Site icon Vistara News

Dhoni vs Jadeja: ಧೋನಿ ಅಭಿಮಾನಿಗಳಿಂದ ಜಡೇಜಾಗೆ ಬೇಸರವಾಗಿದ್ದು ನಿಜ; ಸಿಇಓ ವಿಶ್ವನಾಥನ್

Dhoni vs Jadeja

ಚೆನ್ನೈ: ಈ ಬಾರಿಯ ಐಪಿಎಲ್​ನಲ್ಲಿ(IPL 2023) ರವೀಂದ್ರ ಜಡೇಜಾಗೆ ಧೋನಿ(Dhoni vs Jadeja) ಅಭಿಮಾನಿಗಳಿಂದ ನೋವಾಗಿರುವು ನಿಜ. ಆದರೆ ಉಭಯ ಆಟಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸಿಇಒ ಕಾಶಿ ವಿಶ್ವನಾಥನ್(CSK CEO Kasi Viswanathan) ಹೇಳಿದ್ದಾರೆ.

ಗುಜರಾತ್‌ ಟೈಟನ್ಸ್ ವಿರುದ್ಧ ಮೊದಲನೇ ಕ್ವಾಲಿಫೈಯರ್‌ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ್ದ ರವೀಂದ್ರ ಜಡೇಜಾ ಅವರು, ತಾನು ಬ್ಯಾಟಿಂಗ್​ಗೆ ಆಗಮಿಸುವ ವೇಳೆ ಧೋನಿ ಅಭಿಮಾನಿಗಳು ಬೇಗನೇ ಔಟ್​ ಆಗುವಂತೆ ಹಿಡಿ ಶಾಪ ಹಾಕುತ್ತಾರೆ ಎಂದು ಹೇಳಿದ್ದರು. ಜಡೇಜಾ ಅವರ ಈ ಹೇಳಿಕೆ ಭಾರಿ ಚರ್ಚೆಗೂ ಕಾರಣವಾಗಿತ್ತು, ಜತೆಗೆ ಧೋನಿ ಮತ್ತು ಜಡೇಜಾ ಮಧ್ಯೆ ಎಲ್ಲವೂ ಸರಿಯಿಲ್ಲ ಉಭಯ ಆಟಗಾರರು ನಾಯಕತ್ವದ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ ಎಂಬ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಫೈನಲ್​ನಲ್ಲಿ ಜಡೇಜಾ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವು ದಾಖಲಿಸಿದ ಬಳಿಕ ಧೋನಿ ಅವರು ಜಡೇಜಾರನ್ನು ಭಜದ ಮೇಲೆ ಎತ್ತಿಕೊಂಡು ಸಂಭ್ರಮಿಸಿದ್ದರು. ಈ ಘಟನೆ ಬಳಿಕ ಧೋನಿ ಮತ್ತು ಜಡೇಜಾ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿತ್ತು.

ಇದನ್ನೂ ಓದಿ MS Dhoni: ಧೋನಿ ವಿಕೆಟ್​ ಕೀಪರ್​ ಆದ ಹಿಂದಿದೆ ಒಂದು ರೋಚಕ ಸ್ಟೋರಿ

ಇದೇ ವಿಚಾರವಾಗಿ ಮಾತನಾಡಿರುವ ತಂಡದ ಸಿಇಒ ವಿಶ್ವನಾಥ್​ ಅವರು, “ಜಡೇಜಾ ಅತ್ಯುತ್ತಮ ಆಟಗಾರ ಬ್ಯಾಟಿಂಗ್‌ಗೆ ತೆರಳಿದಾಗ ಅಭಿಮಾನಿಗಳು ಯಾವುದೇ ಆಟಗಾರನ ಗೆಸರನ್ನು ಕೂಗಿದರೂ ಸಹಜವಾಗಯೇ ಅವರ ಮನಸ್ಸಿಗೆ ನೋವಾಗುತ್ತದೆ. ಆದರೆ ಧೋನಿ ಮತ್ತು ಜಡೇಜಾ ಸಂಬಂಧ ಉತ್ತಮವಾಗಿಯೇ ಇದೆ” ಎಂದು ಹೇಳಿದ್ದಾರೆ.

“ತಂಡದ ವಾತಾವರಣ ಹೇಗಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಇದರಲ್ಲಿ ಯಾವುದೇ ಗೌಪ್ಯತೆ ಇಲ್ಲ. ನಮ್ಮ ತಮಡದಲ್ಲಿ ಯಾವುದೇ ಸಮಸ್ಯೆಯೂ ಇಲ್ಲ. ಎಲ್ಲ ಆಟಗಾರರು ಉತ್ತಮ ಭಾಂದವ್ಯ ಹೊಂದಿದ್ದಾರೆ. ಧೋನಿ ಬಗ್ಗೆ ಜಡೇಜಾಗೆ ಅಪಾರವಾದ ಗೌರವವಿದೆ” ಎಂದು ಹೇಳಿದರು.

Exit mobile version