಧ 4 ವಿಕೆಟ್​ಗಳಿಂದ ಗೆಲುವು ಸಾಧಿಸಿತು. ಜಿದ್ದಾಜಿದ್ದಿನಿಂದ ಕೂಡಿದ ಈ ಪಂದ್ಯದಲ್ಲಿ ಕೊನೆಗೂ ಗೆಲುವು ಡೆಲ್ಲಿ ತಂಡದ ಪಾಲಾಯಿತು. ಡೇವಿಡ್​ ವಾರ್ನರ್​ (57) ಅವರ ಏಕಾಂಗಿ ಹೋರಾಟದ ನೆರವಿನಿಂದ ತಂಡ ಜಯ ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ಡೇವಿಡ್​ ವಾರ್ನರ್‌ ಮೊದಲ ಗೆಲುವು ಪಡೆದರೆ, ಅತ್ತ ನಿತೀಶ್​ ರಾಣಾ ನೇತೃತ್ವದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಹ್ಯಾಟ್ರಿಕ್​ ಸೋಲಿಗೆ ಒಳಗಾಯಿತು.

ಅರುಣ್​ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್​ ವಾರ್ನರ್​ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ 20 ಓವರ್​ಗಳಲ್ಲಿ 127 ರನ್ ಮಾಡಿ ಆಲ್ಔಟ್​ ಆಯಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆದ ಹೊರತಾಗಿಯೂ ಬಳಿಕ ಸತತವಾಗಿ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಬಿತ್ತು.. ಕೊನೆಯಲ್ಲಿ ಪೇಚಾಡಿ 19.2 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 128 ರನ್​ ಬಾರಿಸಿತು.

ಸಣ್ಣ ಮೊತ್ತವನ್ನು ಬೆನ್ನಟ್ಟಲು ಹೊರಟ ಡೆಲ್ಲಿ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 38 ರನ್​ ಪೇರಿಸಿತು. ಆದರೆ, ಪೃಥ್ವಿ ಶಾ (13) ಮತ್ತೆ ವೈಫಲ್ಯ ಕಂಡರು. ಬಳಿಕ ಆಡಲು ಬಂದ ಮಿಚೆಲ್​ ಮಾರ್ಶ್​ (2), ಫಿಲ್​ ಸಾಲ್ಟ್​​ (5) ಬೇಗ ವಿಕೆಟ್​ ಒಪ್ಪಿಸಿದರು. ಮನೀಶ್​ ಪಾಂಡೆ (21) ರನ್​ ಬಾರಿಸಿದರೂ ಅವರ ಇನಿಂಗ್ಸ್​ನಲ್ಲಿ ಜಿದ್ದು ಇರಲಿಲ್ಲ. ಅಮನ್​ ಖಾನ್​ ಶೂನ್ಯಕ್ಕೆ ಔಟಾಗುವ ಮೂಲಕ ಡೆಲ್ಲಿ ತಂಡ ಮತ್ತೆ ಆತಂಕ್ಕೆ ಬಿತ್ತು. ಕೊನೆಯಲ್ಲಿ ಅಕ್ಷರ್ ಪಟೇಲ್​ (19 ರನ್​ ) ಹಾಗೂ ಲಲಿತ್​ ಯಾದವ್​ (4 ರನ್​​) ತಂಡವನ್ನು ಗೆಲ್ಲಿಸಿದರು.

ಬ್ಯಾಟಿಂಗ್​ ಆರಂಭಿಸಿದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ಆರಂಭ ಉತ್ತಮವಾಗಿರಲಿಲ್ಲ. ಬಾಂಗ್ಲಾದೇಶದ ವಿಕೆಟ್​ಕೀಪರ್ ಬ್ಯಾಟರ್​ (4) ಬೇಗನೆ ವಿಕೆಟ್​ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ನಾಯಕ ನಿತೀಶ್​ ರಾಣಾ ಕೂಡ 4 ರನ್​ಗಳಿಗೆ ಔಟಾದರು. ಹೀಗಾಗಿ ಕೆಕೆಆರ್​ ತಂಡ 50 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು.

ಕೆಕೆಆರ್ ತಂಡದ ಪರ ಜೇಸನ್​ ರಾಯ್​ (43) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರು ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಕೊನೇ ಹಂತದಲ್ಲಿ ಆ್ಯಂಡ್ರೆ ರಸೆಲ್​ 4 ಸಿಕ್ಸರ್ ಹಾಗೂ 1 ಫೋರ್ ನೆರವಿನಿಂದ ಅಜೇಯ 38 ರನ್​ ಬಾರಿಸಿದರು.

ಆ ಬಳಿಕ ಪಾರಮ್ಯ ಸಾಧಿಸಿದ ಡೆಲ್ಲಿ ಬೌಲರ್​ಗಳು ಸತತವಾಗಿ ಎದುರಾಳಿ ತಂಡದ ವಿಕೆಟ್​ಗಳನ್ನು ಉರುಳಿಸಿದರು. ಮನ್​ದೀಪ್ ಸಿಂಗ್​ (12), ರಿಂಕು ಸಿಂಗ್​ (6), ಸುನೀಲ್​ ನರೈನ್​ (4), ಅಂಕುಲ್ ರಾಯ್​ (0), ಉಮೇಶ್​ ಯಾದವ್​ (3) ಬೇಗನೆ ಪೆವಿಲಿಯನ್​ಗೆ ಮರಳಿದರು.

96 ರನ್​ಗಳಿಗೆ 9 ವಿಕೆಟ್​ ಕಳೆದುಕೊಂಡಿದ್ದ ಕೆಕೆಆರ್​ ತಂಡ ಕೊನೇ ವಿಕೆಟ್​​ಗೆ 31 ರನ್ ಬಾರಿಸಿತು.

ಒಂದು ಗಂಟೆ ತಡವಾಗಿ ಪಂದ್ಯ ಆರಂಭ

ಡೆಲ್ಲಿಯಲ್ಲಿ ಗುರುವಾರ ಸಂಜೆ ಅಕಾಲಿಕ ಮಳೆಯಾಯಿತು. ಹೀಗಾಗಿ ಪಂದ್ಯ ಆರಂಭಕ್ಕೆ ಅಡಚಣೆ ಉಂಟಾಯಿತು. 7 ಗಂಟೆಗೆ ನಡೆಯಬೇಕಾಗಿದ್ದ ಟಾಸ್​ 8.15ಕ್ಕೆ ನಡೆಯಿತು. ಪಂದ್ಯ 8.30ಕ್ಕೆ ಆರಂಭಗೊಂಡಿತು. ಈ ಮೂಲಕ ಒಂದು ಗಂಟೆ ತಡವಾಗಿ ಪಂದ್ಯ ಆರಂಭಗೊಂಡಿತು.

Exit mobile version