Site icon Vistara News

IND vs AUS Final: ಭಾರತದ ಸೋಲಿಗೆ, ಆಸೀಸ್ ಗೆಲುವಿಗೆ 5 ಪ್ರಮುಖ ಕಾರಣಗಳು ಇಲ್ಲಿವೆ​

Glenn Maxwell gets a jersey from Virat Kohli after the final

ಅಹಮದಾಬಾದ್​: ಕಳೆದ 3 ವಿಶ್ವಕಪ್‌ ಟೂರ್ನಿಯಲ್ಲಿ ಆತಿಥ್ಯ ವಹಿಸಿದ ರಾಷ್ಟ್ರಗಳೇ ಚಾಂಪಿಯನ್‌ ಆಗಿ ಮರೆದಾಡಿದ್ದವು. ಈ ಲೆಕ್ಕಾಚಾರದಲ್ಲಿ ಮತ್ತು ಭಾರತ ತಂಡ ಲೀಗ್​ನಿಂದ ಸೆಮಿಫೈನಲ್​ ತನಕ ತೋರಿದ ಪ್ರದರ್ಶನವನ್ನು ಕಂಡಾಗ ಈ ಸಲ ಕಪ್​ ನಮ್ದೇ ಎಂಬ ನಂಬಿಕೆ ಭಾರತೀಯ ಅಭಿಮಾನಿಗಳಲ್ಲಿತ್ತು. ಆದರೆ ಫೈನಲ್​ ಪಂದ್ಯದಲ್ಲಿ(IND vs AUS Final) ಭಾರತದ ಕನಸಿಗೆ ಆಸ್ಟ್ರೇಲಿಯಾ ಕೊಳ್ಳಿ ಇಟ್ಟಿತು. 6 ವಿಕೆಟ್​ಗಳಿಂದ ಗೆದ್ದು ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿತು. ಭಾರತ ಸೋಲಿಗೆ 5 ಪ್ರಮುಖ ಕಾರಣ ಎನೆಂಬುದುವು ಈ ವರದಿಯಲ್ಲಿ ವಿವರಿಸಲಾಗಿದೆ.

ಭಾರತ ತಂಡದ ಸೋಲಿಗೆ 5 ಪ್ರಮುಖ ಕಾರಣ

1. ಆರಂಭಿಕ ವಿಕೆಟ್​ ಬಿದ್ದಾಗ ಒತ್ತಡಕ್ಕೆ ಸಿಲುಕಿ ಆ ಬಳಿಕ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ್ದು ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆಯಾಯಿತು. ಹೀಗಾಗಿ ದೊಡ್ಡ ಮೊತ್ತ ದಾಖಲಾಗಲಿಲ್ಲ. ಗಿಲ್​, ಅಯ್ಯರ್​, ಸೂರ್ಯಕುಮಾರ್​ ಮತ್ತು ಜಡೇಜಾ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ವಿಫಲವಾದದ್ದು.

2. ಅನುಭವಿ ಸ್ಪಿನ್​ ಬೌಲರ್​ ಆರ್​. ಅಶ್ವಿನ್​ ಅವರನ್ನು ಬೆಂಚ್​ ಕಾಯಿಸಿದ್ದು. ಅಶ್ನಿನ್​ ಇದೇ ಮೈದಾನದಲ್ಲಿ ಹಲವು ಟೆಸ್ಟ್​ ಪಂದ್ಯಗಳನ್ನು ಆಡಿದ ಅನುಭವ ಮತ್ತು ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. ಅವರಿಗೆ ಈ ಪಿಚ್​ ಸಂಪೂರ್ಣ ನೆರವು ನೀಡುತ್ತಿತ್ತು. ಆದರೆ ಅವರಿಗೆ ಅವಕಾಶ ನೀಡಲಿಲ್ಲ. ಅಲ್ಲದೆ ಬ್ಯಾಟಿಂಗ್​ ಆಲ್​ರೌಂಡರ್​ ಕೂಡ ಆಗಿದ್ದ ಅವರು ತಂಡದಲ್ಲಿರುತ್ತಿದ್ದರೆ ಬ್ಯಾಟಿಂಗ್​ಗೆ ಕೂಡ ನೆರವಾಗುತ್ತಿದ್ದರು.

