Site icon Vistara News

IND vs BAN: ಭಾರತ-ಬಾಂಗ್ಲಾ ಪಂದ್ಯಕ್ಕೆ ಮಳೆ ಕಾಟ ಇದೆಯೇ?

The MCA stadium in Pune a day before hosting its first game in the 2023 ODI World Cup

ಪುಣೆ: ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭಗೊಳ್ಳಲಿರುವ ಭಾರತ ಮತ್ತು ಬಾಂಗ್ಲಾಶದೇಶ(India vs Bangladesh) ನಡುವಣ ವಿಶ್ವಕಪ್​ನ 17ನೇ ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಬಿಸಿಲಿನ ತಾಪ ಕೊಂಚ ಅಧಿಕವಾಗಿಯೇ ಇರಲಿದೆ ಎಂದು ಹೇಳಿದೆ. ಇದರಿಂದ ಮೊದಲು ಫೀಲ್ಡಿಂಗ್​​ ನಡೆಸುವ ಆಟಗಾರರು ಬಿಸಿಯ ಧಗೆಯಿಂದ ಬಳಲಲಿದ್ದಾರೆ.

ಹವಾಮಾನ ವರದಿ

ಪುಣೆಯಲ್ಲಿ ಯಾವುದೇ ಮಳೇಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಬಿಸಿಲಿನ ಧಗೆ ಹೆಚ್ಚಿರಲಿದೆ ಎಂದು ತಿಳಿಸಿದೆ. ಪಂದ್ಯ ನಡೆಯುವ ಮಧ್ಯಾಹ್ನ ಇಲ್ಲಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್​ ಇದರಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಸಂಜೆಯ ವೇಳೆ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.

ಭಾರತ ತಂಡದಲ್ಲಿ ಒಂದು ಬದಲಾವಣೆ ಖಚಿತ

ವಿರಾಟ್​ ಕೊಹ್ಲಿ, ಕನ್ನಡಿಗ ಕೆ.ಎಲ್​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಕೂಡ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಜವಾಬ್ದಾರಿಗೆ ತಕ್ಕ ಆಟವನ್ನು ಪ್ರದರ್ಶಿಸುವ ಮೂಲಕ ತಂಡಕ್ಕೆ ನೆರವಾಗುತ್ತಿರುವುದು ತಂಡದ ಪ್ಲಸ್​ ಪಾಯಿಂಟ್​. ಸದ್ಯಕ್ಕೆ ತಂಡದಲ್ಲಿರುವ ಸಮಸ್ಯೆ ಎಂದರೆ ಶಾರ್ದೂಲ್​ ಠಾಕೂರ್​ ಅವರ ಆಯ್ಕೆ. ಹೆಚ್ಚುವರಿ ಬ್ಯಾಟಿಂಗ್​ ನಿಟ್ಟಿನಲ್ಲಿ ಅವರನ್ನು ಆಯ್ಕೆ ಮಾಡಿದರೂ ಅವರಿಗೆ ಬ್ಯಾಟಿಂಗ್​ ಸಿಗುತ್ತಿಲ್ಲ. ಅಲ್ಲದೆ ಬೌಲಿಂಗ್​ನಲ್ಲಿಯೂ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕೇವಲ ಒಂದೆರಡು ಓವರ್​ಗೆ ಸೀಮಿತಗೊಳಿಸಲಾಗುತ್ತಿದೆ. ಇದರ ಬದಲು ಅನುಭವಿ ಮತ್ತು ಪೂರ್ಣಾವಧಿಯ ಬೌಲರ್​ ಆಗಿರುವ ಮೊಹಮ್ಮದ್ ಶಮಿ ಆಯ್ಕೆ ಉತ್ತಮ ಎನ್ನಲಡ್ಡಿಯಿಲ್ಲ. ಏಕೆಂದರೆ ಅವರು 10 ಓವರ್​ ಎಸೆಯಬಲ್ಲರು. ಅಲ್ಲದೆ ಹೊಸ ಚೆಂಡಿನಲ್ಲಿ ಸ್ವಿಂಗ್​ ಕೂಡ ಮಾಡಬಲ್ಲರು. ಮೂಲಗಳ ಮಾಹಿತಿ ಪ್ರಕಾರ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಸಾಧಯತೆ ಇದೆ.

