Site icon Vistara News

IPL 2023 : ಪ್ಲೇಆಫ್​ಗೆ ಪ್ರವೇಶಿಸಲಿರುವ ತಂಡವನ್ನು ಹೆಸರಿಸಿದ ಹರ್ಭಜನ್​ ಸಿಂಗ್​, ಆರ್​ಸಿಬಿ ಇದೆಯೇ?

Harbhajan Singh, who named the team that will make it to the playoffs, said, "Is THERE RCB?

ಬೆಂಗಳೂರು: ಐಪಿಎಲ್​ 16ನೇ ಆವೃತ್ತಿಯ ಟೂರ್ನಿ ಮೊದಲಾರ್ಧವನ್ನು ಮುಗಿಸಿ ದ್ವಿತೀಯ ಚರಣದ ಪಂದ್ಯಗಳು ನಡೆಯುತ್ತಿವೆ. ಹೀಗಾಗಿ ಇನ್ನು ಪ್ಲೇ ಆಫ್​ ಹಂತಕ್ಕೇರಲು ತಂಡಗಳ ನಡುವೆ ಪೈಪೋಟಿ ಆರಂಭಗೊಂಡಿದೆ. ಅಭಿಮಾನಿಗಳು ಕೂಡ ಯಾರು ಪ್ಲೇಆಫ್​ಗೆ ಪ್ರವೇಶ ಮಾಡಬಹುದು ಎಂದೆಲ್ಲ ಲೆಕ್ಕಾಚಾರ ಆರಂಭಿಸಿದ್ದಾರೆ. ಐಪಿಎಲ್ ಅಂಕಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಗುಜರಾತ್​ ಟೈಟನ್ಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಏತನ್ಮಧ್ಯೆ ಭಾರತ ತಂಡದ ಮಾಜಿ ಸ್ಪಿನ್ನರ್ ಹಾಗೂ ಹಾಲಿ ಕ್ರಿಕೆಟ್​ ವಿಶ್ಲೇಷಕ ಹರ್ಭಜನ್​ ಸಿಂಗ್ ಪ್ಲೇಆಫ್ ಹಂತಕ್ಕೇರಲಿರುವ ತಂಡಗಳು ಯಾವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಟಾರ್ ಸ್ಪೋಟ್ಸ್​​ನ #AskStar ವಿಭಾಗದದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹರ್ಭಜನ್​ ಸಿಂಗ್​, ಗುಜರಾತ್, ಚೆನ್ನೈ, ಮುಂಬೈ ಮತ್ತು ಬೆಂಗಳೂರು ಪ್ಲೇ ಆಫ್​ ಪ್ರವೇಶ ಪಡೆಯಲಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಬೆಂಗಳೂರು ಹಾಗೂ ಮುಂಬೈ ಪ್ರಸ್ತುತ ರೇಸ್​​ನಲ್ಲಿ ಹಿಂದುಳಿದರು ಮುಂದೆ ಪ್ಲೇಆಫ್​ಗೆ ಪ್ರವೇಶ ಪಡೆಯುವುದು ಖಾತರಿ ಎಂದು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಲಾ ಒಂಬತ್ತು ಪಂದ್ಯಗಳ ನಂತರ ತಲಾ ಹತ್ತು ಅಂಕಗಳನ್ನು ಹೊಂದಿದೆ. ಈ ಮೂರು ತಂಡಗಳು

