Site icon Vistara News

India vs Sri Lanka Final: ಫೈನಲ್​ ಪಂದ್ಯಕ್ಕೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ ಖಚಿತ

Colombo Weather

ಕೊಲಂಬೊ: ಇಂದು ನಡೆಯುವ ಏಷ್ಯಾಕಪ್​ನ(Asia Cup 2023 Final) ಭಾರತ ಮತ್ತು ಶ್ರೀಲಂಕಾ(India vs Sri Lanka Final) ನಡುವಣ ಫೈನಲ್​ ಪಂದ್ಯವನ್ನು ನೋಡಲು ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆಯಾಗುವುದು ಖಚಿತ. ಇದಕ್ಕೆ ಕಾರಣ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ. ಕೊಲಂಬೊದಲ್ಲಿ(Colombo) ಇಂದು ಶೇ.69 ರಿಂದ ಶೇ.75 ರಷ್ಟು ಮಳೆಯಾಗಲಿದೆ(rain forecast) ಎಂದು ತಿಳಿಸಿದೆ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆಯಾಗುವ ಸಾಧ್ಯತೆ ಅಧಿಕವಾಗಿದೆ. ಪಂದ್ಯ ರದ್ದಾದರೆ ಮೀಸಲು ದಿನಕ್ಕೆ ವಿಸ್ತರಿಸಲ್ಪಡುತ್ತದೆ.

ಶನಿವಾರ ರಾತ್ರಿಯೂ ಕೊಲಂಬೊದಲ್ಲಿ ಸಾಧಾರಣ ಮಳೆಯಾಗಿದೆ. ಶುಕ್ರವಾರ ನಡೆದ ಭಾರತ ಮತ್ತು ಬಾಂಗ್ಲಾ ನಡುವಿನ ಪಂದ್ಯವನ್ನು ಹೊರತುಪಡಿಸಿ ಉಳಿದ ಎಲ್ಲ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಸದ್ಯ ಹವಾಮಾನ ಇಲಾಖೆ ನೀಡಿದ ವರದಿಯ ಪ್ರಕಾರ ಭಾನುವಾರ ಶೇ.69ರಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ. ಹೀಗಾಗಿ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗುವುದು ಖಚಿತ ಎನ್ನಲಡ್ಡಿಯಿಲ್ಲ. ಡಕ್​ವರ್ತ್​ ಲೂಯಿಸ್ ನಿಯಮ ಜಾರಿಗೆ ಬಂದರೆ ಚೇಸಿಂಗ್​ ನಡೆಸುವುದು ಕಷ್ಟಕರ ಹೀಗಾಗಿ ಟಾಸ್​ ಗೆದ್ದ ತಂಡ ಬ್ಯಾಟಿಂಗ್​ ಆಯ್ದುಕೊಳ್ಳಬಹುದು.

ಮೀಸಲು ದಿನ

ಸೆಪ್ಟೆಂಬರ್​ 10ರಂದು ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ಪೈಪೋಟಿಗೆ ಮಾತ್ರ ಮೀಸಲು ದಿನ ನಿಗದಿಪಡಿಸಲಾಗಿತ್ತು. ಇದು ಬಾರಿ ಚರ್ಚೆಗೂ ಕಾರಣವಾಗಿತ್ತು. ಇದನ್ನು ಶ್ರೀಲಂಕಾ ಮತ್ತು ಬಾಂಗ್ಲಾದೇಶ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಫೈನಲ್​ ಪಂದ್ಯಕ್ಕೂ ಮೀಸಲು ದಿನ ನಿಗದಿಯಾಗಿದೆ. ಒಂದೊಮ್ಮೆ ಮಳೆ ಬಂದರೆ ಪಂದ್ಯ ಮೀಸಲು ದಿನದಂದು ನಡೆಯಲಿದೆ. ಸೋಮವಾರ ಮೀಸಲು ದಿನವಾಗಿದೆ.

