Site icon Vistara News

Ind vs aus : ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ 20 ರನ್ ಜಯ, ಸರಣಿ ಕೈವಶ

Rinku Singh in 120 cricket

ರಾಯ್​ಪುರ: ಐದು ಪಂದ್ಯಗಳ ಟಿ20 ಸರಣಿಯಲ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಇದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ 2-1 ಅಂತರದಿಂದ ಭಾರತದ ಕೈವಶವಾಗಿದೆ. ಭಾರತೀಯ ಅಭಿಮಾನಿಗಳ ಪಾಲಿಗೆ ಸ್ವಲ್ಪ ಸಮಾಧಾನದ ಸಂಗತಿಯಾಗಿದೆ ಯಾಕೆಂದರೆ ಭಾರತ ತಂಡವನ್ನು ವಿಶ್ವ ಕಪ್​ ಫೈನಲ್​ಲ್ಲಿ ಸೋಲಿಸುವ ಮೂಲಕ ಆಸೀಸ್​ ತಂಡ ನಿರಾಸೆ ಮೂಡಿಸಿತ್ತು. ಇದೀಗ ಸರಣಿಯ ಟ್ರೋಫಿಯನ್ನು ಕೊಂಡೊಯ್ಯಲು ಸೂರ್ಯಕುಮಾರ್ ಯಾದವ್​ ನೇತೃತ್ವದ ತಂಡ ಬಿಡಲಿಲ್ಲ. ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಉಳಿದಿದ್ದು ಅದು ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದೆ.

ಇಲ್ಲಿನ ಶಹೀದ್ ವೀರನಾರಾಯಣ ಸಿಂಗ್​ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ.. ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 174 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ ತಮ್ಮ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್​ಗೆ 154 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಭಾರತ ತಂಡದ ಪರ ಬೌಲಿಂಗ್​ನಲ್ಲಿ ಅಕ್ಷರ್ ಪಟೇಲ್ 3 ವಿಕೆಟ್​ ಪಡೆದರೆ ದೀಪಕ್​ ಚಾಹರ್ 2 ವಿಕೆಟ್​ ಉರುಳಿಸಿದರು. ಭಾರತ ತಂಡ ಹೈದರಾಬಾದ್ ಹಾಗೂ ತಿರುವನಂತಪುರದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಗೆದ್ದಿದ್ದರೆ ಆಸ್ಟ್ರೇಲಿಯಾ ತಂಡ ಗುವಾಹಟಿಯಲ್ಲಿ ಗೆಲುವು ಕಂಡಿತ್ತು. ಅಂದ ಹಾಗೆ ಆಸ್ಟ್ರೇಲಿಯಾ ತಂಡದ ಮ್ಯಾಕ್ಸ್​ವೆಲ್​ ಸೇರಿದಂತೆ ಪ್ರಮುಖ ಬ್ಯಾಟರ್​ಗಳು ಇಲ್ಲದಿರುವುದು ಕೂಡ ಭಾರತ ತಂಡಕ್ಕೆ ಲಾಭ ಎನಿಸಿತು.

ಇದನ್ನೂ ಓದಿ : ind vs Aus : ಸೂರ್ಯಕುಮಾರ್ ಪಡೆ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ ವಿಶ್ವ ದಾಖಲೆ ಖಚಿತ

ಭಾರತ ತಂಡ ಸಾಧಾರಣ ಮೊತ್ತ ಪೇರಿಸಿದ್ದ ಕಾರಣ ಗೆಲುವು ಸುಲಭ ಎಂದು ಅಂದುಕೊಂಡಿರಲಿಲ್ಲ. ಆದರೆ, ಭಾರತದ ಸ್ಪಿನ್ನ್ ಬೌಲರ್​ಗಳು ಅದನ್ನು ಸಾಧ್ಯವಾಗಿಸಿದರು. ಕೊನೇ ಹಂತದಲ್ಲಿ ಬಿಗಿಯಾದ ಬೌಲಿಂಗ್ ಸಂಘಟಿಸಿ ಗೆಲುವು ತನ್ನದಾಗಿಸಿಕೊಂಡಿತು. ಆಸೀಸ್ ಪರ ನಾಯಕ ಮ್ಯಾಥ್ಯೂ ವೇಡ್​ 36 ರನ್ ಬಾರಿಸಿದರೆ, ಮ್ಯಾಥ್ಯೂ ಶಾರ್ಟ್ಸ್​​ 22 ರನ್ ಕೊಡುಗೆ ಕೊಟ್ಟರು. ಆರಂಭಿಕ ಬ್ಯಾಟರ್​ ಟ್ರಾವಿಸ್ ಹೆಡ್​ ಅಬ್ಬರದ 31 ರನ್ ಬಾರಿಸಿ ಭಯ ಹುಟ್ಟಿಸಿದ್ದರು.

