Site icon Vistara News

IPL 2023 : ದಿನೇಶ್ ಕಾರ್ತಿಕ್​ಗೆ ಅನಾರೋಗ್ಯ; ಆರ್​ಸಿಬಿ ಬ್ಯಾಟಿಂಗ್​ ಕೋಚ್​ ಮಾಹಿತಿ

Dinesh Karthik is unwell; RCB batting coach details

#image_title

ಮುಂಬಯಿ: ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮಂಗಳವಾರ ನಡದ ಮುಂಬೈ ಇಂಡಿಯನ್ಸ್ (IPL 2023) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರು ವಿಕೆಟ್​ಗಳಿಂದ ಸೋಲು ಅನುಭವಿಸಿತ್ತು. ಪಂದ್ಯದಲ್ಲಿ ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್ ಬ್ಯಾಟಿಂಗ್​ ಮಡಿ 18 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸೇರಿದಂತೆ 30 ರನ್ ಗಳಿಸಿದ್ದರು. ಆದರೆ ವಿಕೆಟ್​ ಕೀಪಿಂಗ್​ಗೆ ಬಂದಿರಲಿಲ್ಲ. ಅದಕ್ಕೆ ಕಾರಣ ಏನು ಎಂದು ಆರ್​ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್ ಮಾಹಿತಿ ಕೊಟ್ಟಿದ್ದಾರೆ. ದಿನೇಶ್ ಕಾರ್ತಿಕ್ ಅವರಿಗೆ ಫಿಟ್ನೆಸ್​ ಸಮಸ್ಯೆ ಇದೆ ಎಂಬುದಾಗಿ ಅವರು ಹೇಳಿದ್ದಾರೆ. ಆರ್​​ಸಿಬಿ ಪರ ಬ್ಯಾಟಿಂಗ್​ನಲ್ಲಿ ಎಡವಿರುವ ದಿನೇಶ್​ ಕಾರ್ತಿಕ್​ ಈ ಮುಂಬಯಿ ವಿರುದ್ಧ ಫಾರ್ಮ್ ಕಂಡುಕೊಂಡಿದ್ದರು. ಆದರೆ, ಫಿಟ್ನೆಸ್​ ಕಳೆದುಕೊಂಡಿದ್ದಾರೆ/

ಅನುಭವಿ ವಿಕೆಟ್ ಕೀಪರ್ ಬ್ಯಾಟರ್​ ಮೊದಲ ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಔಟಾದ ನಂತರ ಪೆವಿಲಿಯನ್​ಗೆ ಹೋಗುವ ಹಾದಿಯಲ್ಲಿ ಬಳಲಿದಂತೆ ಕಂಡು ಬಂದರು. ಬಳಿಕ ಅವರು ಆಟಕ್ಕೆ ಇಳಿಯಲಿಲ್ಲ. ಅನುಜ್​ ರಾವತ್ ವಿಕೆಟ್​ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡರು.

ಕಾರ್ತಿಕ್ ಪೆವಿಲಿಯನ್​ಗೆ ಹಿಂದಿರುಗುವಾಗ ನಿರ್ಜಲೀಕರಣಕ್ಕೊಳಗಾಗಿದ್ದರು. ಹೀಗಾಗಿ ವಾಂತಿ ಮಾಡಿದ್ದರು ಎಂದು ಆರ್​ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ಆಟಗಳ ನಡುವೆ ಸಾಕಷ್ಟು ಸಮಯವಿದೆ ಮತ್ತು ಅವರು ಸಮಯಕ್ಕೆ ಸರಿಯಾಗಿ ಫಿಟ್ ಆಗಿರಬೇಕು ಎಂದು ತರಬೇತುದಾರ ಹೇಳಿದ್ದಾರೆ. ಅಲ್ಲದೆ, ದಿನೇಶ್​ ಕಾರ್ತಿಕ್​ ನಮ್ಮ ತಂಡದ ಪ್ರಮುಖ ಸದಸ್ಯ ಎಂಬುದಾಗಿ ಹೇಳಿಕೊಂಡಿದ್ದಾರೆ.

ಇನ್ನಿಂಗ್ಸ್​ ಸಮಯದಲ್ಲಿ, ದಿನೇಶ್ ಕಾರ್ತಿಕ್ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರು, ಅವರು ಸ್ವಲ್ಪ ನಿರ್ಜಲೀಕರಣಕ್ಕೆ ಒಳಗಾಗಿದ್ದರು ಮತ್ತು ಹಿಂದಿರುಗುವಾಗ ಅವರು ವಾಂತಿ ಮಾಡಿಕೊಂಡರು. ಮುಂದಿನ ಪಂದ್ಯಕ್ಕೆ ಸಾಕಷ್ಟು ಸಮಯವಿದೆ. ಅಷ್ಟರಲ್ಲಿ ಅವರು ಸುಧಾರಿಸಿಕೊಳ್ಳಲಿದ್ದಾರೆ. ಅವರು ನಮ್ಮ ತಂಡದ ಪ್ರಮುಖ ಸದಸ್ಯರಾಗಿದ್ದಾರೆ ಎಂದು ಸಂಜಯ್​ ಬಂಗಾರ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬ್ಯಾಟಿಂಗ್ ವೈಫಲ್ಯ ಒಪ್ಪಿಕೊಂಡ ಬಂಗಾರ್​

ಆರ್ಸಿಬಿಯ ಯುವ ಭಾರತೀಯ ಬ್ಯಾಟ್ಸ್​ಮನ್​ಗಳಾದ ಅನುಜ್ ರಾವತ್ ಮತ್ತು ಶಹಬಾಜ್ ಅಹ್ಮದ್ ಬ್ಯಾಟಿಂಗ್​ನಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ಬಂಗಾರ್​ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಅವರು ಮಹಿಪಾಲ್ ಲಾಮ್ರೊರ್ ತಮ್ಮ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿದ್ದಾರೆ ಎಂದು 50 ವರ್ಷದ ಮಾಜಿ ಆಟಗಾರ ಹೇಳಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ಉದಯೋನ್ಮುಖ ಬ್ಯಾಟರ್​ ರಿಂಕು ಸಿಂಗ್ ಅವರ ಉದಾಹರಣೆಯನ್ನು ಉಲ್ಲೇಖಿಸಿ ಯುವ ಆಟಗಾರರೊಂದಿಗೆ ತಾಳ್ಮೆಯಿಂದಿರಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ ವ: IPL 2023 : ಕೊಹ್ಲಿ ಔಟಾಗುತ್ತಿದ್ದಂತೆ ಮಾವಿನ ಹಣ್ಣು ತಿಂದು ಸಂಭ್ರಮಿಸಿದ ಎಲ್​ಎಸ್​​ಜಿ ಬೌಲರ್​ ನವಿನ್​ ಉಲ್​ ಹಕ್​

“ನಮ್ಮ ಯುವ ಬ್ಯಾಟರ್​ಗಳಿಂದ ಉತ್ತಮ ಮೊತ್ತ ಮೂಡಿ ಬರುತ್ತಿಲ್ಲ. ಆದರೆ ಲಾಮ್ರೋರ್ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಯುವ ಆಟಗಾರರು ಹಚ್ಚು ತಾಳ್ಮೆಯಿಂದ ಇರಬೇಕು ಹಾಗೂ ಅವಕಾಶಕ್ಕಾಗಿ ಕಾಯಬೇಕು ಎಂದು ಹೇಳಿದರು.

Exit mobile version