Site icon Vistara News

Rohit Sharma : ಪಂದ್ಯದ ಬಳಿಕ ಏಕಾಂಗಿಯಾಗಿ ಡಗ್ಔಟ್ ಕಡೆಗೆ ನಡೆದ ರೋಹಿತ್ ಶರ್ಮಾ!

Rohit Sharma

ಮುಂಬಯಿ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ರ (IPL 2024) ಮುಂಬೈ ಇಂಡಿಯನ್ಸ್ ಮತ್ತು ಸಿಎಸ್​ಕೆ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಹಿತ್ ಶರ್ಮಾ (Rohit Sharma) ಅವರ ಅದ್ಭುತ ಶತಕದ ಹೊರತಾಗಿಯೂ ಮುಂಬೈ ಇಂಡಿಯನ್ಸ್ (Mumbai Indians) ಭಾರಿ ಹಿನ್ನಡೆ ಅನುಭವಿಸಿದೆ. ರೋಹಿತ್ ಶರ್ಮಾ 63 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದ್ದರೂ ಅವರ ಎರಡನೇ ಐಪಿಎಲ್ ಶತಕದ ಹೊರತಾಗಿಯೂ, ಮುಂಬೈ ಇಂಡಿಯನ್ಸ್ 20 ನರ್​ಗಳ ಸೋಲಿಗೆ ಶರಣಾಯಿತು.

ಜಿದ್ದಾಜಿದ್ದಿನ ಪಂದ್ಯದ ನಂತರ, ರೋಹಿತ್ ಶರ್ಮಾ ನಿರಾಶೆಯಿಂದ ತಲೆ ತಗ್ಗಿಸಿ ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತು. ಅವರು ಮೈದಾನದಲ್ಲಿದ್ದ ಹಾಗೂ ಡಗ್​ಔಟ್​ನಲ್ಲಿದ್ದ ಇತರ ಆಟಗಾರರಿಗೆ ಶೇಕ್​ ಹ್ಯಾಂಡ್​ ಕೂಡ ಮಾಡಲಿಲ್ಲ. ಏಕೆಂದರೆ ಮುಂಬೈ ಇಂಡಿಯನ್ಸ್​​ ಪ್ಲೇಆಫ್ ಭರವಸೆಗಳು ಈ ಸೋಲಿನಿಂದ ಕ್ಷೀಣಿಸಿದವು. ರೋಹಿತ್ ಅವರ ಅಸಾಧಾರಣ ಪ್ರದರ್ಶನದ ಹೊರತಾಗಿಯೂ, ಮುಂಬೈನ ಮಧ್ಯಮ ಕ್ರಮಾಂಕವು ಅಗತ್ಯವಾದ ಬೆಂಬಲ ನೀಡಲು ವಿಫಲವಾಯಿತು. ಇದು ಅವರ ಹೋರಾಟಕ್ಕೆ ಹಿನ್ನಡೆಯಾಯಿತು.

ಇಂಡಿಯನ್ಸ್ ಗೆ 4ನೇ ಸೋಲು

ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ವಿಶೇಷವಾಗಿ ವಾಂಖೆಡೆ ಕ್ರೀಡಾಂಗಣದಲ್ಲಿ ಅನುಕೂಲಕರ ಬ್ಯಾಟಿಂಗ್ ಪರಿಸ್ಥಿತಿಗಳೊಂದಿಗೆ 207 ರನ್ಗಳ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡರು. ಭರವಸೆಯ ಆರಂಭ ಮತ್ತು ರೋಹಿತ್ ಅವರ ಧೈರ್ಯಶಾಲಿ ನಿಲುವಿನ ಹೊರತಾಗಿಯೂ, ಮುಂಬೈ ಇಂಡಿಯನ್ಸ್ ಗೆಲುವಿನ ಅನ್ವೇಷಣೆಯಲ್ಲಿ ಎಡವಿತು ಎಂದು ಹೇಳಿದರು.