ರಿಂಕು, ಜಿತೇಶ್ ನೆರವು

ಭಾರತ ತಂಡದ ಬ್ಯಾಟಿಂಗ್ ಆರಂಭ ಹಿಂದಿನ ಎರಡು ಪಂದ್ಯಗಳಷ್ಟು ಅಬ್ಬರ ಇರಲಿಲ್ಲ. ಮೊದಲ ಓವರ್​ನಲ್ಲಿ ಕೇವಲ 1 ರನ್ ಮಾತ್ರ ಬಂತು. ಆ ಬಳಿಕ ಆರಂಭಿಕ ಬ್ಯಾಟರ್​ 28 ಎಸೆತಗಳಲ್ಲಿ 37 ರನ್ ಬಾರಿಸಿದರು. ಅವರ ಪ್ರಯತ್ನದಿಂದಾಗಿ ಭಾರತದ ಸ್ಕೋರ್ ಬೋರ್ಡ್​ ನಿಧಾನಕ್ಕೆ ಹಿಗ್ಗಿತು. ಆ ಬಳಿಕ ತಪ್ಪು ಹೊಡೆದ ಹೊಡೆದ ಜೈಸ್ವಾಲ್ ಔಟ್ ಆದರು. ನಾಲ್ಕನೇ ಪಂದ್ಯಕ್ಕೆ ತಂಡಕ್ಕೆ ಪ್ರವೇಶ ಪಡೆದ ಶ್ರೇಯಸ್​ ಅಯ್ಯರ್​ 8 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಸೂರ್ಯಕುಮಾರ್​ ಯಾದವ್ ಕೂಡ ಒಂದು ರನ್​ ಮಾಡಿ ಔಟಾಗುವ ಮೂಲಕ ಭಾರತ ತಂಡದ ಮೇಲೆ ಒತ್ತಡ ಬಿತ್ತು.

ಮೂರನೇ ವಿಕೆಟ್​ ಪತನಗೊಂಡ ಬಳಿಕ ಆಡಲು ಬಂದ ರಿಂಕು ಸಿಂಗ್ ಭರವಸೆ ಮೂಡಿಸಿದರು. ಆದರೆ, ಈ ವೇಳೆ ಋತುರಾಜ್ ಗಾಯಕ್ವಾಡ್​ 32 ರನ್ ಮಾಡಿ ಔಟಾದರು. ಹೀಗಾಗಿ 111 ರನ್​ಗಳಿಗೆ 4 ವಿಕೆಟ್​ ಉರುಳಿತು. ಆಡುವ ಅವಕಾಶ ಪಡೆದ ಜಿತೇಶ್​ ಶರ್ಮಾ ಹಾಗೂ ರಿಂಕು ಸಿಂಗ್ 57 ರನ್​ಗಳ ಜತೆಯಾಟವಾಡಿದರು. ಹೀಗಾಗಿ ಭಾರತಕ್ಕೆ ಸ್ಪರ್ಧತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಕೊನೇ ಹಂತದಲ್ಲಿ ಸತತವಾಗಿ ವಿಕೆಟ್ ಕಳೆದದುಕೊಂಡ ಭಾರತ 200 ರನ್​ಗಳ ಸನಿಹ ಮೊತ್ತವನ್ನು ಹೆಚ್ಚಿಸುವ ಅವಕಾಶ ಕಳೆದುಕೊಂಡರು. ಅಕ್ಷರ್ ಪಟೇಲ್ ಹಾಗೂ ದೀಪಕ್ ಚಾಹರ್ ಶೂನ್ಯಕ್ಕೆ ಔಟಾದರು.

Exit mobile version