3. ಆರಂಭಿಕ ಹಂತದಲ್ಲಿ ಬೌಲರ್​ಗಳು ಉತ್ತಮ ಹಿಡಿತ ಸಾಧಿಸಿದರೂ ಆ ಬಳಿಕ ಲಯ ಕಳೆದುಕೊಂಡದ್ದು. ಇನ್ನೊಂದು ದೊಡ್ಡ ಎಡವಟ್ಟೆಂದರೆ, ಮೊಹಮ್ಮದ್​ ಸಿರಾಜ್​ ಅವರಿಗೆ 15 ಓವರ್​ ಬಳಿಕ ಬೌಲಿಂಗ್​ ನೀಡಿದ್ದು. ಸಿರಾಜ್​ ಹೊಸ ಚೆಂಡಿನಲ್ಲಿ ವಿಕೆಟ್​ ಟೇಕರ್​ ಎನ್ನುವುದನ್ನು ತಿಳಿದಿದ್ದರೂ ಕೂಡ ಹೊಸ ಪ್ರಯೋಗ ನಡೆಸಿದ್ದು ಕೂಡ ಹಿನ್ನಡೆಯಾಗಿ ಪರಿಣಮಿಸಿತು. ಕೈ ಕೊಟ್ಟ ಸ್ಪಿನ್​ ವಿಭಾಗ.

ಇದನ್ನೂ ಓದಿ Virat Kohli: ಡ್ರೆಸ್ಸಿಂಗ್​ ರೂಮ್​ನಲ್ಲಿ ಬೇಸರದಿಂದ ಕುಳಿತ ಕೊಹ್ಲಿಯ ಫೋಟೊ ವೈರಲ್​

4. ಕಳೆದ 10 ಪಂದ್ಯಗಳಲ್ಲಿ ಉತ್ಕೃಷ್ಟ ಮಟ್ಟದ ಬ್ಯಾಟಿಂಗ್​ ತೋರ್ಪಡಿಸಿದ್ದ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಈ ಪಂದ್ಯದಲ್ಲಿ ಕೈಕೊಟ್ಟದ್ದು. ಶುಭಮನ್​ ಗಿಲ್​, ಶ್ರೇಯಸ್​ ಅಯ್ಯರ್​ ವಿಚಲಿತರಾಗಿ ಬ್ಯಾಟ್​ ಬೀಸಿದ್ದು. ರಾಹುಲ್​ ಮತ್ತು ಕೊಹ್ಲಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗದೇ ಇದ್ದದೂ ಕೂಡ ಪ್ರಮುಖ ಕಾರಣ.

5. ಹಾರ್ದಿಕ್​ ಪಾಂಡ್ಯ ಅವರ ಅಲಭ್ಯತೆ. ಹಾರ್ದಿಕ್​ ಪಾಂಡ್ಯ ಅವರು ಟೂರ್ನಿಯ ಮಧ್ಯೆ ಗಾಯಗೊಂಡು ಹೊರಬಿದ್ದದ್ದು ಕೂಡ ಫೈನಲ್​ ಪಂದ್ಯದ ಹಿನ್ನಡೆಯಲ್ಲಿ ಒಂದು ಕಾರಣವಾಗಿದೆ. ಅವರು ಇರುತ್ತಿದ್ದರೆ ಹೆಚ್ಚುವರಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಸಿಗುತ್ತಿತ್ತು. ಅಲ್ಲದೆ ಅವರು ಸ್ಲೋ ಬೌಲಿಂಗ್​ ಮೂಲಕ ವಿಕೆಟ್​ ಕೀಳುದರಲ್ಲಿ ಎತ್ತಿದ ಕೈ. ಇನ್ನೊಂದು ಕಾರಣವೆಂದರೆ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಸಿಕ್ಕಿದ್ದು. ಚೇಸಿಂಗ್​ ವೇಳೆ ಇಬ್ಬನಿ ಸಮಸ್ಯೆ ಇದ್ದ ಕಾರಣ ಬೌಲರ್​ಗಳು ಹಿಡಿತ ತಪ್ಪಿದರು.