ಇದನ್ನೂ ಓದಿ: MS Dhoni : ವಿರಾಟ್ ಕೊಹ್ಲಿಯಂತೆ ಐಪಿಎಲ್​ನಲ್ಲಿ ವಿಶೇಷ ಸಾಧನೆ ಮಾಡಿದ ಮಹೇಂದ್ರ ಸಿಂಗ್​ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ಪರ ಮಥೀಶಾ ಪಥಿರಾನಾ ತಮ್ಮ ಪಾಲಿನ ನಾಲ್ಕು ಓವರ್​ಗಳಲ್ಲಿ ಕೇವಲ 28 ರನ್ ನೀಡಿ ನಾಲ್ಕು ನಿರ್ಣಾಯಕ ವಿಕೆಟ್​ಗಳನ್ನು ಪಡೆದರು. ಅವರ ಅಸಾಧಾರಣ ಬೌಲಿಂಗ್ ಪ್ರದರ್ಶನ, ಚೆನ್ನೈನ ಕಾರ್ಯತಂತ್ರದ ಪರಾಕ್ರಮವಾಗಿತ್ತು. ಈ ಬೌಲಿಂಗ್ ಅಂಕಿ ಅಂಶ ಚೆನ್ನ ತಂಡಕ್ಕೆ ಗೆಲುವು ತಂದುಕೊಡಲು ನಿರ್ಣಾಯಕ ಎನಿಸಿತು.

ಜಗಳವಾಡಿದ ಮುಂಬೈ ಕೋಚ್​ ಕೀರನ್​ ಪೊಲಾರ್ಡ್​​

ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್​​ 2024ರ (IPL 2024) ಪಂದ್ಯದ ವೇಳೆ ತಮ್ಮ ನಿಯಂತ್ರಣ ಕಳೆದುಕೊಂಡು ಪಂದ್ಯದ ಅಧಿಕಾರಿಗಳ ಜತೆ ಜಗಳವಾಡಿದ್ದಾರೆ. ಈ ಪಂದ್ಯದಲ್ಲಿ ಮುಂಬಯಿ ತಂಡ ಸೋತಿದ್ದು ಈ ಹತಾಶೆಯಲ್ಲಿ ಅವರು ಜಗಳವಾಡಿದ್ದಾರೆ. ಡಿಆರ್​ಎಸ್​​ ವಿಮರ್ಶೆಯು ಆತಿಥೇಯರಿಗೆ ಅವಕಾಶ ಮಾಡಿಕೊಡದ ಕಾರಣ ವೆಸ್ಟ್ ಇಂಡೀಸ್​ನ ಮಾಜಿ ಆಲ್ರೌಂಡರ್ ಪಂದ್ಯದ ಅಧಿಕಾರಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ.

207 ರನ್​ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್​ಗೆ ಉತ್ತಮ ಆರಂಭ ಸಿಕ್ಕಿತು. ಈ ವೇಳೆ ವೈಡ್​ ಎಸೆತವೊಂದರ ಪರಿಶೀಲನೆಗೆ ಮುಂಬೈ ತಂಡ ಡಿಆರ್​ಎಸ್​ ತೆಗೆದುಕೊಂಡಿತು. ಫಲಿತಾಂಶ ಮುಂಬೈಗೆ ಪೂರಕವಾಗಿ ಬರಲಿಲ್ಲ. ಇದರಿಂದ ಕೋಪಗೊಂಡ ಪೊಲಾರ್ಡ್ ಪಂದ್ಯದ ಅಧಿಕಾರಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ನಾಯಕ ಹಾರ್ದಿಕ್ ಪಾಂಡ್ಯ ಬೇಗ ಔಟಾದ ಕಾರಣ ಮುಂಬಯಿ ತಂಡ ಸೋಲುವಂತಾಗಿತು. ಇದರಿಂದಿ ಬೃಹತ್ ಗುರಿಯನ್ನು ಬೆನ್ನಟ್ಟುವ ತಂಡದ ಯೋಜನೆಗೆ ದೊಡ್ಡ ಹೊಡೆತ ನೀಡಿತು.

Exit mobile version