ಇದು ದು ಉತ್ತರಿಸಲು ತುಂಬಾ ಕಷ್ಟಕರವಾದ ಪ್ರಶ್ನೆ. ಆದರೆ ಗುಜರಾತ್ ಟೈಟನ್ಸ್​ ತಂಡ ಖಂಡಿತವಾಗಿಯೂ ಅರ್ಹತೆ ಪಡೆಯುವ ತಂಡಗಳಲ್ಲಿ ಒಂದಾಗುತ್ತದೆ ಎಂದು ನಾನು ಹೇಳಬಲ್ಲೆ. ಚೆನ್ನೈ ಸೂಪರ್ ಕಿಂಗ್ಸ್ ಆಯ್ಕೆಯೂ ಖಾತರಿ. ಮುಂಬೈ ಇಂಡಿಯನ್ಸ್ ಅರ್ಹತೆ ಪಡೆಯಲಿರುವ ಮೂರನೇ ತಂಡವಾಗಲಿದೆ. ಈ ತಂಡ ಪ್ರಸ್ತುತ ರೇಸ್​ನಲ್ಲಿ ಹಿಂದುಳಿದಿದೆ ಎಂದು ನೀವು ಹೇಳಬಹುದು. ಆದರೂ ಅವರಿಗೆ ಅರ್ಹತೆ ಪಡೆಯುವ ಹೆಚ್ಚು ಅವಕಾಶಗಳಿವೆ. ಕೊನೆಯದಾಗಿ, ಆರ್​ಸಿಬಿ ತಂಡ ನಾಲ್ಕನೇ ಸ್ಥಾನ ಪಡೆಯಲಿದೆ ಎಂದು ಹರ್ಭಜನ್​ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿವ: Virat Kohli : ಮೈದಾನದಲ್ಲೇ ಗುರ್​ ಎಂದ ಗಂಭೀರ್​, ಘರ್ಜಿಸಿದ ವಿರಾಟ್​ ಕೊಹ್ಲಿ!

“ಆರ್​ಆರ್​ ತಂಡ ರೇಸ್​ನಲ್ಲಿದೆ ನಿಜ. ಆದರೆ, ಕೊನೆಯಲ್ಲಿ ಯಾರಾದರೂ ತಂಡದ ಅವರನ್ನು ಹಿಂದಿಕ್ಕುತ್ತದೆ. ಬಯಿ ಇಂಡಿಯನ್ಸ್​ ಆ ತಂಡವನ್ನು ಹಿಂದಿಕ್ಕುತ್ತದೆ ಎಂದು ನಾನು ನಂಬುತ್ತೇನೆ ಎಂದು 42 ವರ್ಷದ ಆಟಗಾರ ಹೇಳಿದ್ದಾರೆ.

ಹರ್ಭಜನ್ ಸಿಂಗ್ ಅವರ ಆಯ್ಕೆಯ ಬಗ್ಗೆ ಮತ್ತೊಬ್ಬ ವೀಕ್ಷಕ ವಿವರಣೆಗಾರ ದೀಪ್​ದಾಸ್​ ಗುಪ್ತಾ ತಮಾಷೆ ಮಾಡಿದರು. ಸಿಎಸ್​ಕೆ ತಂಡದಲ್ಲಿ ಈ ಹಿಂದೆ ಅವರು ಆಡಿದ್ದಾರೆ. ಇತರ ಎರಡು ಪಂದ್ಯಗಳಲ್ಲಿ ಸ್ನೇಹಿತರಿದ್ದಾರೆ. ಅದಕ್ಕಾಗಿ ಪ್ಲೇಆಫ್​ಗೆ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಹರ್ಭಜನ್​ ಸಿಂಗ್​, ಇದು ಸ್ನೇಹದ ಮಾತಲ್ಲ. ರಾಜಸ್ಥಾನ್​ ರಾಯಲ್ಸ್​ ಉತ್ತಮ ತಂಡ. ಚೆನ್ನಾಗಿಯೂ ಆಡುತ್ತಿದ್ದಾರೆ. ಆದರೆ ಗುಜರಾತ್​ ಎಲ್ಲದಕ್ಕಿಂತಲೂ ಒಂದು ಹೆಜ್ಜೆ ಮುಂದಿದೆ. ಚೆನ್ನೈ ಯಾವಾಗಲೂ ಅರ್ಹತೆ ಪಡೆಯುವ ತಂಡ ಎಂದು ಹರ್ಭಜನ್​ ಸಿಂಗ್ ಹೇಳಿದರು.

Exit mobile version