ಇದನ್ನೂ ಓದಿ ‘ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ’; ಸೋಲಿಗೆ ಕಾರಣ ತಿಳಿಸಿದ ರೋಹಿತ್​

ಆಸ್ಟ್ರೇಲಿಯಾ ತಂಡದ ಗೆಲುವಿಗೆ ಪ್ರಮುಖ 5 ಕಾರ

1. ಟಾಸ್​ ಗೆದ್ದದ್ದು ಆಸೀಸ್​ ತಂಡದ ಗೆಲುವಿಗೆ ಮೊದಲ ಕಾರಣ. ಇಲ್ಲಿ ಇಬ್ಬನಿ ಕಾಟ ಇರಲಿದೆ ಎನ್ನುವುದು ಮೊದಲ ತಿಳಿದಿತ್ತು. ಹೀಗಾಗಿ ಟಾಸ್​ ಗೆದ್ದ ತಂಡ ಚೇಸಿಂಗ್​ ನಡೆಸಿದರೆ ಗೆಲುವು ಖಚಿತ ಎಂದು ಹೇಳಲಾಗಿತ್ತು. ಅದರಂತೆ ಆಸೀಸ್​ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು.

2. ಭಾರತ ತಂಡದ ಮೊತ್ತಕ್ಕಿಂತ ಮೊದಲೇ ಮೂರು ವಿಕೆಟ್​ ಕಳೆದುಕೊಂಡರೂ ಯಾವುದೇ ಗಲಿಬಿಲಿ ಮತ್ತು ಒತ್ತಡಕ್ಕೆ ಸಿಲುಕದೇ ಬ್ಯಾಟಿಂಗ್​ ನಡಸಿದ್ದು ಆಸೀಸ್​ ಗೆಲುವಿಗೆ ಇನ್ನೊಂದು ಕಾರಣ. 47 ರನ್​ಗೆ ಮೂರು ವಿಕೆಟ್​ ಬಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೆಡ್​ ಮತ್ತು ಲಬುಶೇನ್​ ಉತ್ತಮ ಇನಿಂಗ್ಸ್​ ಕಟ್ಟಿದ್ದು.

ಇದನ್ನೂ ಓದಿ IND vs AUS Final: ಭಾರತಕ್ಕೆ ಮತ್ತೆ ಕಂಟಕವಾದ ಅಂಪೈರ್; ನಿರೀಕ್ಷೆಯಂತೆ ಈ ಬಾರಿಯೂ ಸೋಲು

3. ಉತ್ಕೃಷ್ಟ ಮಟ್ಟದ ಫೀಲ್ಡಿಂಗ್​ ಕೂಡ ಆಸೀಸ್​ ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿತು. ಟ್ರಾವಿಸ್​ ಹೆಡ್​ ಅವರು ರೋಹಿತ್​ ಶರ್ಮ ಅವರ ಕ್ಯಾಚ್​ ಪಡೆದಲ್ಲಿಂದ ಪಂದ್ಯದ ಕೊನೆಯ ತನಕವೂ ಆಸೀಸ್​ ಆಟಗಾರರು ಫೀಲ್ಡಿಂಗ್​ನಲ್ಲಿ ಇಲ್ಲಿಯೂ ಕೂಡ ಸಣ್ಣ ತಪ್ಪು ಮಾಡದೆ. ಸುಮಾರು 20ರಿಂದ 30 ರನ್​ಗಳನ್ನು ಫೀಲ್ಡಿಂಗ್​ ಮೂಲಕವೇ ತಡೆದರು.

4. ಟ್ರಾವಿಸ್​ ಹೆಡ್ ಮತ್ತು ಲಬುಶೇನ್​ ಅವರು ನಡೆಸಿದ ಬೃಹತ್​ ಜತೆಯಾಟ. ಎಲ್ಲಿಯೂ ಕೂಡ ಮಿಸ್​ ಹಿಟ್ಟಿಂಗ್​ ನಡೆಸದೆ ಆಡಿದ್ದು ಕೂಡ ಆಸೀಸ್​ಗೆ ವರದಾನವಾಯಿತು.

5. ಇದೇ ಮೈದಾನದಲ್ಲಿ ಐಪಿಎಲ್ ಆಡಿದ ಅನುಭವ ಆಸೀಸ್​ ಆಟಗಾರರಿಗೆ ಕೈ ಹಿಡಿಯಿತು. ಅಲ್ಲದೆ ಭಾರತದ ಎಲ್ಲ ಆಟಗಾರರ ಪ್ಲಸ್​ ಮತ್ತು ಮೈನಸ್ ಅಂಶಗಳನ್ನು ಸರಿಯಾಗಿ ಅಧ್ಯಯನ ಮಾಡಿ ಇದಕ್ಕೆ ತಕ್ಕಂತ ಆಟ ಪ್ರದರ್ಶಿಸಿದ್ದೂ ಆಸೀಸ್​ ಮಲುಗೈಗೆ ಕಾರಣ.

Exit mobile version