ಮೀಸಲು ದಿನ ಬಳಕೆ ಹೇಗೆ

ಮಳೆಯಿಂದಾಗಿ ಭಾನುವಾರ ಪಂದ್ಯ ನಡೆಯದೇ ಹೋದರೆ, ಅಂದರೆ ಮೊದಲ ಇನಿಂಗ್ಸ್​ ಮುಗಿದು ದ್ವಿತೀಯ ಇನಿಂಗ್ಸ್​ನಲ್ಲಿ ಕನಿಷ್ಠ 20 ಓವರ್‌ ಆಟವೂ ಸಾಧ್ಯವಾಗದೆ ಇದ್ದರೆ ಆಗ ಮೀಸಲು ದಿನವನ್ನು ಬಳಕೆ ಮಾಡಲಾಗುತ್ತದೆ. ಪಂದ್ಯ ಯಾವ ಹಂತದಲ್ಲಿ ಸ್ಥಗಿತಗೊಂಡಿರುತ್ತದೆಯೋ ಅಲ್ಲಿಂದಲೇ ಸೋಮವಾರದಂದು ಪಂದ್ಯ ಮುಂದುವರಿಯಲಿದೆ. ಇದಲ್ಲದೆ ಭಾನುವಾರದ ಪಂದ್ಯ ಮೀಸಲು ದಿನಕ್ಕೆ ಹೋದರೆ ಆಗ ಅಭಿಮಾನಿಗಳು ಬೇರೆ ಟಿಕೆಟ್‌ ಪಡೆಯುವ ಅವಶ್ಯಕತೆ ಇಲ್ಲ. ಬದಲಾಗಿ ಹಳೆಯ ಟಿಕೆಟ್​ ಬಳಸಿ ಕ್ರೀಡಾಂಗಣಕ್ಕೆ ಆಗಮಿಸಬಹುದು ಎಂದು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ತಿಳಿಸಿದೆ.

ಇದನ್ನೂ ಓದಿ Asian Games 2023 : ಏಷ್ಯನ್​ ಗೇಮ್ಸ್​ಗೆ ಸಜ್ಜಾಗುತ್ತಿದ್ದ ಭಾರತ ತಂಡಕ್ಕೆ ಆಘಾತ, ವೇಗದ ಬೌಲರ್​ಗೆ ಗಾಯ

ರೋಹಿತ್​ಗೆ ಅಗ್ನಿ ಪರೀಕ್ಷೆ

ಏಷ್ಯಾಕಪ್​ನಲ್ಲಿ 7 ಬಾರಿಯ ಚಾಂಪಿಯನ್ ಆಗಿರುವ ಭಾರತ ತಂಡಕ್ಕೆ 2023ರ ನಿರ್ಣಾಯಕ ವಿಶ್ವಕಪ್​ಗೆ ಮುಂಚಿತವಾಗಿ ನಡೆಯುವ ಅಗ್ನಿಪರೀಕ್ಷೆ ಇದಾಗಿದೆ. ಇಲ್ಲಿ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದ ಮೇಲೆ ವಿಶ್ವಕಪ್​ ಭವಿಷ್ಯ ನಿರ್ಧರವಾಗಲಿದೆ. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್​​ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಈ ಬಾರಿಯೂ ಅವರ ನಾಯಕತ್ವದಲ್ಲಿ ಗೆದ್ದರೆ ವಿಶ್ವ ಕಪ್​ನಲ್ಲಿ ಭಾರತ ತಂಡದ ಮೇಲೆ ನಿರಿಕ್ಷೆಯೊಂದನ್ನು ಮಾಡಬಹುದಾಗಿದೆ.

8 ಬಾರಿ ಫೈನಲ್​ ಮುಖಾಮುಖಿ

ಕಳೆದ 15 ಆವೃತ್ತಿಯ ಇತಿಹಾಸದಲ್ಲಿ(Asia Cup history) ಭಾರತ ತಂಡವೇ ಪಾರುಪತ್ಯ ಸಾಧಿಸಿದೆ. ಒಟ್ಟು 7 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಶ್ರೀಲಂಕಾ 6 ಬಾರಿ ಗೆದ್ದಿದೆ. ಉಭಯ ತಂಡಗಳು ಏಷ್ಯಾಕಪ್​ ಇತಿಹಾಸದಲ್ಲಿ ಒಟ್ಟು 7 ಬಾರಿ ಫೈನಲ್​ ಮುಖಾಮುಖಿಯಾಗಿವೆ. ಭಾರತ 4 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದರೆ. ಶ್ರೀಲಂಕಾ 3 ಬಾರಿ ಗೆದ್ದು ಬೀಗಿದೆ. ಭಾರತ ಚೊಚ್ಚಲ ಏಷ್ಯಾಕಪ್​ ಗೆದ್ದಿದ್ದು ಕೂಡ ಲಂಕಾ ವಿರುದ್ಧವೇ. ಯುಎಇಯಲ್ಲಿ ನಡೆದ 1984ರ ಈ ಫೈನಲ್​ನಲ್ಲಿ ಭಾರತ ಸುನೀಲ್‌ ಗಾವಸ್ಕರ್‌ ನಾಯಕತ್ವದಲ್ಲಿ ಕಪ್​ ಗೆದ್ದಿತ್ತು.

Exit mobile version