ಇದನ್ನೂ ಓದಿ ICC World Cup 2023: ಕ್ರಿಕೆಟ್​ ಅಭಿಮಾನಿಗಳಿಗೆ ಬಿಗ್​ ಆಫರ್ ನೀಡಿದ ನಮ್ಮ ಮೆಟ್ರೋ

ದೊಡ್ಡ ಮೊತ್ತದ ನಿರೀಕ್ಷೆ

ಉಭಯ ತಂಡಗಳು ಕೂಡ ಸ್ಪಿನ್​ ಪಿಚ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಕಾರಣ ಈ ಪಂದ್ಯ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಬಹುದೆಂದು ನಿರೀಕ್ಷೆ ಮಾಡಬಹುದಾಗಿದೆ. ಭಾರತ ತಂಡ ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದರೂ, ಈ ಪಂದ್ಯವನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಕ್ರಿಕೆಟ್​ನಲ್ಲಿ ಏನೂ ಕೂಡ ಸಂಭವಿಸಬಹುದು ಎಂಬುದಕ್ಕೆ ಆಘ್ಘನ್​ ಮತ್ತು ನೆದರ್ಲೆಂಡ್ಸ್​ ತಂಡಗಳ ಗೆಲುವುವೇ ಉತ್ತಮ ನಿದರ್ಶನ. ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಈ ತಂಡಗಳು ಬಲಿಷ್ಠ ತಮಡಕ್ಕೆ ಸೋಲಿನ ರುಚಿ ತೋರಿಸಿತ್ತು. ಹೀಗಾಗಿ ಭಾರತೀಯ ಆಟಗಾರರು ಪ್ರತಿ ಹಂತದಲ್ಲೂ ಎಚ್ಚರಿಕೆಯ ಆಟವಾಡುವುದು ಅಗತ್ಯ.

ಬಲಾಬಲ

ಭಾರತ ಮತ್ತು ಬಾಂಗ್ಲಾದೇಶ ವಿಶ್ವಕಪ್​ನಲ್ಲಿ ಇದುವರೆಗೆ 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಮೂರು ಪಂದ್ಯಗಲ್ಲು ಗೆದ್ದರೆ, ಬಾಂಗ್ಲಾ 1 ಪಂದ್ಯ ಗೆದ್ದಿದೆ. ಇತ್ತಂಡಗಳು ವಿಶ್ವಕಪ್​ನಲ್ಲಿ ಮೊದಲು ಮುಖಾಮುಖಿಯಾಗಿದ್ದು 2007ರಲ್ಲಿ. ಈ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳ ಸೋಲು ಕಂಡಿತ್ತು. ಆಗ ರಾಹುಲ್​ ದ್ರಾವಿಡ್​ ಅವರ ನಾಯಕತ್ವ ಭಾರತ ಆಡಿತ್ತು. ಇದಾದ ಬಳಿಕ ಭಾರತ ಆಡಿದ ಮೂರು ಪಂದ್ಯಗಳಲ್ಲಿಯೂ ಗೆದ್ದು ಬೀಗಿದೆ. ಸಾರಸ್ಯವೆಂದರೆ ಈ ಬಾರಿ ದ್ರಾವಿಡ್​ ಭಾರತ ತಂಡದ ಕೋಚ್​ ಆಗಿ ಅಂದಿನ ಸೋಲಿಗೆ ಸೇಡು ತೀರಿಸುವ ಇರಾದೆಯಲ್ಲಿದ್ದಾರೆ.

Exit mobile version